10:43 AM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಕಟೀಲು ಎಸ್ ಡಿಪಿಟಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕ್ಯಾಪ್ಸ್ ಸೈನ್ಸ್ ಪಾರ್ಕ್ ಉದ್ಘಾಟನೆ

21/11/2024, 19:02

ರಾಯಿ ರಾಜಕುಮಾರ ಮೂಡುಬಿದಿರೆ

info.reporterkarnataka@gmail.com

ಮಂಗಳೂರು ತಾಲೂಕಿನ ಕಟೀಲು ಎಸ್ ಡಿಪಿಟಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕ್ಯಾಪ್ಸ್ ಸಂಸ್ಥೆಯವರಿಂದ ಸೈನ್ಸ್ ಪಾರ್ಕ್ ಹಾಗೂ ಗುರು ಪೂಜನ ಕಾರ್ಯಕ್ರಮ ಕ್ಯಾಪ್ಸ್ ಫೌಂಡೇಶನ್ ಬೆಂಗಳೂರು ವತಿಯಿಂದ ನವೆಂಬರ್ 20ರಂದು ನಡೆಯಿತು. ಪದವಿಪೂರ್ವ ಕಾಲೇಜಿನ ಬದಿಯಲ್ಲಿ ಕ್ಯಾಪ್ಸ್ ಸೈನ್ಸ್ ಪಾರ್ಕ್ ಅನ್ನು ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ದೀಪ ಬೆಳಗಿ ಉದ್ಘಾಟಿಸಿದರು.


ತರುವಾಯ ನಡೆದ ಸಭಾ ಕಾರ್ಯಕ್ರಮದಲ್ಲಿ ಕಟಿಲಿನ ವೇ. ಮೂ. ವಾಸುದೇವ ಅಸ್ರಣ್ಣ ಮಾತನಾಡಿ, ಕಾಲೇಜಿನಲ್ಲಿಯೇ ಕಲಿತ ವ್ಯಕ್ತಿ ಈ ಮಹಾನ್ ಕಾರ್ಯವನ್ನು ಮಾಡಿರುವುದಕ್ಕೆ ಶುಭ ಹಾರೈಸಿದರು.
ಹಳೆ ವಿದ್ಯಾರ್ಥಿಯ ಸಾಧನೆ ಈಗಿನ ಮಕ್ಕಳಿಗೆ ಪ್ರೇರಕ ಎಂದು ವೇ ಮೂ ಅನಂತಪದ್ಮನಾಭ ಆಸ್ರಣ್ಣ ಶುಭ ಹಾರೈಸಿದರು. ವೇ.ಮೂ ಹರಿನಾರಾಯಣ ಅಸ್ರಣ್ಣ ಮಾತನಾಡಿ ವಾಮನ ಮೂರ್ತಿಯಂತಿದ್ದ ಚಂದ್ರಶೇಖರ ಶೆಟ್ಟಿ ತ್ರಿ ವಿಕ್ರಮನಂತೆ ಬೆಳೆದು ಕಾಲೇಜಿಗೆ ಉತ್ತಮ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಕನ್ನಡಿಯಂತೆ ಸ್ವಚ್ಛ ಸಾಧಕನಾಗಿ ಮೆರೆಯುತ್ತಿರುವ ಇವರು ವಿಜ್ಞಾನದ ಅತ್ಯುತ್ತಮವಾದಂತಹ ಉಪಕರಣಗಳನ್ನು ಸೈನ್ಸ್ ಪಾರ್ಕ್ ನಲ್ಲಿ ಅಳವಡಿಸಿ ಕಾಲೇಜಿಗೆ ಮಾತ್ರವಲ್ಲ ಇಡೀ ಜಿಲ್ಲೆಯ ಶಾಲೆಯ ವಿದ್ಯಾರ್ಥಿಗಳಿಗೂ ಒದಗಿಸಿ ಕೊಟ್ಟಿರುವುದು ಪ್ರಶಂಸನೀಯ ಎಂದರು.
ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಕ್ಯಾಪ್ಸ್ ಫೌಂಡೇಶನ್ ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಎಲ್ಲರೂ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ತ್ಯಜಿಸಿ ಪರ್ಯಾಯ ವಸ್ತುಗಳನ್ನು ಉಪಯೋಗಿಸಬೇಕೆಂದು ಚಂದ್ರಶೇಖರ ಶೆಟ್ಟಿ ಕೇಳಿಕೊಂಡರು. ನವರಸಗಳನ್ನು ತೋರಿಸಿಕೊಡುವ ಯಕ್ಷಗಾನಕ್ಕೂ ಪ್ರಾಧಾನ್ಯತೆಯನ್ನು ಕೊಡಬೇಕೆಂದು ಆಶಿಸಿದರು. ಅವರಿಗೆ ಸಾಕಷ್ಟು ಉತ್ತೇಜನವನ್ನು ಕೊಟ್ಟ ಡಾ. ಕೃಷ್ಣ ಕಾಂಚನ್ ಹಾಗೂ ನಾಗೇಶ್ ರಾವ್ ಅವರನ್ನು ಅಭೂತಪೂರ್ವಾಗಿ ಗುರು ಪುರಸ್ಕಾರದೊಂದಿಗೆ ಸನ್ಮಾನಿಸಿದರು.
ಸಂಸ್ಕೃತ ಅಧ್ಯಾಪಕ ಶ್ರೀವತ್ಸ ಸ್ವಾಗತಿಸಿದರು. ಅಧ್ಯಾಪಕ ರಾಜಶೇಖರ ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು