ಇತ್ತೀಚಿನ ಸುದ್ದಿ
Mangaluru | ಪಾದುವ ಪದವಿಪೂರ್ವ ಕಾಲೇಜಿನ ಪಾದುವನ್ ವಿದ್ಯಾರ್ಥಿ ಸಂಘದ ಉದ್ಘಾಟನೆ
25/06/2026, 10:05
ಮಂಗಳೂರು(reporterkarnarltaka.com): ಉತ್ತಮ ನಾಯಕನಾದವ ಪೆನ್ಸಿಲ್ ಮತ್ತು ರಬ್ಬರ್ ಇದ್ದಂತೆ. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು ಎಂದು ಸಂತ ಲಾರೆನ್ಸ್ ಅಂಗ್ಲ ಮಾಧ್ಯಮ ಪ್ರೌಢಶಾಲೆ ಬೊಂದೇಲ್ ನ ಮುಖ್ಯೋಪಾಧ್ಯಾಯ ವಂದನೀಯ ಫಾ. ಪೀಟರ್ ಗೊನ್ಸಾಲ್ವಿಸ್ ಹೇಳಿದ್ದಾರೆ.
ಪಾದುವ ಪದವಿಪೂರ್ವ ಕಾಲೇಜಿನ ಪಾದುವನ್ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಮಾರಂಭದಲ್ಲಿ ಭಾಗವಹಿಸಿದ್ದ ಇನ್ನೋರ್ವ ಅತಿಥಿ 92.7 ಬಿಗ್ ಎಫ್.ಎಂ ನ ಆರ್ ಜೆ ನಯನಾ ಶೆಟ್ಟಿ ಮಾತನಾಡಿ ನಮ್ಮ ಬದುಕಿನಿಂದ ಬೇರೆಯವರ ಬದುಕನ್ನು ಬದಲಾವಣೆ ಮಾಡುವುದೇ ನಿಜವಾದ ಬದುಕು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ಗುರಿಯೊಂದಿಗೆ ರೂಪಿಸಬೇಕು. ಆಗ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಾದುವ ವಿದ್ಯಾಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕರು ಮತ್ತು ಪಾದುವ ಪದವಿ ಕಾಲೇಜಿನ ಪ್ರಾಂಶುಪಾಲ ಅರುಣ್ ವಿಲ್ಸನ್ ಲೋಬೋ ಮಾತನಾಡಿ, ನಾವು ಸರಿಯಾದ ಮಾರ್ಗವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಾಗ ಮಾತ್ರ ಬದುಕನ್ನು ಸುಂದರವಾಗಿ ರೂಪಿಸಲು ಸಾಧ್ಯ ಎಂದರು.
ಪಾದುವ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರೋಶನ್ ಸಾಂತುಮಯೋರ್, ಅತಿಥಿಗಳನ್ನು ಸ್ವಾಗತಿಸಿ. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ವಿದ್ಯಾರ್ಥಿ ಸಂಘದ ಸಂಯೋಜಕರಾದ ಲಾವಿಯಾ ಮೊಂತೆರೊ, ರೇಷ್ಮಾ ವಿನಯ್, ವಿದ್ಯಾರ್ಥಿ ನಾಯಕ ನವನೀತ್ ಡಿ.ಕೆ. ಉಪನಾಯಕಿ ತನುಶ್ರೀ, ಕಾರ್ಯದರ್ಶಿ ಸ್ವಾತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅದಿತಿ ವಂದಿಸಿದರೆ, ವಿದ್ಯಾರ್ಥಿನಿ ಧನಶ್ರೀ ಕಾರ್ಯಕ್ರಮ ನಿರೂಪಿಸಿದರು













