7:23 AM Tuesday15 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಬಾಣದ ವಂಶಸ್ಥ ಕುಟುಂಬದವರಿಂದ ಶ್ರೀಊರಮ್ಮದೇವಿಗೆ ಶ್ರಾವಣ ಪರ್ವ ಪ್ರಸಾದ ಸೇವೆ

13/08/2024, 21:24

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಗ್ರಾಮ ದೇವತೆ ಶ್ರೀಊರಮ್ಮ ದೇವಿಗೆ, ಶ್ರಾವಣ ಮಾಸದ ಮಂಗಳವಾರ ಪ್ರಯುಕ್ತ ಪ್ರಸಾದ ಪರ್ವ ಜರುಗಿತು.


ಪಟ್ಟಣದ 16ನೇ ವಾರ್ಡ್ ನಿವಾಸಿಗಳಾದ ವಾಲ್ಮೀಕಿ ಸಮುದಾಯದ” ಬಾಣದ ಮನೆತನದ” ಕುಟುಂಬಸ್ಥರಿಂದ, ಶ್ರೀಊರಮ್ಮ ದೇವಿಯ ಭಕ್ತ ಮಂಡಳಿಯ ಸಹಯೋಗದೊಂದಿಗೆ ನಡೆಯಿತು. ಶ್ರೀಊರಮ್ಮ ದೇವಿಗೆ ಶ್ರ‍ಾವಣ ಪರ್ವ ವಿಶೇಷ ಪೂಜೆ, ಪರ್ವ ಪ್ರಸಾದ ಸೇವೆ ನೆರವೇರಿಸಲಾಯಿತು. ಬಾಣದ ವಂಶಸ್ಥ ಕುಟುಂಬದವರು, ಹಲವು ವರ್ಷಗಳಿಂದ ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಸಾರ್ವಜನಿಕರಿಗೆ ಪರ್ವ ಪ್ರಸಾದ ಸೇವೆ ಜರುಗಿಸುತ್ತಾರೆ. ವಾಲ್ಮೀಕಿ ಸಮುದಾಯದ ಬಾಣದ ವಂಸ್ಥರ ಕುಟುಂಬದವರು ಸಾಮೂಹಿಕವಾಗಿ ಸಹಭಾಗಿತ್ವದೊಂದಿಗೆ, ಪ್ರತಿ ವರ್ಷದ ಶ್ರಾವಣ ಮಾಸದ ಮಂಗಳವಾರದಂದು. ಶ್ರೀಊರಮ್ಮದೇವಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಪರ್ವ ಪ್ರಸಾದ ಸೇವೆ ನೆರವೇರಿಸುತ್ತಿದ್ದಾರೆ, ಅಂತೆಯೇ ಇಂದು ಶ್ರ‍ವಣ ಮಾಸದ ಮಂಗಳವಾರದಂದು ಗ್ರಾಮದೇವತೆ ಶ್ರೀಊರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ. ವಿಶೇಷ ಪರ್ವ ಪ್ರಸಾದ ಸೇವೆ ಏರ್ಪಡಿಸಲಾಗಿತ್ತು, ಪ್ರಸಾದ ಸಂದರ್ಭದಲ್ಲಿ ಪಟ್ಟಣದ ನೂರಾರು ಭಕ್ತರು ಸೇರಿದಂತೆ. ಸುತ್ತ ಮತ್ತಲಿನ ಕೆಲವು ಗ್ರಾಮಗಳಲ್ಲಿನ ನೂರಾರು ಭಕ್ತರು, ನಾಗರೀಕರು ಹಿರಿಯರು ಮಹಿಳೆಯರು ಮಕ್ಕಳು. ಶ್ರೀಊರಮ್ಮ ದೇವಿಯ ದರ್ಶನ ಪಡೆದು ನಂತರ, ದೇವಸ್ಥಾನದ ಆವರಣದಲ್ಲಿನ ಪರ್ವದಲ್ಲಿ ಭಾಗವಿಹಿಸಿ ಪ್ರಸಾದ ಸ್ವೀಕರಿಸಿದರು. ಬಾಣದ ಮನೆತನದ ಕುಟುಂಬಸ್ಥರು ಎಲ್ಲಾ ಹಿರಿಯರು, ಅವರ ನೆಂಟರು ಬಂಧು ಬಳಗ ಸ್ನೇಹಿತರು ಹಿತೈಷಿಗಳು. ಶ್ರೀಊರಮ್ಮ ದೇವಿಯ ಭಕ್ತ ಮಂಡಳಿಯ ಸಹಯೋಗದೊಂದಿಗೆ, ಪ್ರಸಾದ ಪರ್ವದಲ್ಲಿ ಸಕ್ತೀಯವಾಗಿ ಪಾಲ್ಗೊಂಡು, ಪರ್ವ ಪ್ರಸಾದ ಸೇವೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು