2:12 AM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಮಾಸ್ಕೋದಿಂದ ಪುಟ್ಟ ಮಗಳಿಗೆ ಒಂದು ಸೂಟ್ ಕೇಸ್ ಚಾಕಲೇಟ್ ತಂದಿದ್ದ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ !

02/07/2021, 20:22

ಬೆಂಗಳೂರು(reporterkarnataka news): ಪ್ರಸಿದ್ಧ ವಿಜ್ಞಾನ ಬರಹಗಾರ, ಡಿಆರ್​​​​ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ವಾರದ ಹಿಂದೆ ಅವರು ತೀವ್ರ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲಸ ನಿಮಿತ್ತ ಈ ಹಿಂದೆ ರಷ್ಯಾಕ್ಕೆ ಹೋಗಿದ್ದಾಗ ಒಂದು ಸೂಟ್ ಕೇಸ್ ತುಂಬಾ ಚಾಕಲೇಟ್ ತಂದಿರುವುದನ್ನು ಅವರ ಪುತ್ರಿ ಮೇಘನಾ ಸುಧೀಂದ್ರ ನೆನಪಿಸಿಕೊಳ್ಳುತ್ತಾರೆ.

ಫಾದರ್ಸ್ ಡೇ ಬಗ್ಗೆ ಮೇಘನಾ ಅವರು ಬರೆದ ಲೇಖನದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಮೇಘನಾ ಅವರು ಆಗ ಸಣ್ಣವರಿದ್ದರಂತೆ. ಸ್ಕೂಲಿಗೆ ಹೋಗುವ ಪ್ರಾಯ. ಆಗ ತಂದೆ ಸುಧೀಂದ್ರ ಹಾಲ್ದೊಡ್ಡೇರಿ ಕೆಲಸದ ಮೇಲೆ ರಷ್ಯಾದ ಮಾಸ್ಕೋಕ್ಕೆ ಹೋಗಿದ್ದರಂತೆ. ಮಗಳು ದಿನಾ ಕಾಲ್ ಮಾಡಿ ‘ಅಪ್ಪಾ… ಯಾವಾಗ ಬರ್ತೀರಿ’ ಅಂತ ವಿಚಾರಿಸುತ್ತಿದ್ದರಂತೆ. ಒಂದು ವಾರ ಬಿಟ್ಟು, ಎರಡು ವಾರ ಬಿಟ್ಟು ಎಂದು ಸಾಬೂಬು ಹೇಳುತ್ತಿದ್ದ ತಂದೆ ಸುಧೀಂದ್ರ ಅವರು ‘ಮಗಳೇ… ನಿನಗೆ ಏನು ತರಬೇಕು’ ಎಂದು ಕೇಳಿದ್ರಂತೆ. ತಕ್ಷಣ ಮಗಳು ಹೇಳಿದ್ದು ಒಂದು ಸೂಟ್ ಕೇಸ್ ಫುಲ್ ಚಾಕಲೇಟ್ ಬೇಕಪ್ಪ ಎಂದು.

ಮಗಳ ಕೋರಿಕೆಯಂತೆ ಸುಧೀಂದ್ರ ಒಂದು ಸೂಟ್ ಕೇಸ್ ಪೂರ್ತಿ ಚಾಕಲೇಟ್ ತಂದು ಮಗಳಿಗೆ ಶಾಕ್ ಕೊಟ್ಟಿದ್ದರಂತೆ. ಅದು ಕೂಡ ಬರೋಬ್ಬರಿ 35 ಕೆಜಿ ಚಾಕಲೇಟ್.

ಮಗಳು ಸುಮ್ಮನೇ ಹೇಳುವ ಮಾತನ್ನು ನಿಜ ಮಾಡುವವರೇ ಅಪ್ಪ ಎಂದು ಒಕ್ಕಣೆ ಬರೆಯಲು ಪುತ್ರಿ ಮೇಘನಾ ಮರೆಯಲಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು