ಇತ್ತೀಚಿನ ಸುದ್ದಿ
ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ
27/07/2026, 22:27
ನವದೆಹಲಿ(reporterkarnataka.com): ಸಂಸತ್ತಿನ ಉಭಯ ಅಧಿವೇಶನ ಆರಂಭವಾಗಿದು, ವಿದ್ಯಾರ್ಥಿಗಳ ಮೇಲಿನ ಹಲ್ಲೆ ಕುರಿತು ಗದ್ದಲ ಉಂಟು ಮಾಡುತ್ತಿದ್ದು ಎರಡು ಭಾರಿ ಇಂದಿನ ಕಲಾಪ ಮುಂದೂಡಲಾಗಿದೆ.
ರಾಜ್ಯಸಭಾ ಅಧಿವೇಶನದ ಆರಂಭದಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಾ ಸಾರ್ವಜನಿಕ ಪ್ರಾಮುಖ್ಯತೆಯ ವಿಚಾರದ ಬಗ್ಗೆ ಪ್ರಸ್ತಾಪ ಎತ್ತಿದರು. ಆದರೆ ಇದಕ್ಕೆ ಸಭಾಪತಿಗಳು ಮಧ್ಯಪ್ರವೇಶಿಸುತ್ತಿದ್ದಂತೆಯೇ ಖರ್ಗೆ ಅವರು “ಭಾರತದ ಇತಿಹಾಸದಲ್ಲೇ ಎಂದೂ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆಸಲಾಗಿಲ್ಲ” ಎಂದು ಹೇಳಿದರು.













