6:14 AM Saturday13 - June 2026
ಬ್ರೇಕಿಂಗ್ ನ್ಯೂಸ್
ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ… ಹಾಸನ | ಸಕಲೇಶಪುರ ಬಳಿ ಕರುಗಳ ಬೆನ್ನಟ್ಟಿದ ಕಾಡಾನೆ ಮರಿ ಚಿಕ್ಕಮಗಳೂರು: ಗುಂಡು ಹಾರಿಸಿಕೊಂಡು ಗೃಹಿಣಿ ಅನುಮಾನಾಸ್ಪದ ಸಾವು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ:… ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ… ಸಿಎಂ ಕಾನೂನು ಸಲಹೆಗಾರ ಸ್ಥಾನಕ್ಕೆ ಎ. ಎಸ್. ಪೊನ್ನಣ್ಣ ರಾಜೀನಾಮೆ: ಸಚಿವ ಸ್ಥಾನ… Kodagu | ನಾಪೋಕ್ಲು: ಕಾರು – ಬೈಕ್ ಅಪಘಾತ- ಸವಾರ ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ

ಕೊಡಗಿನಲ್ಲಿ ಗಿರಿಜನರ ‘ಕುಂಡೆ ಹಬ್ಬ’ ಸಂಭ್ರಮ

29/05/2026, 19:44

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ದಕ್ಷಿಣ ಕೊಡಗಿನ ಬುಡಕಟ್ಟು ಜನರ ಸಂಭ್ರಮದ ಕುಂಡೆ ಹಬ್ಬ ಬುಧವಾರ ಆರಂಭಗೊಂಡಿದೆ . ಕಾಫಿತೋಟ ಹಾಗೂ ಕಾಡು ಮೇಡುಗಳನ್ನು ಬಿಟ್ಟು ಮೈಗೆ ಸಿಕ್ಕಿದ ಬಣ್ಣ ಹಚ್ಚಿಕೊಂಡು, ವಿಚಿತ್ರ ವೇಷಧರಿಸಿದ ಗಿರಿಜನರು ಕುಣಿದು ಕುಪ್ಪಳಿಸುತ್ತಾ ಹಬ್ಬದ ಆಚರಣೆಗೆ ಮುನ್ನುಡಿ ಬರೆಡಿದ್ದಾರೆ. ದಕ್ಷಿಣ ಕೊಡಗಿನ ಕುಟ್ಟ, ಶ್ರೀಮಂಗಲ, ಹುದಿಕೇರಿ, ನಾಲ್ಕೇರಿ, ಬಿರುನಾಣಿ, ಬಾಳೆಲೆ ಮೊದಲಾದ ಕಡೆಗಳಿಂದ ಗೋಣಿಕೊಪ್ಪಲು, ಪೊನ್ನಂಪೇಟೆ, ತಿತಿಮತಿ ಸೇರಿದಂತೆ ಮೈಸೂರು, ಚಾಮರಾಜನಗರ ಮೊದಲಾದ ಭಾಗಗಳಿಗೆ ಸೇರಿದ ಬುಡಕಟ್ಟು ವೇಷಧಾರಿ ಯುವಕರು ಕೈಗೆ ಸಿಕ್ಕಿದ ವಸ್ತುಗಳನ್ನೇ ತಾಳಮೇಳ ಮಾಡಿಕೊಂಡು ಕುಣಿಯತ್ತಾ ಸಂಭ್ರಮಿಸಿದರು.
ಎದುರಿಗೆ ಬಂದ ಮಹಿಳೆ ಅಥವಾ ಪುರುಷರಿಗೆ ‘ಏ ಕುಂಡೆ’ ಎಂದೇ ಬೈಯುತ್ತಾ ಅಡ್ಡಗಟ್ಟಿ ಹಣ ಬೇಡಿದರು. ಬುಡಕಟ್ಟು ಜನರ ಈ ಸಂಭ್ರಮವನ್ನು ನೋಡುತ್ತಾ ಅವರು ಬೈದರು ಕೂಡ ಬೇಸರ ಮಾಡಿಕೊಳ್ಳದೆ ತಮಗೆ ಇಷ್ಟಬಂದಷ್ಟು ಹಣವನ್ನು ಕೊಟ್ಟು ಮುಂದಕ್ಕೆ ತೆರಳುತ್ತಿದ್ದರು.
ಕುಂಡೆ ಹಬ್ಬದ ವೇಷಧಾರಿಗಳು ಹಣ ಕೊಡದವರನ್ನೂ ಬೈಯುತ್ತಿದ್ದರು. ಕೊಟ್ಟವರನ್ನೂ ಬೈಯುತ್ತಿದ್ದರು. ಇದು ಒಂದು ರೀತಿಯಲ್ಲಿ ನೋಡುಗರಿಗೆ ಮಜ ನೀಡುತ್ತಿತ್ತು. ಹೊಸಬರು ಇವರ ಬೈಗುಳ ಕೇಳಿ ಅಚ್ಚರಿಪಟ್ಟು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು.
ಕುಂಡೆ ಹಬ್ಬ ಆಚರಿಸುವ ಗಿರಿಜನ ವೇಷಧಾರಿಗಳು ಧರಿಸುವ ವೇಷಗಳನ್ನು ಇತರರು ಧರಿಸಿಕೊಂಡು ಅಶ್ಲೀಲವಾಗಿ ಬೈದರೆ ಅಂಥವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂಬ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಹೆಚ್ಚು ಜನ ಈ ಬಾರಿ ಪಟ್ಟಣಗಳಲ್ಲಿ ಕಂಡು ಬರಲಿಲ್ಲ. ಗಿರಿಜನರು ತೀರ ಅಶ್ಲೀಲವಾಗಿ ಬೈಯ್ಯುವುದು ಕಂಡ ಬರಲಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು