ಇತ್ತೀಚಿನ ಸುದ್ದಿ
ಕ್ಯಾಥೋಲಿಕ್ ಸಭಾ ಮಂಗಳೂರು ಸಿಟಿ ವಲಯದ ಪದಾಧಿಕಾರಿಗಳಿಗೆ ತರಬೇತಿ ಶಿಬಿರ
25/06/2026, 13:05
ಮಂಗಳೂರು(reporterkarnataka.com): ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾಥೋಲಿಕ್ ಸಭಾ ಸಿಟಿ ವಲಯದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ರವಿವಾರ ಕುಲಶೇಖರದ ಕೋರ್ಡೆಲ್ ಹಾಲ್ ನಲ್ಲಿ ನಡೆಯಿತು.
ಕ್ಯಾಥೋಲಿಕ್ ಸಭಾ ಕೇಂದ್ರೀಯ ಸಮಿತಿಯ ಮಾಜಿ ಅಧ್ಯಕ್ಷ ನೈಜಿಲ್ ಪಿರೇರಾ ಅವರು ತರಬೇತಿಯನ್ನು ನೀಡಿ ಪದಾಧಿಕಾರಿಗಳ ಕರ್ತವ್ಯಗಳನ್ನು ವಿವರಿಸಿದರು.
ಕ್ಯಾಥೋಲಿಕ್ ಸಭಾ ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ ಆಂಜೆಲೋರ್ ಗಾರ್ಡಿಯನ್ ಏಂಜೆಲ್ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಪೆಡ್ರಿಕ್ ಮೊಂತೇರೊ ಅವರು ಸಿಟಿ ವಲಯದ ವಿಗಾರ್ ವಾರ್ ಆಗಿ ಹೊಸತಾಗಿ ನೇಮಕಗೊಂಡ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರನ್ನು ಹೂ ಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಮಾತನಾಡಿ ಪ್ರತಿಯೊಂದು ಚರ್ಚ್ ನಲ್ಲಿ ಕ್ಯಾಥೋಲಿಕ್ ಸಭಾ ಘಟಕವು ತನ್ನದೇ ಬಲವನ್ನು ಹೊಂದಿದೆ. ಸಂಘಟನೆಯು ಮುಂದಿನ ದಿನಗಳಲ್ಲಿ ವಲಯ ಮಟ್ಟದಲ್ಲಿ ಇನ್ನಷ್ಟು ಬಲಯುತಗೊಳ್ಳಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಸಭಾ ಸಿಟಿ ವಲಯದ ಅಧ್ಯಕ್ಷ
ಸಂತೋಷ್ ಡಿ ಕೋಸ್ತಾ, ಉಪಾಧ್ಯಕ್ಷ ರೊನಾಲ್ಡ್ ಸಲ್ದಾನ್ಹಾ, ಸಹ ಕಾರ್ಯದರ್ಶಿ ಡೆನ್ನಿಸ್ ಡಿ ಸೋಜಾ ವಾಮಂಜೂರು, ಕೋಶಾಧಿಕಾರಿ ರೊನಾಲ್ಡ್ ರೊಡ್ರಿಗಸ್ ದೇರೆಬೈಲ್ ಉಪಸ್ಥಿತರಿದ್ದರು.












