3:03 AM Tuesday23 - September 2025
ಬ್ರೇಕಿಂಗ್ ನ್ಯೂಸ್
Kodagu | ವಿರಾಜಪೇಟೆ, ಕುಶಾಲನಗರ ಮತ್ತು ಹುದಿಕೇರಿ ಆಸ್ಪತ್ರೆ ಮೇಲ್ದರ್ಜೆಗೆ: ಆರೋಗ್ಯ ಸಚಿವ… ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ: ಮಹಿಳಾ ದಸರಾ ಉದ್ಘಾಟಿಸಿ… ಪೊನ್ನಂಪೇಟೆ ಕೋಣಗೇರಿಯಲ್ಲಿ ಸೈನಿಕ ಪತಿಯಿಂದಲೇ ಪತ್ನಿಗೆ ಗುಂಡು: ಮೈಸೂರಿಗೆ ರವಾನೆ ಗೋಣಿಕೊಪ್ಪಲು ಬಿಟ್ಟಂಗಾಲ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ – ಜೀಪು ಅಪಘಾತ: ಅದೃಷ್ಟವಶಾತ್ ಎಲ್ಲರೂ… Kodagu | ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ: 4 ಶಕ್ತಿ ದೇವತೆಗಳಿಗೆ ವಿಶೇಷ… ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

ಇತ್ತೀಚಿನ ಸುದ್ದಿ

ಬಾ.. ಅಂದ್ರೆ ಓಡೋಡಿ ಹತ್ತಿರ ಬರುತ್ತೆ, ಹೋಗು ಅಂದ್ರೆ ಹಿಂದಕ್ಕೆ ಸರಿಯುತ್ತೆ!!: ಇದು ಮುದ್ದಾದ ಮರಿ ಕಾಡಾನೆ ಕತೆ!

31/07/2023, 11:51

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬಾ ಅಂದ್ರೆ ಓಡೋಡಿ ಹತ್ತಿರ ಬರುತ್ತೆ. ಹೋಗು ಅಂದ್ರೆ ಹಿಂದಕ್ಕೆ ಸರಿಯುತ್ತೆ. ಇದು ಮುದ್ದಾದ ಮರಿ ಕಾಡಾನೆಯ ಕತೆ.
ಇದು ತಾಯಿಯ ಗುಂಪಿನಿಂದ ತಪ್ಪಿಸಿಕೊಂಡು ಒಂಟಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ-ಬೇಲೂರು ರಸ್ತೆಯ ಚೀಕನಹಳ್ಳಿ ಬಳಿ ಈ ಘಟನೆ ನಡೆದಿದೆ. ಪುಟ್ಟ…ಪುಟ್ಟ… ಹೆಜ್ಜೆ ಇಟ್ಕೊಂಡು ಇದು ಅಮ್ಮನಿಗಾಗಿ ಪರಿತಪ್ಪಿಸ್ತಿದೆ. ದಿಕ್ಕುತೋಚದೆ ಕಾಫಿತೋಟದಲ್ಲಿ ಅತ್ತಿಂದಿತ್ತ ಓಡಾಡ್ತಿದೆ. ಜನರು ಕರೆದ ಕೂಡಲೇ ಹತ್ತಿರ ಬರುತ್ತದೆ. ಹೋಗು ಅಂದ್ರೆ ಹಿಂದಕ್ಕೆ ಹೋಗುತ್ತದೆ. ಮಕ್ಕಳಂತೆ ಹೇಳಿದ ಮಾತು ಕೇಳುತ್ತದೆ.


ಗುಂಪಿನಿಂದ ಬೇರ್ಪಟ್ಟ ಮರಿಯನ್ನ ಆನೆಗಳ ಗುಂಪು ಹತ್ತಿರ ಸೇರಿಸಲ್ಲ. ನೀರು ಕೊಟ್ಟಿ,ಮರಿ ಆನೆಯನ್ನ ಅರಣ್ಯ ಅಧಿಕಾರಿಗಳು ಸಂತೈಸಿದ್ದಾರೆ. ಆನೆಯನ್ನು ಅದರ ಅಮ್ಮ ಬಳಿ ಸೇರಿಸಲು ಅರಣ್ಯ ಅಧಿಕಾರಿಗಳ ಪರದಾಡುತ್ತಿದ್ದಾರೆ. ಮೂಡಿಗೆರೆ-ಸಕಲೇಶಪುರ ಗಡಿಯಲ್ಲಿ ಬೀಡುಬಿಟ್ಟಿರೋ ಕಾಡಾನೆಗಳ ತಂಡದ ಮರಿ ಇರಬಹುದು ಎಂದು ಅಧಿಕಾರಿಗಳಿಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು