1:33 AM Saturday5 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಬೈ ಫಿನ್ಸ್ ಈಜು ಸ್ಪರ್ಧೆ: ರೀಮಾ , ಅಲೀಟಾ ಡಿಸೋಜಾ, ಸಾರ ಎಲಿಶಾ ಪಿಂಟೊ , ನೋವಾ ಜೋ ಪೈಸ್ ವೈಯಕ್ತಿಕ ಚಾಂಪಿಯನ್

14/09/2025, 15:16

ಮಂಗಳೂರು(reporterkarnataka.com): ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್ ಆಶ್ರಯದಲ್ಲಿ ನಡೆದ ಮೊಟ್ಟಮೊದಲ ಬೈ ಫಿನ್ಸ್ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವೀ ವನ್ ಕ್ಲಬ್ ನಲ್ಲಿ ತರಬೇತಿ ಪಡೆದ ರೀಮಾ A S , ಅಲೀಟಾ ಡಿಸೋಜಾ, ಸಾರ ಎಲಿಶಾ ಪಿಂಟೊ , ನೋವಾ ಜೋ ಪೈಸ್ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದಿದ್ದಾರೆ
*ವಿಜೇತರ ವಿವರ*
ರೀಮಾ A S ಎರಡು ಚಿನ್ನ ಎರಡು ಬೆಳ್ಳಿ, ಅಲಿಟ ಡಿಸೋಜ ನಾಲ್ಕು ಚಿನ್ನ, ನೋವಾ ಜಾಯ್ ಪಾಯ್ಸ್ ಎರಡು ಚಿನ್ನ ಎರಡು ಬೆಳ್ಳಿ ಸಾರ ಎಲಿಶಾ ಪಿಂಟೊ ಒಂದು ಚಿನ್ನ ಎರಡು ಬೆಳ್ಳಿ,
ಸನ್ನಿಗ್ದ್ ಉಳ್ಳಾಲ ಒಂದು ಬೆಳ್ಳಿ ಒಂದು ಕಂಚು, ಆದ್ವಿಕ್ ಭಾಗ್ಚಿ ಒಂದು ಚಿನ್ನ ಎರಡು ಬೆಳ್ಳಿ ಪ್ರಧ್ಯುಮ್ನ ವಿ ಎರಡು ಚಿನ್ನ ಒಂದು ಬೆಳ್ಳಿ, ಪ್ರಕೃತಿ ಕೆ ಒಂದು ಚಿನ್ನ, ಲಿಪಿಕಾ ಎಸ್ ಒಂದು ಬೆಳ್ಳಿ ಒಂದು ಕಂಚು, ಛವಿ ಒಂದು ಬೆಳ್ಳಿ ಮೂರು ಕಂಚು, ರೇಂಜಿಲ್ ಅಲೆನ್ ಲೋಬೋ ಎರಡು ಬೆಳ್ಳಿ, ಸಾನ್ವಿ ಒಂದು ಬೆಳ್ಳಿ ಒಂದು ಕಂಚು, ನೀಲ್ MG ಒಂದು ಕಂಚು, ಸಿದ್ದಿ ಶೆಟ್ಟಿ ಎರಡು ಚಿನ್ನ , ಅದ್ವಿತ್ ಪ್ರಶಾಂತ್ ಒಂದು ಚಿನ್ನ ಎರಡು ಬೆಳ್ಳಿ ಒಂದು ಕಂಚು, ಭೂಮಿ ಒಂದು ಚಿನ್ನ ಎರಡು ಬೆಳ್ಳಿ ಒಂದು ಕಂಚು.
ಒಟ್ಟು 17 ಚಿನ್ನ 16 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಅಲ್ಲದೆ ನಾಲ್ಕು ಮಂದಿ ವೈಯಕ್ತಿಕ ಚಾಂಪಿಯನ್ ಗಳಾಗಿ ವಿಜೇತರಾಗಿದ್ದಾರೆ.
ಇವರು ವೀ ವನ್ ಅಕ್ವಾ ಸೆಂಟರ್ ನ ಸಂತ ಅಲೋಷಿಯಸ್ ಈಜುಕೊಳ, ಎಮ್ಮೆ ಕೆರೆ ಸ್ಮಾರ್ಟ್ ಸಿಟಿ ಈಜುಕೊಳ, ಮಂಗಳೂರು ಮಹಾನಗರ ಪಾಲಿಕೆ ಈಜುಕೊಳ, ಹಾಗೂ ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ ಬಳಿ ಇರುವ ಯುವ ಜನ ಸೇವಾ ಕ್ರೀಡಾ ಇಲಾಖೆಯ ಈಜುಕೊಳದಲ್ಲಿ ತರಬೇತಿ ಪಡೆದಿದ್ದಾರೆ.
ಇವರಿಗೆ ಮುಖ್ಯ ತರಬೇತು ದಾರರಾದ ಶ್ರೀ ಲೋಕರಾಜ್ ವಿ ಎಸ್ ವಿಟ್ಲ, ಶ್ರೀ ಅಭಿಲಾಶ್, ಹಾಗೂ ತರಬೇತುದಾರರಾದ ಸುಧೀನ್ ರಾಜ್ ಸಂಜಯ್, ಗಗನ್ ಜಿ ಪ್ರಭು, ಸಂಜೀವ್ ಉಳ್ಳೇಕರ್, ಆರೋಮಲ್, ಪ್ರಣಾಮ್ ತರಬೇತಿ ನೀಡಿದ್ದಾರೆ.
ವಿಜೇತರನ್ನು ವೀ ವನ್ ಎಕ್ವಾ ಸೆಂಟರ್ ನ ನಿರ್ದೇಶಕರಾದ ಶ್ರೀ ನವೀನ್ ಹಾಗೂ ರೂಪ ಜಿ ಪ್ರಭು ಅವರು ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು