3:41 PM Wednesday29 - April 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು…

ಇತ್ತೀಚಿನ ಸುದ್ದಿ

ಕಡಲನಗರಿಯಲ್ಲಿ ಕೃಷ್ಣಲೋಕ ಸೃಷ್ಟಿ: ಕದ್ರಿಯಲ್ಲಿ ಮೇಳೈಸಿದ ಕೇಶವ, ಅಚ್ಯುತ, ಮಾಧವ!

06/09/2023, 23:16

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಅಲ್ಲಿ ಕೃಷ್ಣಲೋಕವೇ ಸೃಷ್ಟಿಯಾಗಿತ್ತು. ಎಲ್ಲಿ ನೋಡಿದರಲ್ಲಿ ಕೃಷ್ಣ ಪರಮಾತ್ಮನ ದರುಶನ. ಹಾಗೆಂತ ಕೇಶವ, ಅಚ್ಯುತ, ಮಾಧವರ ವಿಗ್ರಹ- ಮೂರ್ತಿಗಳ ದರ್ಶನವಲ್ಲ. ಓಡಾಡುವ ಪರಮಾತ್ಮರೇ ಅಲ್ಲಿ ಕಾಣಸಿಗುತ್ತಿದ್ದರು.


ಕೆಲವು ಕೃಷ್ಣರು ಅಮ್ಮನ ಕಂಕುಳಲ್ಲಿ ಕಂಡು ಬಂದರೆ, ಇನ್ನು ಕೆಲವರು ಅಪ್ಪನ ತೋಳಲ್ಲಿ, ಅಜ್ಜನ ಹೆಗಲಲ್ಲಿ ಜೋತು ಬಿದ್ದಿದ್ದರು. ಐಸ್ ಕ್ರೀಮ್ ತಿನ್ನುವ ಕೃಷ್ಣರು, ಕ್ಯಾಡ್ ಬರಿ ಮೆಲ್ಲುವ ಕೃಷ್ಣರು, ಕುರ್ಕುರೆ ಸವಿಯುವ ಕೃಷ್ಣರೂ ಅಲ್ಲಿದ್ದರು.


ಇದೆಲ್ಲ ಕಂಡು ಬಂದದ್ದು ನಗರದ ಕದ್ರಿ ಮಂಜುನಾಥ ದೇವಳದ ಆವರಣದಲ್ಲಿ. ಕಲ್ಕೂರ ಪ್ರತಿಷ್ಠಾನ ಪ್ರತಿವರ್ಷ ನಡೆಸುವಂತೆ ಈ ಬಾರಿಯೂ ರಾಷ್ಟ್ರೀಯ ಕೃಷ್ಣವೇಷ ಸ್ಪರ್ಧೆ ಏರ್ಪಡಿಸಿತ್ತು. ಬಾಲಕೃಷ್ಣ, ತುಂಟ ಕೃಷ್ಣ, ಕಿಶೋರ ಕೃಷ್ಣ, ಯಕ್ಷಕೃಷ್ಣ,ಯಶೋಧಕೃಷ್ಣ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಟ್ಟಿತ್ತು. ಪುಟಾಣಿಗಳಿಗಿಂತಲೂ ಅವರ ಹೆತ್ತವರು ಬಹಳ ಖುಷಿಯಿಂದ ತಮ್ಮ ಮಗ-ಮಗಳನ್ನು ಜತೆಗೆ ಕರೆದುಕೊಂಡು ಬಂದಿದ್ದರು. ಕೆಲವರು ಹೊರಗಿನಿಂದಲೇ ತಮ್ಮ ಮಕ್ಕಳಿಗೆ ಕೃಷ್ಣವೇಷ ಹಾಕಿಸಿಕೊಂಡು ಬಂದರೆ ಇನ್ನೂ ಕೆಲವರು ದೇವಳದಲ್ಲೇ ಪ್ರಸಾದನ ಮಾಡಿಸುವುದು ಕಂಡು ಬಂತು. ಹೆಚ್ಚಿನ ಮಕ್ಕಳು ಉತ್ಸುಕತೆಯಿಂದ ತಮ್ಮನ್ನು ಕೃಷ್ಣನಾಗಿ ಪರಿವರ್ತಿಸಿಕೊಂಡರೆ, ಕೆಲವು ಮಕ್ಕಳು ವೇಷ ಬೇಡವೆಂದು ಅಳುವುದು ಕೂಡ ಕಂಡು ಬಂತು. ಅಂತಹ ಮಕ್ಕಳಿಗೆ ಪೋಷಕರು ಐಸ್ ಕ್ರೀಮ್, ಕ್ಯಾಡ್ ಬರಿ ಮುಂತಾದ ಆಮಿಷೆಗಳನ್ನೊಡಿ ಮಕ್ಕಳ ಮುಖಕ್ಕೆ ಬಣ್ಣ ಹಚ್ಚುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದರು. ತಂದೆ- ತಾಯಿಯಂದಿರಿಗೆ ಗುರುತು ಸಿಗದಷ್ಟು ಕೃಷ್ಣವೇಷ ಹಾಕಿದ ಮಕ್ಕಳು ಬದಲಾಗಿದ್ದರು. ಒಟ್ಟಿನಲ್ಲಿ ಕದ್ರಿ ಕೃಷ್ಣಲೋಕವಾಗಿ ಪರಿವರ್ತನೆಗೊಂಡಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು