ಇತ್ತೀಚಿನ ಸುದ್ದಿ
ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ
10/06/2026, 19:04
ಬೆಂಗಳೂರು(reporterkarnataka.com): ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಆಡಳಿತ ಅವಧಿಯ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೀರಿಸಿರುವ ಕಾರಣ ಎನ್ಡಿಎ ಕೂಟವು ಬುಧವಾರ ಸಭೆ ನಡೆಸಿ, ಅಭಿನಂದನಾ ನಿರ್ಣಯವನ್ನು ಅಂಗೀಕರಿಸಲು ಸಜ್ಜಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು ಎಂದು ಕುಟುಕಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 12 ವರ್ಷಗಳ ಕಾಲ ಪ್ರತಿಯೊಂದು ಭರವಸೆಯನ್ನು ಘೋಷಣೆಯಾಗಿ ಮತ್ತು ಪ್ರತಿಯೊಂದು ಘೋಷಣೆಯನ್ನು ವಂಚನೆಯಾಗಿ ಪರಿವರ್ತಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದಿದ್ದಾರೆ.
*ಮೇಕ್ ಇನ್ ಇಂಡಿಯಾ
*ಸ್ಕಿಲ್ ಇಂಡಿಯಾ
*ಡಿಜಿಟಲ್ ಇಂಡಿಯಾ
“ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆ
*ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ
*ಮುದ್ರಾ ಸಾಲಗಳು
*ಪಿಎಂ ಕಿಸಾನ್
*ಸ್ವಚ್ಛ ಭಾರತ್ ಮಿಷನ್
*ನಮಾಮಿ ಗಂಗೆ
*ಬೇಟಿ ಬಚಾವೋ ಬೇಟಿ ಪಡಾವೋ
*ಆಯುಷ್ಮಾನ್ ಭಾರತ
*ಉಜ್ವಲ ಯೋಜನೆ
*ಜಲ ಜೀವನ್ ಮಿಷನ್
*ಹರ್ ಘರ್ ಜಲ
*ಪ್ರಧಾನ ಮಂತ್ರಿ ಆವಾಸ್ ಯೋಜನೆ
#ಸ್ಮಾರ್ಟ್ ಸಿಟಿ ಮಿಷನ್
*ರಾಷ್ಟ್ರೀಯ ಶಿಕ್ಷಣ ನೀತಿ
*ಅಗ್ನಿಪಥ ಯೋಜನೆ
*ಎಲ್ಲರಿಗೂ ವಸತಿ
*2023ರ ವೇಳೆಗೆ ಬುಲೆಟ್ ರೈಲು
*ಕೃಷಿ ಕಾನೂನುಗಳು
*ವಿದೇಶಿ ನೀತಿ
*ವಿದೇಶಿ ನೇರ ಹೂಡಿಕೆ
#2022 ರ ವೇಳೆಗೆ $5 ಟ್ರಿಲಿಯನ್ ಆರ್ಥಿಕತೆ
*ಪ್ರತಿ ವರ್ಷ 2 ಕೋಟಿ ಉದ್ಯೋಗಗಳು
*ನಿರುದ್ಯೋಗ ಕಡಿತ
*ರೈತರ ಆದಾಯವನ್ನು ದ್ವಿಗುಣಗೊಳಿಸುವುದು
*ನೋಟ್ ಬ್ಯಾನ್
*ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ
*ಹಣದುಬ್ಬರ ನಿಯಂತ್ರಣ
*ರೂಪಾಯಿ ಮೌಲ್ಯ
*ಭ್ರಷ್ಟಾಚಾರ ನಿಯಂತ್ರಣ
*ಬಂಡವಾಳಶಾಹಿ ಗೆಳೆಯರು
*ಚುನಾವಣಾ ಬಾಂಡ್ಗಳು
*ಜಿಎಸ್ಟಿ ಅನುಷ್ಠಾನ
*ಎಂಎಸ್ಎಂಇ ವಲಯ
*ಜಿಡಿಪಿಯಲ್ಲಿ ಉತ್ಪಾದನಾ ಪಾಲು
*ಆತ್ಮನಿರ್ಭರ ಭಾರತ
*ಸುಗಮ ವ್ಯಾಪಾರ
*ಆರೋಗ್ಯ ಮೂಲಸೌಕರ್ಯ
*ಕೋವಿಡ್ ನಿರ್ವಹಣೆ
*ವಲಸೆ ಕಾರ್ಮಿಕರ ಬಿಕ್ಕಟ್ಟು
#ಬಡತನ ನಿವಾರಣೆ
*ಆದಾಯ ಅಸಮಾನತೆ
*ಸಾಮಾಜಿಕ ಸಾಮರಸ್ಯ
*ಸಾಂಸ್ಥಿಕ ಸಮಗ್ರತೆ
*ಒಕ್ಕೂಟ ವ್ಯವಸ್ಥೆ
*ಪರಿಸರ ರಕ್ಷಣೆ
*ಅಕ್ರಮ ವಲಸಿಗರು
*ಮಾಲಿನ್ಯ ನಿಯಂತ್ರಣ
ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು ಎಂದು ಕುಟುಕಿದ್ದಾರೆ.













