ಇತ್ತೀಚಿನ ಸುದ್ದಿ
Maravoor | ಮರವೂರಿನ ಹೋಟೆಲ್ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ ಆತ್ಮಹ*ತ್ಯೆ
10/08/2026, 20:18
ಮಂಗಳೂರು(reporterkarnataka.com):ಕಾಸರಗೋಡು ಮೂಲದ 24 ವರ್ಷದ ಅರ್ಜುನ್ ಎಂಬ ಯುವಕ ಮರವೂರು ಸಮೀಪದ ಸ್ಕೈ ಗ್ರ್ಯಾಂಡ್ ಎಂಪೈರ್ ಹೋಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಹೋಟೆಲ್ನ ಕೊಠಡಿಯಲ್ಲಿ ಅರ್ಜುನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರ್ಜುನ್ ಅವರು ಈ ಹಿಂದೆ ಕೇರಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾದ ಅಯ್ಜ ಅವರ ಅಣ್ಣ ಎಂದು ತಿಳಿದುಬಂದಿದೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪತ್ರವೊಂದು ದೊರಕ್ಕಿದ್ದು, ಕ್ಷಮಿಸಿ ಅಮ್ಮ ಹಾಗೂ ಸ್ನೇಹಿತರಿಗೆ ತಿಳಿಸಿಬಿಡಿ ಎಂದು ಬರೆಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












