5:03 AM Thursday30 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ಬೆವನೂರು ಶ್ರೀ ಸುಕ್ಷೇತ್ರ ಅಮೋಘ ಸಿದ್ದೇಶ್ವರ ಪಲ್ಲಕ್ಕಿ ಉತ್ಸವ: ಕರಕರಮುಂಡಿ ಸಮುದಾಯದಿಂದ ಸಿಡಿಗಾಯಿ ಸೇವೆ

20/08/2024, 14:36

ಶಿವರಾಯ ಕರಕರಮುಂಡಿ ಬೆಳಗಾವಿ

info.reporterkarnataka@gmail.com

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೆವನೂರು ಗ್ರಾಮದ ಶ್ರೀ ಸುಕ್ಷೇತ್ರ ಅಮೋಘ ಸಿದ್ದೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಹಲ್ಯಾಳ ಗ್ರಾಮದ ಕರಕರಮುಂಡಿ ಸಮುದಾಯದವರು ಪ್ರತಿ ವರ್ಷದಂತೆ ಈ ವರ್ಷವೂ
ಬಹಳಷ್ಟು ಅದ್ದೂರಿಯಾಗಿ ಸರಿ ಸುಮಾರು ಎರಡರಿಂದ – ಎರೆಡೂವರೆ ಸಾವಿರ ತೆಂಗಿನಕಾಯಿಗಳನ್ನು ಸಿಡಿಗಾಯಿ ಒಡೆದು ಸೇವೆ ಸಲ್ಲಿಸಿದರು.
ಹಲ್ಯಾಳ ಗ್ರಾಮದಲ್ಲಿ ಪ್ರತಿ ವರ್ಷದ ಕೊನೆಗೆ ಬರುವ ಶ್ರಾವಣ ಮಾಸದ ಮೂರನೇ ಶ್ರಾವಣ ಸೋಮವಾರದ ನಿಮಿತ್ಯ ಹಲ್ಯಾಳ ಗ್ರಾಮದ ಕೃಷ್ಣಾ ನದಿ ತೀರಕ್ಕೆ ಸ್ನಾನಕ್ಕೆ ಬರುವ ಅಥಣಿ ತಾಲೂಕಿನ ಬೆವನೂರು ಗ್ರಾಮದ ಶ್ರೀ ಸುಕ್ಷೇತ್ರ ಅಮೋಘಸಿದ್ದೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಹಲ್ಯಾಳ ಗ್ರಾಮದ ಕರಕರಮುಂಡಿ ಸಮುದಾಯದವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬಹಳಷ್ಟು ಅದ್ದೂರಿಯಾಗಿ ಸರಿ ಸುಮಾರು ಎರಡರಿಂದ – ಎರೆಡುವರೇ ಸಾವಿರ ತೆಂಗಿನಕಾಯಿಗಳನ್ನು ಸಿಡಿಗಾಯಿ ಒಡೆಯುವ ರೂಪದಲ್ಲಿ ಒಡೆದು ಪಲ್ಲಕಿ ಜೊತೆಗೆ ಬರುವ ಸರ್ವ ಭಕ್ತರಿಗೂ ಅಣ್ಣ ಪ್ರಸಾದದ ವ್ಯವಸ್ಥೆ ಮಾಡಿಸಿದರು.
ಗ್ರಾಮದ ಪ್ರಮುಖರಾದ ಹಣಮಂತ ಕರಕರಮುಂಡಿ •ಮನೋಹರ ಕರಕರಮುಂಡಿ, ಸೋಮಣ್ಣ ಕೋಳಿ, ಅಂಬಣ್ಣ ಕರಕರಮುಂಡಿ, ಮಾದೇವ ಕೋಳಿ, ಲಕ್ಷ್ಮಣ ಕರಕರಮುಂಡಿ ಎಲ್ಲ ಹಿರಿಯರು ಸೇರಿಕೊಂಡು ಪಲ್ಲಕ್ಕಿ ಉತ್ಸವದಿಂದ ನಡೆಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು