7:17 AM Friday31 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ: ಬಾಲ ಪ್ರತಿಭೆಗಳಾದ ಲಾಲಿತ್ಯ, ಪೂರ್ವಿ ಕಟೀಲು ಆಗಸ್ಟ್ ತಿಂಗಳ ಟಾಪರ್

08/09/2021, 21:56

ಮಂಗಳೂರು(reporterkarnataka.com):

ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಲಾಲಿತ್ಯ ಕುಮಾರ್ ಹಾಗೂ ಪೂರ್ವಿ ಕಟೀಲ್ ಆಯ್ಕೆಗೊಂಡಿದ್ದಾರೆ.

ಲಾಲಿತ್ಯ ಕುಮಾರ್ ಹುಟ್ಟಿದು ಶಿಲ್ಪ ಕಲೆಗಳ ತವರೂರಾದ ಬೇಲೂರಿನಲ್ಲಿ. 3 ವರ್ಷದಿಂದಲೇ ಭರತನಾಟ್ಯ, ಸಂಗೀತ ಅಭ್ಯಾಸ ಮಾಡುವುದರ ಜತೆಗೆ ಕರಾಟೆ ಕೂಡ ಕಲಿಯುತ್ತಿದ್ದಾಳೆ. 

ಭರತನಾಟ್ಯವನ್ನು ವಿಶೇಷ ರೀತಿಯಲ್ಲಿ ನೃತ್ಯ ಕರಗತ ಮಾಡಿಕೊಂಡಿದ್ದಾಳೆ. ಪುಟ್ಟ ವಯಸ್ಸಿನಲ್ಲಿಯೇ ಹಲವು ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿಯೂ ನೃತ್ಯ ಪ್ರದರ್ಶನ ನೀಡಿ ಹಲವಾರು ಪ್ರೇಕ್ಷಕರ ಮನ ಗೆದ್ದಿದ್ದಾಳೆ.

ನಾಟ್ಯ ಶಾಂತಲೇ ಪುರಸ್ಕಾರ ಸತತ ಎರಡು ಬಾರಿ ಪಡೆದಿದ್ದಾಳೆ. ಅಷ್ಟೇ ಅಲ್ಲದೆ ನಾಟ್ಯ ಚತುರೆ, ನಾಟ್ಯ ಶಿಲ್ಪ, ನಂದಿ ಅವಾರ್ಡ್, ಒನಕೆ ಓಬ್ಬವ್ವ ಪ್ರಶಸ್ತಿ, ಕರುನಾಡ ಕಣ್ಮಣಿ, ಮಂಜುನಾಥ ರಾಷ್ಟ್ರೀಯ. ಪ್ರಶಸ್ತಿ, ಕಲಾರತ್ನ ರಾಷ್ಟ್ರೀಯ ಪ್ರಶಸ್ತಿ, ಕ್ಲಾಸಿಕಲ್ ಐಕಾನ್ ಪ್ರಶಸ್ತಿ, ರಾಷ್ಟೀಯ ನಾಟ್ಯ ಕರಾವಳಿ ಪ್ರಶಸ್ತಿ, ವಾಯ್ಸ್ ಆಫ್ ಆರಾಧನಾ ಅವಾರ್ಡ್  ಹೀಗೆ ಇನ್ನು ಹಲವಾರು ಪ್ರಶಸ್ತಿ ಪಡೆದಿದ್ದಾಳೆ.

ಪುಟ್ಟ ವಯಸ್ಸಿನಲ್ಲಿಯೇ ಸುಮಾರು 8 ರೆಕಾರ್ಡ್ ಗಳನ್ನು ಸಹ ತನದಾಗಿಸಿಕೊಂಡಿದ್ದಾಳೆ

ಪೂರ್ವಿ ಕಟೀಲು 10ನೇ ತರಗತಿ ವಿದ್ಯಾರ್ಥಿನಿ. ಮುಲ್ಕಿ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಿಕ್ಷಣ ಪಡೆಯುತ್ತಿದ್ದಾಳೆ. ತಂದೆ  ಕುಮಾರ್ ಡಿ. ಶೆಟ್ಟಿ  ಹಾಗೂ ತಾಯಿ ರೇಣುಕಾ ಕೆ. ಶೆಟ್ಟಿ.

ಕಿಲ್ಪಾಡಿ ವಿದ್ಯಾ ಪೀಠದಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತಿರುವ ಪೂರ್ವಿ ಒಂದು ವರುಷ ಯಕ್ಷಗಾನ ಕಲಿತು ಲಿಂಗಪ್ಪಯ್ಯಕಾಡಿನಲ್ಲಿ ಸ್ಟೇಜ್ ಪೋಗ್ರಾಮ್ ಕೊಟ್ಟಿದ್ದಾಳೆ. ವಿದ್ಯಾಶ್ರೀ ರಾಧಾಕೃಷ್ಣ ಅವರಿಂದ ಮೂರು ವರುಷದಿಂದ ಭರತನಾಟ್ಯ ಕಲಿಯುತ್ತಿದ್ದಾಳೆ. ಶಿಮಂತೂರು, ಗಿಡಿಗೆರೆ, ತೋಕೂರು ಇನ್ನೂ ಹಲವಾರು ಕಡೆ ಸ್ಟೇಜ್ ಪ್ರೋಗ್ರಾಮ್ ಕೊಟ್ಟಿದ್ದಾಳೆ. ಸಂಗೀತ ಈಕೆಯ ಕನಸು. ಅದರದಲ್ಲಿ ತುಂಬಾ ಆಸಕ್ತಿ ಇದೆ. ಒಂದು ವರುಷ ಕಲಿತು ಅದನ್ನೇ ಮುಂದುವರಿಸಬೇಕೆಂಬ ಆಸೆ ಈಕೆಯದು.

ಇತ್ತೀಚಿನ ಸುದ್ದಿ

ಜಾಹೀರಾತು