12:59 PM Tuesday11 - August 2026
ಬ್ರೇಕಿಂಗ್ ನ್ಯೂಸ್
ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ…

ಇತ್ತೀಚಿನ ಸುದ್ದಿ

ನಂತೂರು ಬಳಿ ರಸ್ತೆ ಮಧ್ಯೆ ಸಮಾಧಿ ತರಹ ತಲೆ ಎತ್ತಿರುವ ಡ್ರೈನೇಜ್ ಪಿಟ್: ಸ್ಕೂಟರ್ ಪಲ್ಟಿ; ಸವಾರ ಆಸ್ಪತ್ರೆಗೆ

07/11/2023, 23:45

ಮಂಗಳೂರು(reporterkarnataka.com): ನಗರದ ನಂತೂರು ಜಂಕ್ಷನ್ ಬಳಿ ಇಂದು ರಾತ್ರಿ ಸ್ಕೂಟರೊಂದು ಅವೈಜ್ಞಾನಿಕವಾಗಿ ನಿರ್ಮಿಸಿದ ಡ್ರೈನೇಜ್ ಪಿಟ್ ನಿಂದ ಅಪಘಾತಕ್ಕೀಡಾದ ಪರಿಣಾಮ ಸ್ಕೂಟರ್ ಸವಾರ ಯುವಕನೊಬ್ಬ ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆದಾಖಲಿಸಲಾಗಿದೆ.


ಗಾಯಾಳುವನ್ನು ಶಿಫ್ಕಿ(21) ಎಂದು ಗುರುತಿಸಲಾಗಿದೆ. ಸ್ಕೂಟರ್ ಪಲ್ಟಿಯಾದ ಪರಿಣಾಮ ಯುವಕನ ಗಲ್ಲ, ಕೈ ಮತ್ತು ಕಾಲಿಗೆ ಗಾಯಗಳಾಗಿವೆ.
ಮಲ್ಲಿಕಟ್ಟೆ ಕಡೆಯಿಂದ ನಂತೂರು ಕಡೆಗೆ ಸಾಗುವ ಹಾದಿಯಲ್ಲಿ ನಂತೂರು ಬಸ್ ತಂಗುದಾಣದ ಸಮೀಪದಲ್ಲೇ ರಸ್ತೆ ಮಧ್ಯೆ ಈ ಡ್ರೈನೇಜ್ ಪಿಟ್ ಇದೆ. ಇದು ರಸ್ತೆ ಮಟ್ಟದಿಂದ ಎತ್ತರದಲ್ಲಿದ್ದು ದ್ವಿಚಕ್ರ ವಾಹನ ಸವಾರರಿಗೆ ಯಾವಾಗಲೂ ಅಪಾಯಕಾರಿಯಾಗಿದೆ. ಈ ಡ್ರೈನೇಜ್ ಪಿಟ್ ರಸ್ತೆ ಮಧ್ಯದಲ್ಲಿ ಸಮಾಧಿ ತರಹ ಎದ್ದು ಕಾಣುತ್ತದೆ. ಈ ರಸ್ತೆಯಲ್ಲಿ ದಿನಾಲೂ ಸಂಚರಿಸುವವರು ಸ್ವಲ್ಪ ಜಾಗರೂಕತೆ ವಹಿಸಿ ಇದರ ಮೇಲೆ ತಮ್ಮ ವಾಹನಗಳ ಚಕ್ರವನ್ನೇರಿಸುತ್ತಾರೆ. ಆದರೆ ಹೊಸ ಸವಾರರಿಗೆ ಇದು ಹೊಸತಾಗಿರುವುದರಿಂದ ಅಪಾಯಕಾರಿಯಾಗಿದೆ. ಇವತ್ತು ನಡೆದದ್ದು ಕೂಡ ಇದೇ ಅಚಾತುರ್ಯ. ಸ್ಕೂಟರ್ ನಿಂದ ಸವಾರ ಎಸೆಯಲ್ಪಟ್ಟು ಗಲ್ಲ ಮತ್ತು ಕೈಕಾಲಿಗೆ ಗಾಯಗಳಾಗಿವೆ. ಗಾಯಾಳುವನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು