7:54 AM Friday31 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ಲಕುಮಿ ಸಿನಿ ಕ್ರಿಯೇಶನ್ಸ್ ನ ‘ಅಕ್ಷಮ್ಯ’ ಕನ್ನಡ ಚಿತ್ರದ ಟೀಸರ್ ಬಿಡುಗಡೆ: ಮಂಗಳೂರು ಪೊಲೀಸ್ ಕಮಿಷನರ್ ಚಾಲನೆ

08/09/2021, 19:09

ಮಂಗಳೂರು(reporterkarnataka.com) : ಲಕುಮಿ ಸಿನಿ ಕ್ರಿಯೇಶನ್ಸ್ ಅರ್ಪಿಸುವ, ಶ್ರೀನಿವಾಸ್ ವಿ. ಶಿವಮೊಗ್ಗ ನಿರ್ದೇಶನ ಹಾಗೂ ಲ. ಕಿಶೋರ್ ಡಿ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದ “ಅಕ್ಷಮ್ಯ” ಕನ್ನಡ ಚಲನಚಿತ್ರದ ಟೀಸರ್ (ಆಫಿಷಿಯಲ್ ಟ್ರೈಲರ್) ಬಿಡುಗಡೆ ಕಾರ್ಯಕ್ರಮ ನಗರದ ಮಾಲೆಮಾರ್ ಸಮೀಪದ ಎಸ್‌ಡಿಎಂ ಫಿಲ್ಮ್  ಸ್ಟುಡಿಯೋದಲ್ಲಿ ಬುಧವಾರ ನೆರವೇರಿತು.

ಮಂಗಳೂರು ನಗರ ಪೊಲೀಸ್ ಅಯುಕ್ತ ಎನ್. ಶಶಿಕುಮಾರ್ ಅವರು ಟೀಸರ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭಕೋರಿದರು. ಪೊಲೀಸ್ ಇಲಾಖೆ ಸಂಪರ್ಕಾಧಿಕಾರಿ ಗೋಪಾಲಕೃಷ್ಣ ಕೆ., ಚಿತ್ರದ ನಿರ್ದೇಶಕ ಶ್ರೀನಿವಾಸ್ ಶಿವಮೊಗ್ಗ, ನಿರ್ಮಾಪಕ ಕಿಶೋರ್ ಡಿ ಶೆಟ್ಟಿ, ಸಹ ನಿರ್ಮಾಪಕರಾದ ಮೋಹನ್ ಕೊಪ್ಪಲ ಕದ್ರಿ, ಪ್ರಭು ಉಡುಪಿ, ಲೋಹಿತ್ ಶೆಟ್ಟಿ, ಸಂಗೀತ ನಿರ್ದೇಶಕ ರೂಬಿ ಜೋಸ್, ಸಂಕಲನಕಾರ ರಾಹುಲ್‌ ವಸಿಷ್ಠ, ಎಸ್ ಡಿಎಂ ಸ್ಟೂಡಿಯೋ ನಿರ್ದೇಶಕ ವಿಜಯ್ ಕುಮಾರ್, ಜೆಸ್ಸಿ ಸೆಬೇಸ್ಟಿನ್  ಹಾಗೂ ನಾಯಕ‌ ನಟ‌ ಪ್ರಕಾಶ್ ಶೆಟ್ಟಿ, ಕಲಾವಿದರಾದ ಅರುಣ್ ಬಿ.ಸಿ.ರೋಡ್, ಹರೀಶ್ ಬಂಗೇರ, ವಿನಾಯಕ್ ಜಪ್ಪು, ವಿಶ್ವಾಸ್ ಗುರುಪುರ, ಸುನೀಲ್ ಅಶೋಕ್ ನಗರ, ಲತೀಫ್ ಸಾಣೂರ್, ಗಣೇಶ್ ರೈ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.   

ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.
ಯುವಪ್ರತಿಭೆಗಳಿಗೆ ಅವಕಾಶ ನೀಡುವ “ಲಕುಮಿ” ತಂಡ : ಸದಾ ಯುವಪ್ರತಿಭೆಗಳಿಗೆ ಅವಕಾಶ ನೀಡುವ ಲಕುಮಿ ಬ್ಯಾನರ್ ಈ ಬಾರಿಯು ಯುವ ನಿರ್ದೇಶಕನಿಗೆ ಅವಕಾಶವನ್ನು ಕಲ್ಪಿಸಿದೆ. ನಮ್ಮ ಕುಡ್ಲ ಚಿತ್ರದ ಮೂಲಕ ತುಳುಚಿತ್ರರಂಗಕ್ಕೆ ಪರಿಚಯಗೊಂಡ ಯುವ ನಾಯಕನಟ ಪ್ರಕಾಶ ಶೆಟ್ಟಿ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ.

ಯುವ ಛಾಯಾಗ್ರಹಕ ಅವಿನಾಶ್ ಕಾವೂರು ಕ್ಯಾಮರಾದಲ್ಲಿ ಕೈಚಳಕ ತೋರಿಸಿದ್ದಾರೆ. ಇನ್ನು ಚಿತ್ರದಲ್ಲಿ ತುಳುರಂಗಭೂಮಿಯ ಹೆಸರಾಂತ ಕಲಾವಿದ ಅರುಣ್ ಚಂದ್ರ ಬಿ.ಸಿ. ರೋಡ್, ಹರೀಶ್ ಬಂಗೇರ ಆರ್ಲಪದವು ಹಾಗೂ ಕಿರುತೆರೆ ನಟಿ ಸ್ವಾತಿ ಪ್ರಮುಖ ಪಾತ್ರದಲ್ಲಿ  ಅಭಿನಯಿಸಿದ್ದಾರೆ. ಲತೀಪ್ ಸಾಣೂರ್, ಸುರೇಶ್ ಮಂಜೇಶ್ವರ್, ರಾಜೇಶ್ ಸ್ಕೈಲಾರ್ಕ್, ವಿಶ್ವಾಸ್ ಗುರುಪುರ, ಪ್ರಿಯಾಂಕಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಇತರ ಕಲಾವಿದರು.

ಚಿತ್ರಕ್ಕೆ ರೂಬಿ ಜೋಸ್  ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದು, ಯುವ ಸಂಕಲನಕಾರ ರಾಹುಲ್ ವಸಿಷ್ಠ ಸಂಕಲನಕಾರನಾಗಿ ತಮ್ಮ ಕೈಚಲಕ ತೋರಿಸಿದ್ದಾರೆ. ತುಳಸಿದಾಸ್ ಮಂಜೇಶ್ವರ, ಮನೋಜ್ ಉಜಿರೆ, ಗಣೇಶ್ ರೈ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು