3:07 AM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ದರೂರ ಗ್ರಾಪಂ: ಅಧ್ಯಕ್ಷ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹೇಶ್ ಬಾಬು ಕಾಂಬಳೆ  ಹಾಗೂ ತಂಗೆವ್ವ ಶಂಕರ್ ಐಗಳಿ ಆಯ್ಕೆ

02/07/2021, 17:42

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮ ಪಂಚಾಯತಿಗೆ  ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹೇಶ್ ಬಾಬು ಕಾಂಬಳೆ  ಹಾಗೂ ತಂಗೆವ್ವ ಶಂಕರ್ ಐಗಳಿ   ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮಹೇಶ್ ಬಾಬು ಕಾಂಬಳೆ, ನಾವು ಗ್ರಾಮದ ಅಭಿವೃದ್ಧಿಗಾಗಿ ಪಕ್ಷದ ಬೇಧ ಮರೆತು ಜನರ ಹಿತದೃಷ್ಟಿಯಿಂದ ಗ್ರಾಮದ ಜನರ ಕಷ್ಟಗಳಿಗೆ ಸರ್ವ ಸದಸ್ಯರೆಲ್ಲರೂ ಕೂಡಿ ಸ್ಪಂದಿಸುತ್ತೇವೆ  ಎಂದು ಹೇಳಿದರು. 

ತಮ್ಮನ್ನು  ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ಇನ್ನುಳಿದ ಸದಸ್ಯರಿಗೆ  ಹಾಗೂ ಗ್ರಾಮದ ಜನತೆಗೆ ಕೃತಜ್ಞತೆ ಸಮರ್ಪಿಸಿದರು.

ಚುನಾವಣಾ ಅಧಿಕಾರಿ ಉದಯ್ ಪಾಟೀಲ್, ರವೀಂದ್ರ ಬಂಗಾರಪ್ಪ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್. ಎಂ. ಬರಬರೇ, ಸದಸ್ಯರುಗಳಾದ ಮಹೇಶ್ ಡವಳೇಶ್ವರ್, ಶಾಂತಾ ಅಶೋಕ್ ಖುರ್ದ್, ಸುರೇಖಾ ಮಹೇಶ್ ಬೇನಾಡಿ, ವೃಷಭ ನಾಯಿಕ್, ಪ್ರೇಮಾ ಕಾಂಬಳೆ, ಸಿದ್ದಪ್ಪ ದಳವಾಯಿ, ಅಪ್ಪಸಾಬ ಸದಾಶಿವ ಹಳ್ಳೂರ್, ಶೋಭಾ ನೇಮಿನಾಥ್ ಅಸ್ಕಿ, ಹೌಸವ್ವ ಶಂಕರ್ ಕಾಂಬಳೆ, ಅಸ್ಮಾ ಆರ್ ಬಿಜಾಪುರ್, ಆಯಿಷಾ ಮುಲ್ಲಾ, ರಾಜಶ್ರೀ ಎಮ್ ಬಾಳಿಗೇರಿ, ಮಹದೇವ್ ಮಲ್ಲಪ್ಪ ಕಲ್ಲೋಳಿ ಮತ್ತು ಬಿಜೆಪಿ ಅಥಣಿ ಮಂಡಲ ಅಧ್ಯಕ್ಷ ಅಣ್ಣಾಸಾಬ ನಾಯಿಕ್, ಗ್ರಾಮದ ಹಿರಿಯರಾದ ಜಗದೀಶ್ ದಳವಾಯಿ, ಗುರುನಿಂಗ್ ಗುಮತಾಜ. ಗುರುರಾಜ ಗಳತಗಿ,ಪ್ರಕಾಶ ತೇಲಿ,ಪುಟ್ಟು ಹಿರೇಮಠ,ಧರಿಗೌಡ ಬಸಗೌಡರ್, ಅಮೂಲ ನಾಯಿಕ  ಕೂಡ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು