3:06 AM Thursday20 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಅಧಿಕಾರದಲ್ಲಿದ್ದಾಗ ನೀರು ಹರಿಸದ ಮಾಜಿ ಶಾಸಕ ಶ್ರೀಮಂತ ಪಾಟೀಲರು ತಿಂಗಳಲ್ಲಿ ನೀರು ಬಿಡುತ್ತೇನೆ ಎನ್ನುತ್ತಿರುವುದು ಹಾಸ್ಯಾಸ್ಪದ: ಕಾಂಗ್ರೆಸ್ ಟೀಕೆ

21/10/2023, 15:07

ಶಿವರಾಯ ಲಕ್ಷಣ ಕರ್ಕರಮುಂಡಿ

info.reporterkarnataka@gmail.com

ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರು ಅಧಿಕಾರದಲ್ಲಿದ್ದಾಗ ಹೇಳಿಕೆ ಮಾತ್ರ ನೀಡಿದ್ದಾರೆಯೇ ಹೊರತು ಶ್ರೀ ಬಸವೇಶ್ವರ ಏತ ನೀರಾವರಿಯ ಕಾಲುವೆಯಲ್ಲಿ ನೀರು ಹರಿಸಿಲ್ಲ. ಈಗ ನನಗೆ ಅಧಿಕಾರ ಕೊಡಿ ಒಂದು ತಿಂಗಳಲ್ಲಿ ನೀರು ಹರಿಸುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಟೀಕಿಸಿದೆ
5 ವರ್ಷ ಬಿಜೆಪಿ ಸರಕಾರ ಇದ್ದು ಕಾಗವಾಡ ಮತ ಕ್ಷೇತ್ರದ ಶಾಸಕರಾಗಿ ಸಚಿವರಾಗಿ ಶ್ರೀಮಂತ ಪಾಟೀಲರ ಅಧಿಕಾರದಲ್ಲಿದ್ದರು ದಿನಕ್ಕೊಂದು ಹೇಳಿಕೆಯನ್ನು ಶ್ರೀ ಬಸವೇಶ್ವರ ಏತ ನೀರಾವರಿ ಬಗ್ಗೆ ನೀಡತಾ ಇದ್ದರು. ಅದೆಲ್ಲ ಕೇವಲ ಹೇಳಿಕೆಯಾಗಿ ಉಳಿದಿದೆ ಹೊರತು ನೀರು ಮಾತ್ರ ಕಾಲುವೆಗೆ ಬರಲಿಲ್ಲ. ಆದರೆ ರೈತರ ಕಣ್ಣಲ್ಲಿ ನೀರು ಬಂತು. ಈಗ ಒಂದು ತಿಂಗಳು ನನಗೆ ಅಧಿಕಾರಿ ಕೊಡಿ ನೀರು ಹರಿಸುತ್ತೇನೆ ಎನ್ನುವುದು ನಾಟಕೀಯ ಹಾಸ್ಯಾಸ್ಪದ ಮಾತು ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ರೈತ ಜನರನ್ನು ಕೂಡಿಸಿಕೊಂಡು ಹೋರಾಟ ಸಮಯದಲ್ಲಿ ಹೇಳಿಕೆ ನೀಡಿದರೆ ರೈತರು ಯಾರು ಕಿವಿ ಕೊಡಲ್ಲ. ರೈತರು ಪ್ರಜ್ಞಾವಂತರಿದ್ದಾರೆ ಎಂದು ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ವಿನಾಯಕ ಬಾಗಡಿ ಹಾಗೂ ಪ್ರವೀಣ ನಾಯಿಕ ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಶ್ರೀಮಂತ ಪಾಟೀಲರೆ ತಮಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಈ ವರ್ಷದ ಹಂಗಾಮಿನ ತಮ್ಮ ಒಡೆತನದ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿದ ವೇಳೆ ಸರಿಯಾದ ತೂಕ ನೀಡಿ ಕಾಟ ಹೊಡೆಯದೆ ಸರಿಯಾಗಿ ಬಿಲ್ಲನ್ನು ನೀಡಿ ಸುಮ್ಮನೆ ರೈತರಿಗೆ ಸುಳ್ಳು ಹೇಳಿ ಮೋಸ ಮಾಡುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಗವಾಡ ಕ್ಷೇತ್ರದ ಶಾಸಕರಾದ ರಾಜು ಕಾಗೆ ಹಾಗೂ ಅಥಣಿ ಕ್ಷೇತ್ರದ ಲಕ್ಷ್ಮಣ ಸವದಿ ಇಬ್ಬರು ಕೊಡಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸುಭದ್ರವಾದ ರಾಜ್ಯ ಸರಕಾರದಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಶ್ರೀ ಬಸವೇಶ್ವರ ಯಾತ ನೀರಾವರಿ ಮೂಲಕ ಶೀಘ್ರದಲ್ಲಿ ಕಾಲುವೆಗೆ ನೀರು ಹರಿಸುವ ಮೂಲಕ ಕಾಗವಾಡ ಮತ ಕ್ಷೇತ್ರದ ರೈತರ ಕನಸು ನನಸಾಗಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದರಾಯ ತೋಡಕರ, ಉಮೇಶ ಪಾಟೀಲ,ಅಸ್ಲಾಂ ಮುಲ್ಲಾ, ಸಂಜಯ ಅಡಾಟೆ, ನಾಯ್ಕಭಾ ಶಿಂದೆ, ಪರಗೊಂಡ ಮುದೋಳ, ವಿಠ್ಠಲ ಅವಳೆ, ಅಶೋಕ ಬಾಡಗಿ, ಅಪ್ಪು ಚೌಗಲಾ, ಅಶೋಕ ಪೂಜಾರಿ, ನಿಜಗುಣಿ ಮಗದುಮ್ಮ, ಮೋಹನ ಬಾಗಡಿ,ಶಿವಾನಂದ ಮಗದುಮ್ಮ, ಪ್ರವೀಣ ಭಂಡಾರೆ, ಹಣಮಂತ ಕಾಂಬಳೆ, ರಮೇಶ ಕಾಂಬಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು