12:46 AM Tuesday28 - July 2026
ಬ್ರೇಕಿಂಗ್ ನ್ಯೂಸ್
ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ… ಕುಶಾಲನಗರ: ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಯಶಸ್ವಿ ಕಾರ್ಯಾಚರಣೆ

ಇತ್ತೀಚಿನ ಸುದ್ದಿ

ತುಳುನಾಡಿನ ಪೆಲತರಿಗೆ ಬಂತು ಬಂಗಾರದ ಬೆಲೆ: ಆನ್ ಲೈನ್ ನಲ್ಲಿ ಬರಲಿದೆ ನಿಮ್ಮ ಮನೆ ಬಾಗಿಲಿಗೆ !!

29/06/2021, 07:56

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com

ಮಂಗಳೂರು(reporterkarnataka news): ತುಳುನಾಡಿನ ಜನರು ಇಷ್ಟಪಟ್ಟರೂ ಸಾರ್ವಜನಿಕವಾಗಿ ಮೂಗು ಮುರಿಯುವ ಹಲಸಿನ ಹಣ್ಣಿನ ಬೀಜಕ್ಕೆ ಬಂದಿದೆ ಬಂಗಾರದ ಬೆಲೆ. ಧರ್ಮಕ್ಕೆ ಕೊಟ್ಟರೂ ಬೇಡವೆನ್ನುವ ಹಲಸಿನ ಹಣ್ಣಿನ ಬೀಜಗಳು ಬಾರಿ ಬೆಲೆಯೊಂದಿಗೆ ಬಿಕಾರಿಯಾಗಲು ಸಿದ್ಧವಾಗಿದೆ.

ಅಗ್ರಿ ಡಾಟ್ ಎನ್ನುವ ಕಂಪನಿಯೊಂದು ಆನ್ ಲೈನ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ಮೂಲಕ ಹಲಸಿನ ಬೀಜ ಮಾರಾಟಕ್ಕೆ ರೆಡಿಯಾಗಿದೆ. 800 ಗ್ರಾಂ ಹಲಸಿನ ಬೀಜಕ್ಕೆ 550 ರೂಪಾಯಿ ನಿಗದಿಪಡಿಸಲಾಗಿದೆ. 

ಉಷ್ಣ ವಲಯದಲ್ಲಿ ಬೆಳೆಸಲಾಗುವ ಹಲಸಿನ ಕಾಯಿ ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ನೆರೆಯ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೂಡ ಸಾಕಷ್ಟು ಹಲಸಿನ ಹಣ್ಣು ಬೆಳೆಯುತ್ತದೆ. ತೆಂಗು, ಕಂಗು, ಬಾಳೆ ತರಹ ಇದನ್ನು ನೀರು ಹಾಕಿ ಆರೈಕೆ ಮಾಡಬೇಕಾಗಿಲ್ಲ. ಪ್ರಕೃತ್ತಿದತ್ತವಾಗಿ ಬೆಳೆದ ಹಲಸಿನ ಮರದಲ್ಲಿ ಸಾಕಷ್ಟು ಫಸಲು ಸಿಗುತ್ತದೆ.

ತುಳುನಾಡಿನ ಕರಾವಳಿಯಲ್ಲಿ ಒಂದು ಕಾಲದಲ್ಲಿ ಇದು ಬಡವರ ಬಂಧು. ಹಲಸಿನ ಹಣ್ಣಿನ ಗಟ್ಟಿ, ಗಾರಿಗೆ, ಹಪ್ಪಳ ಮೊದಲಾದ ತಿಂಡಿಗಳನ್ನು ಮಾಡುತ್ತಿದ್ದರು. ಹಲಸಿನ ಕಾಯಿಯನ್ನು ಪದಾರ್ಥಕ್ಕೆ ಬಳಸುತ್ತಿದ್ದರು. ಹಾಗೆ ಹಲಸಿನ ಕಾಯಿಯನ್ನು ಉಪ್ಪು ನೀರಿನಲ್ಲಿ ಹಾಕಿ ಶೇಖರಿಸಿ ಇಡುತ್ತಿದ್ದರು. ಆದರೆ ಇಂದು ಈ ಹಣ್ಣಿನ ಬಗ್ಗೆ ತಾತ್ಸಾರ ಭಾವನೆಯೇ ಜಾಸ್ತಿ. ಸಿಹಿಯಾದ, ಪರಿಮಳಯುಕ್ತ, ಸ್ವಾದಿಷ್ಟವಾದ ಹಲಸಿನ ಹಣ್ಣನ ಉಪೇಕ್ಷೆಯೇ ಜಾಸ್ತಿ. ಹಣ್ಣನ್ನೇ ತಿನ್ನಲು ಹಿಂದೇಟು ಹಾಕುವ ಜನರು ಬೀಜವನ್ನು ತಿನ್ನಲು ಸಾಧ್ಯವೇ? ಅದಲ್ಲದೆ ಹಲಸಿನ ಬೀಜಕ್ಕೆ ಗ್ಯಾಸ್ ಎಂಬ ಅಪವಾದ, ಅವಮಾನವೂ ಅಂಟಿಕೊಂಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಕ್ಕಳಿಗೆ ಹಲಸಿನ ಬೀಜ ತಿನ್ನಿಸಿದರಾಯಿತು ಪಟಾಕಿ ಖರ್ಚು ಉಳಿಯುತ್ತದೆ ಎಂಬ ತಮಾಷೆಯ ಮಾತು ಕೂಡ ಇದೆ. ನೆರೆಯ ಕೇರಳದ ಕಾಸರಗೋಡಿನಲ್ಲಿ ಮಲಯಾಳದಲ್ಲಿ ‘ಚಕ್ಕ ಕುರು ಚದಿಪನಾನು, ಸೂಕ್ಷಿಕೊ ಪೆನ್ನುಂಗಳಾಂದು'(ಹಲಸಿನ ಬೀಜ ಹಠಮಾರಿ, ಹೆಂಗಸರೇ ಎಚ್ಚರಿಕೆ) ಎಂಬ ನಾಣ್ನುಡಿಯೇ ಪ್ರಚಲಿತದಲ್ಲಿದೆ. ಹಲಸಿನ ಹಣ್ಣಿನ ಬೀಜವನ್ನು ತಿಂದರೆ ಅದು ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುವ ಮೂಲಕ ಮರ್ಯಾದೆ ತೆಗೆಯುತ್ತದೆ. ಹೆಂಗಸರೇ ಎಚ್ಚರಿಕೆ ವಹಿಸಿ ಎನ್ನುವುದು ಇದರ ಅರ್ಥವಾಗಿದೆ.

ಇದೀಗ ಫ್ಲಿಪ್ ಕಾರ್ಟ್‌ನಂತಹ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಹಲವು ಕಂಪನಿಗಳು ಬಾದಾಮಿ, ಪಿಸ್ತಾ, ಗೋಡಂಬಿ ಮುಂತಾದ ಡ್ರೈಫ್ರುಟ್ಸ್ ಪ್ಯಾಕ್ ಮಾಡಿದ ರೀತಿಯಲ್ಲಿ ಸುಂದರವಾಗಿ ಪ್ಯಾಕ್ ಮಾಡಿ ಮಾರ್ಕೆಟಿಂಗ್ ಮಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು