ಇತ್ತೀಚಿನ ಸುದ್ದಿ
ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ : ತಪ್ಪಿದ ಬಾರಿ ದುರಂತ
11/08/2026, 11:51
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಟಯರ್ ಕಳಚಿ ಬಿದ್ದಿದ್ದು ತಕ್ಷಣವೇ ಬಸ್ ಅಲ್ಲೇ ನಿಂತ ಪರಿಣಾಮ ಯಾವುದೇ ಅವಘಡ ಸಂಭವಿಸಿಲ್ಲ. ಆದರೆ ಆಗುತ್ತಿದ್ದ ಬಾರಿ ದುರಂತವೊಂದು ತಪ್ಪಿದಂತೆ ಆಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಉಡುಪಿಯಿಂದ ಶಿವಮೊಗ್ಗ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಆಗುಂಬೆ ಸಮೀಪ ಬರುತ್ತಿದ್ದಂತೆ ಬಸ್ ನಿಂದ ಟಯರ್ ಕಳಚಿ ಬಿದ್ದಿದೆ.ಬಸ್ ನಲ್ಲಿ ಹಲವರು ಪ್ರಯಾಣ ಮಾಡುತ್ತಿದ್ದರು. ಆದರೆ ಯಾರಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ..ಏಕಾಏಕಿ ಬಸ್ ನಿಂದ ಟಯರ್ ಕಳಚಿ ಬಿದ್ದಿದ್ದು ಹೇಗೆ? ಎಂಬುದು ಈಗ ಪ್ರೆಶ್ನೆ ಆಗಿದೆ.
ಬಸ್ ನಲ್ಲಿದ್ದವರನ್ನು ಬೇರೆ ಬಸ್ ನಲ್ಲಿ ಕಳುಹಿಸಿಕೊಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.












