11:27 PM Thursday18 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಬಾ.. ಅಂದ್ರೆ ಓಡೋಡಿ ಹತ್ತಿರ ಬರುತ್ತೆ, ಹೋಗು ಅಂದ್ರೆ ಹಿಂದಕ್ಕೆ ಸರಿಯುತ್ತೆ!!: ಇದು ಮುದ್ದಾದ ಮರಿ ಕಾಡಾನೆ ಕತೆ!

31/07/2023, 11:51

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬಾ ಅಂದ್ರೆ ಓಡೋಡಿ ಹತ್ತಿರ ಬರುತ್ತೆ. ಹೋಗು ಅಂದ್ರೆ ಹಿಂದಕ್ಕೆ ಸರಿಯುತ್ತೆ. ಇದು ಮುದ್ದಾದ ಮರಿ ಕಾಡಾನೆಯ ಕತೆ.
ಇದು ತಾಯಿಯ ಗುಂಪಿನಿಂದ ತಪ್ಪಿಸಿಕೊಂಡು ಒಂಟಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ-ಬೇಲೂರು ರಸ್ತೆಯ ಚೀಕನಹಳ್ಳಿ ಬಳಿ ಈ ಘಟನೆ ನಡೆದಿದೆ. ಪುಟ್ಟ…ಪುಟ್ಟ… ಹೆಜ್ಜೆ ಇಟ್ಕೊಂಡು ಇದು ಅಮ್ಮನಿಗಾಗಿ ಪರಿತಪ್ಪಿಸ್ತಿದೆ. ದಿಕ್ಕುತೋಚದೆ ಕಾಫಿತೋಟದಲ್ಲಿ ಅತ್ತಿಂದಿತ್ತ ಓಡಾಡ್ತಿದೆ. ಜನರು ಕರೆದ ಕೂಡಲೇ ಹತ್ತಿರ ಬರುತ್ತದೆ. ಹೋಗು ಅಂದ್ರೆ ಹಿಂದಕ್ಕೆ ಹೋಗುತ್ತದೆ. ಮಕ್ಕಳಂತೆ ಹೇಳಿದ ಮಾತು ಕೇಳುತ್ತದೆ.


ಗುಂಪಿನಿಂದ ಬೇರ್ಪಟ್ಟ ಮರಿಯನ್ನ ಆನೆಗಳ ಗುಂಪು ಹತ್ತಿರ ಸೇರಿಸಲ್ಲ. ನೀರು ಕೊಟ್ಟಿ,ಮರಿ ಆನೆಯನ್ನ ಅರಣ್ಯ ಅಧಿಕಾರಿಗಳು ಸಂತೈಸಿದ್ದಾರೆ. ಆನೆಯನ್ನು ಅದರ ಅಮ್ಮ ಬಳಿ ಸೇರಿಸಲು ಅರಣ್ಯ ಅಧಿಕಾರಿಗಳ ಪರದಾಡುತ್ತಿದ್ದಾರೆ. ಮೂಡಿಗೆರೆ-ಸಕಲೇಶಪುರ ಗಡಿಯಲ್ಲಿ ಬೀಡುಬಿಟ್ಟಿರೋ ಕಾಡಾನೆಗಳ ತಂಡದ ಮರಿ ಇರಬಹುದು ಎಂದು ಅಧಿಕಾರಿಗಳಿಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು