9:41 AM Friday28 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

ಮಂಗಳೂರು ಕೆಎಸ್ಸಾರ್ಟಿಸಿ ಎಡವಟ್ಟು!: ಶಿರಾಡಿ ಮಾರ್ಗವಾಗಿ ತೆರಳಿದ ನೈಟ್ ಸರ್ವಿಸ್ ಬಸ್!; ಕೊನೆಗೂ ಚಾರ್ಮಾಡಿ ಸುತ್ತಿ ಬೆಂಗಳೂರಿಗೆ!!

22/07/2022, 11:57

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು- ಬೆಂಗಳೂರು ಮಧ್ಯೆ ಸಿಗುವ ಶಿರಾಡಿ ಘಾಟಿಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧವಿದೆ ಎನ್ನುವುದು ಇಡೀ ಲೋಕಕ್ಕೆ ಗೊತ್ತಿದ್ದರೂ, ಮಂಗಳೂರಿನ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಗೊತ್ತಿಲ್ಲ ಎಂದರೆ ಯಾರಿಗೂ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಮಳೆ, ಭೂಕುಸಿತದ ಹಿನ್ನೆಲೆಯಲ್ಲಿ ಶಿರಾಡಿ ಘಾಟಿಯಲ್ಲಿ ಘನವಾಹನಗಳನ್ನು ಬಿಡುತ್ತಿಲ್ಲ ಎನ್ನುವ ಅಂಶ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಡಿಟಿಒ, ಡಿಪೋ ಮ್ಯಾನೇಜರ್ ಗೆ ಗೊತ್ತಿಲ್ಲ. ಆಯಕಟ್ಟಿನ ಹುದ್ದೆಯಲ್ಲಿರುವ ಒಬ್ಬ ಕೆಎಸ್ಸಾರ್ಟಿಸಿ ಅಧಿಕಾರಿಯ ಅಜ್ಞಾನದಿಂದ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಪಡಬಾರದ ಪಾಡು ಪಟ್ಟಿದ್ದರು. ಅದರಲ್ಲೂ ಒಂಟಿಯಾಗಿ ಪ್ರಯಾಣಿಸುತ್ತಿರುವ ಮಹಿಳೆಯರ ಪಾಡಂತು ಹೇಳಿ ತೀರದು.


ಮಂಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ನೈಟ್ ಸರ್ವಿಸ್ ಬಸ್ ಹೊರಟ್ಟಿತ್ತು. ಡಿಪೋ ಮ್ಯಾನೇಜರ್ ಶಿರಾಡಿ ಘಾಟಿಯಾಗಿ ಸಂಚರಿಸಲು ಡ್ರೈವರ್ ಗೆ ಸೂಚನೆ ನೀಡಿದ್ದರು. ಬಸ್ ಪಡೀಲ್- ಬಿ.ಸಿ.ರೋಡ್ – ಮಾಣಿಯಾಗಿ ಉಪ್ಪಿನಂಗಡಿ ಸೇರಿತ್ತು. ಅಷ್ಟರಲ್ಲಿ ಶಿರಾಡಿಯಿಂದ ಬಸ್ ಹೋಗಲ್ಲ ಎಂಬ ಸ್ಪಷ್ಟ ಮಾಹಿತಿ ಡ್ರೈವರ್ ಗೆ ಲಭಿಸಿತು. ಇನ್ನೇನು ಮಾಡುವುದು? ಅಂತ ಯೋಚಿಸಿದರೆ, ಉಳಿದಿರುವುದು ಒಂದೇ ರೂಟ್. ಅದೇನೆಂದರೆ ಧರ್ಮಸ್ಥಳ ಮಾರ್ಗವಾಗಿ ಉಜಿರೆಗೆ ಬಂದು ಅಲ್ಲಿಂದ ಚಾರ್ಮಾಡಿ ಘಾಟಿ ಮೂಲಕ ಬೆಂಗಳೂರು ಸೇರಿರುವುದು.

ಮಂಗಳೂರಿನಿಂದ ಉಪ್ಪಿನಂಗಡಿ ವರೆಗಿನ ಸರಿ ಸುಮಾರು ಒಂದು ತಾಸಿನ ಪ್ರಯಾಣ ವೇಸ್ಟ್ ಆದ ಬಳಿಕ ಬಸ್ ಧರ್ಮಸ್ಥಳ ಮಾರ್ಗವಾಗಿ ಪ್ರಯಾಣ ಬೆಳೆಸಿತು. ಇನ್ನೇನು ಸುಖ ಪ್ರಯಾಣ ಸಾಧ್ಯವಾಗುತ್ತದೆ ಎನ್ನುವಷ್ಟರಲ್ಲಿ ಚಾರ್ಮಾಡಿ ಘಾಟಿಯಲ್ಲಿ ಮತ್ತೊಂದು ಕಂಟಕ ಎದುರಾಯಿತು.


ಘಾಟಿಯ 8ನೇ ತಿರುವಿನಲ್ಲಿ ಲಾರಿಯೊಂದು ಕೆಟ್ಟು ನಿಂತು ಉದ್ದಕ್ಕೆ ವಾಹನಗಳು ಸಾಲು ಸಾಲಾಗಿ ನಿಂತಿದ್ದವು.

ಮತ್ತೆ ಪ್ರಯಾಣಿಕರ ಸಂಕಟ, ನರಕ ವೇದನೆ ಶುರುವಾಯಿತು. ಘಾಟಿಯುದ್ಧಕ್ಕೂ ಮೊಬೈಲ್ ನೆಟ್ ವರ್ಕ್ ಸಿಗುವುದಿಲ್ಲ, ಹೆಲ್ಫ್ ಲೈನ್ ವ್ಯವಸ್ಥೆ ಇಲ್ಲ, ದ.ಕ. ಹಾಗೂ ಚಿಕ್ಕಮಗಳೂರು ಎರಡೂ ಜಿಲ್ಲೆಗಳ ನೈಟ್ ಪೆಟ್ರೋಲ್ ವ್ಯವಸ್ಥೆ ಇಲ್ಲ, ಗಸ್ತು ಪೊಲೀಸ್ ಇಲ್ಲ. ಎಲ್ಲರೂ ಕಷ್ಟದಲ್ಲೇ ಇರೋರು,ಕಷ್ಟ ಹೇಳಿಕೊಳ್ಳೋಕೆ ಸಾಧ್ಯವೇ ಇಲ್ಲದ ಪರಿಸ್ಥಿತಿ.ಬಸ್ ಕಿಟಕಿ ತೆಗೆದರೆ ಸೊಳ್ಳೆ, ನೊಣ, ಜೀರುಂಡೆಗಳ ಕಾಟ. ಕಿಟಕಿ ಕ್ಲೋಸ್ ಮಾಡಿದರೆ ಉಸಿರಾಟಕ್ಕೆ ತೊಂದರೆ ಎನ್ನುವ ಸ್ಥಿತಿ. ಇವೆಲ್ಲದರ ಮಧ್ಯೆ ಸುಮಾರು ಒಂದು ತಾಸಿಗೂ ಅಧಿಕ ಸಮಯ ಪ್ರಯಾಣಿಕರು ಬಸ್ ನಲ್ಲಿ ಕಷ್ಟಪಡಬೇಕಾಯಿತು.

ಇದಕ್ಕೆಲ್ಲ ಕಾರಣ ಮಂಗಳೂರು ಕೆಎಸ್ಸಾರ್ಟಿಸಿ ಎಡವಟ್ಟು!: ಶಿರಾಡಿ ಮಾರ್ಗವಾಗಿ ತೆರಳಿದ ನೈಟ್ ಸರ್ವಿಸ್ ಬಸ್!; ಕೊನೆಗೂ ಚಾರ್ಮಾಡಿ ಸುತ್ತಿ ಬೆಂಗಳೂರಿಗೆ!!ಷ್ಟ ಹೇಳಿಕೊಳ್ಳೋಕೆ ಸಾಧ್ಯವೇ ಇಲ್ಲದ ಪರಿಸ್ಥಿತಿ. ಬಸ್ ಕಿಟಕಿ ತೆಗೆದರೆ ಸೊಳ್ಳೆ, ನೊಣ, ಜೀರುಂಡೆಗಳ ಕಾಟ. ಕಿಟಕಿ ಕ್ಲೋಸ್ ಮಾಡಿದರೆ ಉಸಿರಾಟಕ್ಕೆ ತೊಂದರೆ ಎನ್ನುವ ಸ್ಥಿತಿ. ಇವೆಲ್ಲದರ ಮಧ್ಯೆ ಸುಮಾರು ಒಂದು ತಾಸಿಗೂ ಅಧಿಕ ಸಮಯ ಪ್ರಯಾಣಿಕರು ಬಸ್ ನಲ್ಲಿ ಕಷ್ಟಪಡಬೇಕಾಯಿತು.

ಇದಕ್ಕೆಲ್ಲ ಕಾರಣ ಮಂಗಳೂರು ಕೆಎಸ್ಸಾರ್ಟಿಸಿ ಆಡಳಿತ ವೈಖರಿ. ಈ ಕುರಿತು ಕೆಎಸ್ಸಾರ್ಟಿಸಿ ಡಿವಿಜನಲ್  ಟ್ರಾಫಿಕ್ ಕಂಟ್ರೋಲರ್ (ಡಿಟಿಒ) ಅವರಲ್ಲಿ ರಿಪೋರ್ಟರ್ ಕರ್ನಾಟಕ ಮಾತನಾಡಿಸಿದಾಗ, ನಾನು ರಜೆಯಲ್ಲಿದ್ದೆ. ಕಮ್ಯುನಿಕೇಶನ್ ಸಮಸ್ಯೆಯಿಂದ ಎಡವಟ್ಟು ಆಗಿದೆ. ಸಕಲೇಶಪುರ ಕಡೆ ವಿಚಾರಿಸಿದಾಗ, ಬಸ್ ಸಂಚಾರ ಮಾಡುತ್ತದೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇಲ್ಲಿಂದ ಶಿರಾಡಿ ಮಾರ್ಗವಾಗಿ ಬಸ್ ಬಿಡಲಾಗಿದೆ. 

ಇನ್ನು ಮುಂದೆ ಜಿಲ್ಲಾಧಿಕಾರಿ ಆದೇಶವನ್ನೇ ಪರಿಗಣಿಸಿ ಬಸ್ ಸಂಚಾರ ನಡೆಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ನಿಜವಾಗಿ ಈ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸ್ವಲ್ಪವಾದರೂ ಯೋಚನಾಶಕ್ತಿ ಇರುತ್ತಿದ್ದರೆ, ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿ ಆದೇಶ ಏನು ಹೇಳುತ್ತದೆ ಎನ್ನುವುದನ್ನು ಮನದಟ್ಟು ಮಾಡಿಕೊಂಡು ಬಸ್ ರೂಟ್ ಕಾರ್ಯಗತ ಮಾಡಬೇಕಿತ್ತು. ಅದು ಬಿಟ್ಟು ಯಾವನೋ ಹೇಳಿದ ಅಂತ ಬಸ್ ಬಿಟ್ಟೆ ಅಂದ್ರೆ ಅದಕ್ಕೆ ಏನಾರದೂ ಅರ್ಥವಿದೆಯೇ? ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಇದಕ್ಕೆ ಉತ್ತರಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು