8:59 AM Saturday20 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ಪಚ್ಚನಾಡಿ ಸಂತೋಷ್ ನಗರ; 1.79 ಎಕರೆ ಜಾಗದಲ್ಲಿ ಸುಸಜ್ಜಿತ ಆಟದ ಮೈದಾನ: ಶಾಸಕ ಡಾ. ಭರತ್ ಶೆಟ್ಟಿ

31/01/2023, 11:45

ಮಂಗಳೂರು(reporterkarnataka.com):35 ಲಕ್ಷ ರೂ ವೆಚ್ಚದಲ್ಲಿ ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 19ನೇ ಪಚ್ಚನಾಡಿ ವಾರ್ಡ್ ನ ಸಂತೋಷ್ ನಗರ ಪರಿಸರದ ನಿರಾಶ್ರಿತರ ಕೇಂದ್ರ ಬಳಿ ಪ್ರಸ್ತುತ ಇರುವ ಆಟದ ಮೈದಾನವನ್ನು ಮೂಲಭೂತ ಸೌಕರ್ಯ ಉಳ್ಳ ಸುಸಜ್ಜಿತ ಕ್ರೀಂಡಾಗಣ ನಿರ್ಮಿಸಲು ಒಟ್ಟು 1ಎಕ್ರೆ 79 ಸೆಂಟ್ಸ್ ಜಾಗದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ದಿಂದ ಅಭಿವೃದ್ಧಿಗೊಳ್ಳಲಿರುವ ಯೋಜನೆಗೆ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು ಈಗಾಗಲೇ ಪಚ್ಚನಾಡಿ ವಾರ್ಡ್ ನಾದ್ಯಂತ ಒಟ್ಟು 11 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳಾಗಿದ್ದು, ಸುಮಾರು 5.30 ಕೋಟಿ ರೂ ಮೊತ್ತದ ಅಭಿವೃದ್ಹಿ ಕಾರ್ಯಗಳು ಅನುಷ್ಠಾನ ಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ 2 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ರೂಪು ರೇಷೆ ನೀಡಲಾಗಿದ್ದು, ಅತೀ ಶೀಘ್ರದಲ್ಲಿ ಕಾರ್ಯಗತ ಗೊಳಿಸುವುದಾಗಿ ತಿಳಿಸಿದರು.

ಇಲ್ಲಿನ ಸ್ಥಳೀಯರ ಬೇಡಿಕೆಯಂತೆ ಪ್ರಸ್ತುತ ಇರುವ ಆಟದ ಮೈದಾನವನ್ನು ಕಾರ್ಪೊರೇಟರ್ ರವರು ಮುತುವರ್ಜಿ ವಹಿಸಿ ಅಧಿಕೃತವಾಗಿ ಕಾಯ್ದಿರಿಸಿದ್ದು, ಇಲ್ಲಿ ಬಯಲು ರಂಗ ಮಂದಿರ, ಪೆವಿಲಿಯನ್, ಶೌ
ಚಾಲಯ, ಸುತ್ತಲೂ LED ದೀಪ, ಪಿಚ್ ನಿರ್ಮಾಣ, ವಾಲಿಬಾಲ್ ಕೋರ್ಟ್, ಶೆಟಲ್ ಕೋರ್ಟ್, ಆವರಣ ಗೋಡೆ ಇನ್ನಿತರ ಮೂಲಭೂತ ಸೌಕರ್ಯ ಉಳ್ಳ ಕ್ರೀಡಾಂಗಣ 35 ಲಕ್ಷ ರೂ ಅನುದಾನದಲ್ಲಿ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಿ ಹೈ ಮಾಸ್ಟ್, ಫ್ಲಡ್ ಲೈಟ್ ದೀಪ ಅಳವಡಿಸಿ, ಸುತ್ತಲೂ ವಾಕಿಂಗ್ ಟ್ರಾಕ್ ಇನ್ನಿತರ ಸೌಕರ್ಯಗಳನ್ನೂ ಕಲ್ಪಿಸುವುದಾಗಿ ತಿಳಿಸಿದರು.
ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೋಂದೆಲ್, ಮಂಡಲ ಉಪಾಧ್ಯಕ್ಷೆ ಅಮೃತ್ ಲಾಲ್ ಡಿಸೋಜ, ಮಂಡಲ ಹಿಂದುಳಿದ ಮೋರ್ಚಾ ಖಜಾಂಚಿ ವಿಜಯ ಕುಮಾರ್ ಅಮೀನ್, ಮಂಡಲ ಸದಸ್ಯೆ ಲತಾ ರೈ, ಪಚ್ಚನಾಡಿ ಬಿಜೆಪಿ ಮಹಿಳಾ ಪ್ರಮುಖ್ ಇಂದಿರಾ ಸುವರ್ಣ,
ಬೂತ್ ಸಂಖ್ಯೆ 143 ಸಂತೋಷ್ ನಗರ ಇದರ ಅಧ್ಯಕ್ಷ ಜಯಪ್ರಕಾಶ್, ನಿಕಟ ಪೂರ್ವ ಬಿಜೆಪಿ ವಾರ್ಡ್ ಅಧ್ಯಕ್ಷ ನವೀನ್ ಶೆಟ್ಟಿ , ಶಕ್ತಿ ಕೇಂದ್ರ ಪ್ರಮುಖರು, ಮಂಡಲ ಮುಖಂಡರು, ಪ್ರಮುಖರಾದ ಸಂದೇಶ್ ಪೂಜಾರಿ, ಮಹೇಶ್ ಕುಲಾಲ್, ರತೀಶ್, ವಿನೋದ್ ದೇವಾಡಿಗ, ಸಂದೀಪ್, ವಿಜಯ ಶೆಟ್ಟಿ, ಗಣೇಶ್ ಕುಲಾಲ್, ಹರೀಶ್ , ಗೌತಮ್ ಬಂಗೇರ, ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು