8:50 AM Thursday17 - September 2026
ಬ್ರೇಕಿಂಗ್ ನ್ಯೂಸ್
ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ*

ಇತ್ತೀಚಿನ ಸುದ್ದಿ

ತಿರುವೈಲುನಲ್ಲಿ ಸಂಭ್ರಮದ ಕಂಬಳ ಉತ್ಸವ: ಕರಾವಳಿಯ ಜನಪದ ಕ್ರೀಡೆಗೆ ಮತ್ತಷ್ಟು ರಂಗು!

13/02/2023, 15:13

ಮಂಗಳೂರು(reporterkarnataka.com):
ನಗರದ ಹೊರವಲಯದ ವಾಮಂಜೂರಿನ ತಿರುವೈಲು ಶ್ರೀ ಅಮೃತೇಶ್ವರ ದೇವಳದ ಎದುರಿನ ತಿರುವೈಲುಗುತ್ತಿನಲ್ಲಿ ಕಳೆದ ಶನಿವಾರ ಸಂಕು ಪೂಂಜ-ದೇವು ಪೂಂಜ ಜೋಡುಕೆರೆ ಕಂಬಳ ಟ್ರಸ್ಟ್ ವತಿಯಿಂದ ಕಂಬಳ ಉತ್ಸವ ನಡೆಯಿತು.




ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿ.ಆರ್.ಮಡಿಕಲ್ ಕಾಲೇಜಿನ ಸ್ಥಾಪಕ ಅಧ್ಯಕ್ಷ ಗಣೇಶ್ ರಾವ್, ಕರಾವಳಿಯ ದೇವಾರಾಧನೆ, ದೈವಾರಾಧನೆ, ಕಂಗೆ ಕರೆ ಸಂಸ್ಕೃತಿ ಎಲ್ಲವೂ ಪ್ರಕೃತಿಗೆ ಬಂದಿದೆ. ಇವೆಲ್ಲ ಮುಂದಿನ ದಿನಗಳಲ್ಲೂ ಮುಂದುವರಿಯಬೇಕಾದರೆ, ಮರ-ಗಿಡಗಳನ್ನು ಉಳಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ಗ್ರಾಮೀಣ ಜನರು ಸ್ವಾಭಾವಿಕ, ಪ್ರಕೃತಿಯೊಂದಿಗೆ ಬದುಕುವ ಕಲೆಯಿಂದ ಇಂದು ರೋಗ ರುಜಿನಗಳಿಂದ ದೂರು ಇದ್ದಾರೆ. ಅವರು ಹಾಕಿಕೊಟ್ಟ ಸಂಸ್ಕಾರ, ವ್ಯವಸ್ಥೆಯ ಅಡಿಯಲ್ಲಿ ನಾವು ಬದುಕಬೇಕು. ನಮ್ಮ ಕಲೆ ಸಂಸ್ಕೃತಿಯನ್ನು ಉಳು, ಮುದಿ ತಲೆದೋರಿಗೆ ದಾಟಿಸುವ ಕೆಲಸ ಮಾಡಬೇಕು. ದ.ಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕಂಬಳದಂತಹ ಜಾನಪದ ಕ್ರೀಡ ಅನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ತಿರುವಲು ಗುತ್ತು ಕ ಜನಾಕರ್ಷಣೆಯೊಂದಿಗೆ ಹೊಸ ನಮೂನೆಯೊಂದಿಗೆ ಪ್ರತಿ ವರ್ಷ ನಡೆಯುತ್ತದೆ‌. ಇನ್ನೇನು ಕಂಬಳ ಮುಗಿದೇ ಹೋಯಿತು ಎನ್ನುವ ಸಂದರ್ಭದಲ್ಲಿ ನ್ಯಾಯಲಯಕ್ಕೆ ಮನವರಿಕೆಯಾಗಿ ಕಂಬಳ ಮತ್ತೆ ಆರಂಭವಾಯಿತು. ಇನ್ನಷ್ಟು ಕಾಲ ಕಂಬಳ ಮುಂದುವರಿಯಲಿ ಎಂದರು.



ಟಿವಿಎಸ್ ಮೋಟಾರ್ ಕಂಪೆನಿ ಉಪಾಧ್ಯಕ್ಷ ರಾಹುಲ್‌ ನಾಯ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಬಂಟರ ಯಾನೆ ನಾಡವರ ಮತ್ತ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್ ರೈ ಮಾಲಾಡಿ, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವಾ, ಅರಸು ಮುಂಡಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ಗೋಪಾಲ ಕೃಷ್ಣ ಭಂಡಾರಿ, ಪ್ರಮುಖರಾದ ಕಿಶೋರ್ ನಾಯ್ಕ, ಪದ್ಮರಾಜ್ ಆರ್‌. , ಸಂತೋಷ್ ಶೆಟ್ಟಿ, ಪಟ್ಟ ಪವನ್‌ ಕುಮಾರ್‌, ಓಂ ಪ್ರಕಾಶ್ ಶೆಟ್ಟಿ ಗಣೇಶ್ ಶೆಟ್ಟಿ ಜಪ್ಪು ಗುಡ್ಡೆಗುತ್ತು, ಸೀತಾರಾಮ ಜಾಣು ಶೆಟ್ಟಿ ಸದಾಶಿವ ಭಟ್, ಪ್ರಚೋಷ ಮಲ್ಲಿ ಉಮೇಶ್ ರೈ, ಗಿರಿಧರ ಶೆಟ್ಟಿ, ಗ್ರಾಪಂ ಸದಸ್ಯೆ ಸುಮಲತಾ, ಸುರೇಶ್ ಶೆಟ್ಟಿ ಕಾಪೆಟ್ಟುಗುತ್ತು, ಸನತ್ ಕುಮಾರ್ ರೈ ನಡು ಚಂದ್ರಶೇಖರ ಶೆಟ್ಟಿ ಕಾಪೆಟ್ಟುಗುತ್ತು, ಬಾಲಕೃಷ್ಣ ಭಂಡಾರಿ ಲಿಂಗಮಾರುಗುತ್ತು, ಚಂದ್ರಹಾಸ ಶೆಟ್ಟಿ ಬಾಳಿಕೆ ಮನೆ, ನವಿಲ್ ಕಟ್ಟಿಸತ ಬೆಟ್ಟು ಗಂಗಯ್ಯ ಅಮೀನ್, ನವೀನ್ ಚೌಟ, ಸಂದೀಪ್ ಶೆಟ್ಟಿ, ಬಾಲಕೃಷ್ಣ ಕೊಟ್ಟಾರಿ, ಚಂದ್ರಹಾಸ ರೈ, ಕಂಬಳ ಸಮಿತಿ ಅಧ್ಯಕ್ಷ ನವೀನ್‌ ಚಂದ್ರ ಆಳ್ವ, ಗೌರವಾಧ್ಯಕ್ಷ ವಿಥುನ್‌ ರೈ, ಕಾರ್ಯಾಧ್ಯಕ್ಷ ಪ್ರವೀಣ್‌ ಚಂದ್ರ ಆಳ್ವ ಕೋಲಾಧಿಕಾರಿ ಧನರಾಜ್‌ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಶೆಟ್ಟಿ, ಕೆ.ಅಭಿಷೇಕ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು