ಇತ್ತೀಚಿನ ಸುದ್ದಿ
*ಸಂಪಾಜೆ | ಕಡಮಕಲ್ಲು ಮೀಸಲು ಅರಣ್ಯದಲ್ಲಿ ಕಾಟಿ ಬೇಟೆ: ಇಬ್ಬರ ಬಂಧನ*
08/08/2026, 15:20
ಗಿರಿಧರ್ ಕೊಂಪುಳಿರ ಸುಳ್ಯ
info.reporterkarnataka@gmail.com
ಸಂಪಾಜೆ ಬಳಿಯ ಮಂಗಳೂರು ಉಪ ವಿಭಾಗದ ಸುಳ್ಯ ಅರಣ್ಯ ವಲಯದ ಪೂಮಾಲೆ ರಕ್ಷಿತಾ ಅರಣ್ಯದಲ್ಲಿ ಕಾಡುಕೋಣ (ಕಾಟಿ ) ಹತ್ಯೆ ಮಾಡಿ ಮಾಂಸ ಮಾರಾಟ ಮಾಡುವ ಸಂದರ್ಭ ಖಚಿತ ಮಾಹಿತಿ ಮೆರೆಗೆ ಕೊಡಗು ಸಂಪಾಜೆ ವಲಯ ಅರಣ್ಯ ಇಲಾಖೆ ದಾಳಿ ನಡೆಸಿ ಮಾಲು ಸಮೇತ ಇಬ್ಬರನ್ನು ಬಂದಿಸಿದ್ದಾರೆ.

ಚೆಂಬು ಗ್ರಾಮದ ಗೌತಮ್ ಕುಟ್ಟೇಟಿ ಹಾಗೂ ಪೆರಾಜೆ ಗ್ರಾಮದ ಶರತ್ ಕೊಳಂಗಾಯ ಬಂಧಿತರಾಗಿದ್ದು ಓರ್ವ ತಲೆ ಮರೆಸಿಕೊಂಡಿದ್ದಾನೆ. ಬಂಧಿತರಿಂದ ಒಂದು ಮಾರುತಿ ಇಕೋ ವಾಹನ, 17 ತೋಟಗಳು, ಒಂದು ಏರ್ ಗನ್ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ ಬಂದೂಕು ತಲೆಮರೆಸಿಕೊಂಡ ಯತಿನ್ ತೆಗೆದುಕೊಂಡು ಹೋಗಿರುವ ಶಂಕೆ ಇದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ. ಬಂದಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.













