ಇತ್ತೀಚಿನ ಸುದ್ದಿ
ಪಿಯುಸಿಯಲ್ಲಿ ರಾಜ್ಯಕ್ಕೆ 5 ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಸುಳ್ಯದ ಅಭಿಜ್ಞಾ ಭಟ್ ಇನ್ನಿಲ್ಲ
10/06/2026, 20:21
ಸುಳ್ಯ(reporterkarnataka.com): ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯದ ಪಿಯುಸಿ ಫಲಿತಾಂಶ ದಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದ ಸುಳ್ಯದ ಅಭಿಜ್ಞಾ ಭಟ್(19) ಕೊನೆಯುಸಿರೆಳೆದಿದ್ದಾರೆ.
ಸುಳ್ಯ ಪಟ್ಟಣದ ಇಎನ್ ಟಿ ತಜ್ಞರಾದ ಡಾ.ರವಿಶಂಕರ್ ರವರ ಹಿರಿಯ ಪುತ್ರಿಯಾಗಿರುವ ಅವರು 595 ಅಂಕ ಪಡೆಯುವುದರ ಮೂಲಕ ರಾಜ್ಯದ ಗಮನ ಸೆಳೆದಿದ್ದರು, ಇದೀಗ ಈ ಇವರ ಸಾವಿನಿಂದ ಕುಟುಂಬದವರು, ಸ್ನೇಹಿತರು, ಬೋಧಕ ವರ್ಗದವರು ದುಃಖದ ಮಡುವಿನಲ್ಲಿದ್ದಾರೆ.












