12:25 AM Friday13 - February 2026
ಬ್ರೇಕಿಂಗ್ ನ್ಯೂಸ್
ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ…

ಇತ್ತೀಚಿನ ಸುದ್ದಿ

ಚಟ್ನಿ ತರಹ ಮಡಿಕೇರಿ- ಚೆಟ್ಟಳ್ಳಿ ರಸ್ತೆ: ನಿರ್ಮಾಣಗೊಂಡು ಮೂರೇ ದಿನಗಳಲ್ಲಿ ಕುಸಿದು ಬಿದ್ದ ತಡೆಗೋಡೆ!

20/05/2022, 08:57

ಮಡಿಕೇರಿ (reporterkarnataka.com):ಮಡಿಕೇರಿಯಿಂದ ಚೆಟ್ಟಳ್ಳಿಗೆ ತೆರಳುವ ರಸ್ತೆ ಪಾಳುಬಿದ್ದು ಈ ವರ್ಷದ ಮಳೆಗಾಲಕ್ಕೆ ಮೂರು ವರ್ಷಗಳೇ ಕಳೆದುಹೋಗಿದೆ. 

ಸಿದ್ದಾಪುರ ಹಾಗು ಚೆಟ್ಟಳ್ಳಿಯ ಪ್ರಯಾಣಿಕರು ಶಾಲಾ ಕಾಲೇಜು ಮಕ್ಕಳು, ನೌಕರರು ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರತಿನಿತ್ಯ ಮಡಿಕೇರಿ ಕಡೆ ಪಯಣಿಸಬೇಕಾಗಿದೆ. ಬೆಳಿಗ್ಗೆ ಹೋದವರು ಸಂಜೆ ಹೊತ್ತಿಗೆ ಮನೆ ಸೇರುವುದೇ ಗ್ಯಾರೆಂಟಿಲ್ಲದಾಗಿದೆ. 


ಈ ವರ್ಷ ಹಲವಾರು ಕೋಟಿ ಹಣ ವ್ಯಯ ಮಾಡಿ ರಸ್ತೆಗೆ ಲೋಕಾಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಿಸಲಾಗಿದೆ. ಕೆಲಸ ಎಷ್ಟರಮಟ್ಟಿಗೆ ಕಳಪೆಯಾಗಿದೆ ಎಂದರೆ ತಡೆ ಗೋಡೆ ನಿರ್ಮಿಸಿದ ಮೂರು ದಿವಸಕ್ಕೆ ಕುಸಿಯಲು ಪ್ರಾರಂಭಿಸಿದೆ. ಈಗಾಗಲೇ ಮೊನ್ನೆಯಿಂದ ಸುರಿಯುತ್ತಿರುವ ಕೃತಿಕಾ ಮಳೆಗೆ ತಡೆಗೋಡೆ ಜೊತೆಯಲ್ಲಿಯೇ  ರಸ್ತೆಯು ಬಿರುಕುಬಿಟ್ಟಿದ್ದು ಕುಸಿಯಲು ಕಾಯುತಿದೆ. ಅದನ್ನು ಅರಿತ ಗುತ್ತಿಗೆದಾರರು ಜೆ. ಸಿ. ಬಿ. ಯಂತ್ರ ತಂದು ಮಣ್ಣು ಮುಚ್ಚಿ ಹೋಗಿದ್ದಾರೆ. 

ಅಂತೂ ಇಂತೂ ಲೋಕಾಪಯೋಗಿ ಅಭಿಯಂತರರು ಮತ್ತು ಗುತ್ತಿಗೆದಾರರು ತಮ್ಮ ತಟ್ಟೆಯಲ್ಲಿ *ಪಪ್ಪಡಂ*  *ಪಾಯಸಂ ಉಂಡು* ರಸ್ತೆಯಲ್ಲಿ ಅದನ್ನು ವಿಸರ್ಜಿಸಿದಂತೆ ಚೆಟ್ಟಳ್ಳಿ ಮಡಿಕೇರಿ ರಸ್ತೆಯಲ್ಲಿ ತೆರಳುವ ವಾಹನ ಸವಾರರಿಗೆ ಅನುಭವವಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು