1:54 PM Friday24 - April 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್…

ಇತ್ತೀಚಿನ ಸುದ್ದಿ

ಕೂಡ್ಲಿಗಿಯಲ್ಲಿ ವಿಶ್ವ ರೈತರ ದಿನಾಚರಣೆ; ಕೃಷಿ ಮಾಡುವವರ ಸಂಖ್ಯೆ ಗಣನೀಯ ಇಳಿಕೆಗೆ ಆತಂಕ; ರೈತರಿಗೆ ಸನ್ಮಾನ

25/12/2023, 15:26

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಕೃಷಿ ಇಲಾಖೆಯ ಕಚೇರಿ ಆವರಣದಲ್ಲಿ, ಕೃಷಿ ಇಲಾಖೆ ಹಾಗೂ ರೈತರಿಂದ ವಿಶ್ವ ರೈತರ ದಿನಾಚರಣೆಯನ್ನು ಆಚರಿಸಲಾಯಿತು. ಕೃಷಿ ಸಮಾಜದ ಪ್ರದಾನ ಕಾರ್ಯದರ್ಶಿ ಎಮ್.ಬಸವರಾಜ್ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಕೃಷಿ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಮುಖಂಡ ಕೆಕೆ ಹಟ್ಟಿ ದೇವರಮನಿ ಮಹೇಶ, ಕಾಯಕಲ್ಪ ರೈತ ಉತ್ಪಾದಕರ ಸಂಘದ ಸಿ.ಇ ಒ.ನಾಗರಾಜ್ ಮಾತನಾಡಿದರು.ಕೃಷಿ ಇಲಾಖೆಯು ಸಹಾಯಕ ನಿರ್ದೆಶಕರಾದ ಸುನೀಲ್ ಕುಮಾರ ಪ್ರಾಸ್ತಾವಿಕ ಮಾತನಾಡಿದರು. ಅಧಿಕಾರಿ ಶ್ರವಣ ಕುಮಾರ್ ನಿರೂಪಿಸಿದರು, ನೀಲಾ ನಾಯ್ಕ್ ಸ್ವಾಗತಿಸಿದರು. ಕೃಷಿ ಕ್ಷೇತ್ರದಲ್ಲಿ ವಿವಿಧ ರೀತಿಯ ಗಣನೀಯ ಸಾಧನೆ ಗೈದ, ರೈತರನ್ನು ಗುರುತಿಸಿ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ಹಿರಿಯ ವಕೀಲರು ಹಾಗೂ ನೋಟರಿ ಸಿದ್ದಪ್ಪ, ಪ್ರಗತಿಪರ ರೈತರಾದ ಬಣವಿಕಲ್ಲು ಎರ್ರಿಸ್ವಾಮಿ, ಶಾಂತನಹಳ್ಳಿ ಎಂ.ಜಿ.
ಸಿದ್ದನಗೌಡ,ಬೊಮ್ಮಯ್ಯ, ಹನುಮಂತಪ್ಪ,ನಾಗರಾಜ,ಬಸವರಾಜಪ್ಪ. ಭರ್ಮಪ್ಪ, ಒಂಟಿಪಾಲಪ್ಪ, ಗುರುಬಸವರಾಜ,ಹೆಗ್ಗಪ್ಪ, ರೈತ ಮುಖಂಡ ಜಂಗಮ ಸೋವೆನಹಳ್ಳಿ ನಂದಿ ಜಂಬಣ್ಣ. ರೈತ ಮಹಿಳೆಯರಾದ ಹೊಸಹಳ್ಳಿ ನೇತ್ರಾವತಿ, ಪೂಜಾರಹಳ್ಳಿ ಈಶ್ವರಮ್ಮ, ಸೇರಿದಂತೆ ಅನೇಕ ರೈತ ಮುಖಂಡರು. ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ, ರೈತರು ಕೃಷಿ ಇಲಾಖಾ ಸಿಬ್ಬಂದಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು