5:48 PM Wednesday12 - August 2026
ಬ್ರೇಕಿಂಗ್ ನ್ಯೂಸ್
Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;…

ಇತ್ತೀಚಿನ ಸುದ್ದಿ

ಖ್ಯಾತ ಹಿಂದುಸ್ಥಾನಿ ಸಂಗೀತ ವಿದುಷಿ ವಿಜಯಾ ಕಿಶೋರ್ ಗೆ ಸ್ವರ ಶ್ರದ್ಧಾಂಜಲಿ

09/12/2024, 19:44

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಧಾರವಾಡದ ವೈಷ್ಣವಿ ಪಂಚಮುಖಿ ಅವರು ತಮ್ಮ ಸುಶ್ರಾವ್ಯ ಗಾಯನದಿಂದ ಸಂಗೀತಾ ಪ್ರಿಯರ ಮನ ಸೂರೆಗೊಂಡರು.
ಅವರು ಬಳ್ಳಾರಿ ನಗರದಲ್ಲಿ ಏರ್ಪಡಿಸಿದ ದಿ. ವಿಜಯಾ ಕಿಶೋರ್, ಖ್ಯಾತ ಹಿಂದುಸ್ಥಾನಿ ಸಂಗೀತ ವಿದೂಷಿ, ಅವರ ಮೂರನೇ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ ‘ಸ್ವರ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಭಾಗವಸಿದ್ದರು.

ಬಾಗೇಶ್ರೀ ರಾಗದಲ್ಲಿ ‘ಮೊರೇ ಮನಾ ಚೀಸನ್ನು ವಿಲಂಬಿತ ಏಕ್ ತಾಳದಲ್ಲಿ ಆರಂಭಿಸಿ ದೃತ್ ತೀತಾಳಡಲ್ಲಿ ಕೌನ್ ಕರತ್ ತೊರೆ ಮಿಲನ ಪಿಯಾರವಾ ಪ್ರಸ್ತುತ ಪಡಿಸಿದರು. ನಂತರ ಒಂದು ತರಾನಾ ಹಾಡಿ ಸ್ವರಗಳ ಮೇಲೆ ಹಾಗೂ ತಾನುಗಳ ಮೇಲೆ ತಮ್ಮ ಹಿಡಿತವನ್ನು ಪ್ರದರ್ಶಿಸಿದರು.
ಸುಗಮ ಸಂಗೀತದಲ್ಲಿ ಜನಪ್ರಿಯ ದಾಸರ ಪದಗಳು ಹಾಗೂ ಒಂದು ಅಭಂಗ್ ಪ್ರಸ್ತುತ ಪಡಿಸಿ ಶ್ರೂತ್ರುಗಳ ಮೆಚ್ಚಿಗೆ ಪಡೆದರು.
ಅವರಿಗೆ ತಬಲಾದಲ್ಲಿ ಅವರ ಪತಿ ಜಯತೀರ್ಥ ಪಂಚಮುಖಿ ಸಾಥ್ ನೀಡಿದರೆ ಹಾರ್ಮೋನಿಯಂ ಸಾಥ್ ದೊಡ್ಡಬಸವ, ತಾಳದಲ್ಲಿ ಅವರ ಮಗ ಸುಮನ್ಯು ನೀಡಿದರು.
ಇದಕ್ಕೂ ಮೊದಲು ವಿಜಯಾ ಕಿಶೋರ್ ಅವರ ಶಿಷ್ಯರು ಗಳಾದ ಕುಮಾರ ಶಶಾಂಕ್, ಕುಮಾರ ಆಭಯ ಹಾಗೂ ಕುಮಾರ ಶಮಂತ್ ರಾಗ ಕೇದಾರದಲ್ಲಿ ಛೋಟಾ ಖ್ಯಾಲ್ ಹಾಗೂ ದಾಸರ ಪದ ಮತ್ತು ವಚನ ಪ್ರಸ್ತುತಪಡಿಸಿದರು.
ಜಯಲಕ್ಷ್ಮಿ, ಸಾನ್ವಿ ಹಾಗೂ ಕುಮಾರ್ ಆಯುಷ್ ರಾಗ ಯಮನದಲ್ಲಿ ಛೋಟಾ ಖಾಲಿ ಹಾಗೂ ದಸ್ಕ್ರಾ ಪದ ಮತ್ತು ವಚನ ಗಾಯನ ಮಾಡಿದರು.
ಸನ್ನಿಧಿ ಶುದ್ಧ ಸಾರ್ನ್ಗ್ ರಾಗದಲ್ಲಿ ಒಂದು ಛೋಟಾ ಖ್ಯಾಲ್ ಹಾಗೂ ದಾಸರ ಪದ ಮತ್ತು ವಚನ ಹಾಡಿದರು.
ಹಿರಿಯ ಶಿಷ್ಯೆ ಸಂಧ್ಯಾ ಕೊಳಚಲಂ ಅವರು ಸುಗಮ ಸಂಗೀತದಲ್ಲಿ ಭಾವಗೀತೆ, ದಸರ ಪದ, ವಚನ ಪ್ರಸ್ತುತ ಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು