ಇತ್ತೀಚಿನ ಸುದ್ದಿ
1 ಕೋಟಿ ವೆಚ್ಚದಲ್ಲಿ ದೇರೆಬೈಲ್ ಪೂರ್ವ ವಾರ್ಡಿನ ಲ್ಯಾಂಡ್ ಲಿಂಕ್ಸ್ ನ ರಸ್ತೆ ಅಭಿವೃದ್ಧಿ ಕಾಮಗಾರಿ: ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ
04/01/2023, 22:52

ಮಂಗಳೂರು(reporterkarnataka.com): ಸುಮಾರು 1 ಕೋಟಿ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 23ನೇ ದೇರೆಬೈಲ್ ಪೂರ್ವ ವಾರ್ಡಿನ ಲ್ಯಾಂಡ್ ಲಿಂಕ್ಸ್ ನ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ವೈ. ಭರತ್ ಶೆಟ್ಟಿ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮೇಯರ್ ಜಯಾನಂದ ಅಂಚನ್, ಪಾಲಿಕೆ ಸ್ಥಳೀಯ ಸದಸ್ಯೆ ರಂಜನಿ ಕೋಟ್ಯಾನ್, ಮಾಜಿ ಸ್ಥಳೀಯ ಕಾರ್ಪೊರೇಟರ್ ರಾಜೇಶ್ ಕೊಂಚಾಡಿ, ಭಾಸ್ಕರ್ ಸಾಲಿಯಾನ್, ರಾಮಣ್ಣ ಮೈಪಾಡಿ, ಕಾವೂರು ಮಹಾಶಕ್ತಿ ಕೇಂದ್ರ-2ರ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ, ಶಕ್ತಿ ಕೇಂದ್ರ ಪ್ರಮುಖರಾದ ರಾಘವೇಂದ್ರ ಭಟ್,ಬೂತ್ ಅಧ್ಯಕ್ಷರಾದ ನಾರಾಯಣ ಕಂಜರ್ಪಣೆ, ಅರುಣ್ ಕುಮಾರ್, ಬೂತ್ ಕಾರ್ಯದರ್ಶಿಯಾದ ಅನಿಶ್ ಕೆ. ವೈ, ಗಣೇಶ್ ಕುಮಾರ್, ಪ್ರಮುಖರಾದ ನಾಗರಾಜ್ ಶೆಟ್ಟಿ ಕಿರಣ್ ಕುಮಾರ್, ಜಿತೇಶ್ ದೇವಾಡಿಗ, ನಾಗೇಶ್, ವಿಜಯಕಾಂತ್ ಶೇಟ್, ಸತೀಶ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.