ಇತ್ತೀಚಿನ ಸುದ್ದಿ
ಮಡಿಕೇರಿ ದಸರಾ | ರಾಜ್ಯ ಸರಕಾರ 2 ಕೋಟಿ ರೂಪಾಯಿ ಅನುದಾನ ಘೋಷಣೆ
22/08/2026, 18:16
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ದಸರಾಕ್ಕೆ ರಾಜ್ಯ ಸರಕಾರ 2 ಕೋಟಿ ರೂಪಾಯಿ ಅನುದಾನ ಘೋಷಿಸಿದೆ.
ಮಡಿಕೇರಿ ಶಾಸಕ ಮಂಥರ್ ಗೌಡರ ನೇತೃತ್ವದಲ್ಲಿ ನಗರ ದಸರಾ ಸಮಿತಿಯಿಂದ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಡಿಕೇರಿ ದಸರಾಕ್ಕೆ ಅನುದಾನ ಕೋರಿಕೆ ಸಲ್ಲಿಸಿದರು.
ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿ 2 ಕೋಟಿ ರೂ. ಘೋಷಣೆ ಮಾಡಿದ್ದಾರೆ.
ನಿಯೋಗ ದಲ್ಲಿ ಮಡಿಕೇರಿ ದಸರಾ ಸಮಿತಿಯ ಉಪಾಧ್ಯಕ್ಷರು ನಗರ ದಸರಾ ಸಮಿತಿಯ ಉಪಾಧ್ಯಕ್ಷರಾದ ಮಹೇಶ್ ಜೈನಿ, ದಸರಾ ಕಾರ್ಯಾಧ್ಯಕ್ಷ ಬಿ ಕೆ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ,ಖಜಾಂಚಿ ಸಬೀತಾ,ಕಾರ್ಯದರ್ಶಿ ಮುದ್ದುರಾಜ್,ದಶ ಮಂಟಪ ಸಮಿತಿ ಅಧ್ಯಕ್ಷ ಪೂಣಚ್ಚ,ಪ್ರಧಾನ ಕಾರ್ಯ ದರ್ಶಿ ವಿನೋದ್ ಪ್ರಕಾಶ್ ಆಚಾರ್ಯ,ಕಾರ್ಯ ದರ್ಶಿ ಮೋಹನ್ ಗಜೇಂದ್ರ,ಜಗದೀಶ್ ಸೇರಿದಂತೆ ದಸರಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.












