11:34 AM Wednesday12 - August 2026
ಬ್ರೇಕಿಂಗ್ ನ್ಯೂಸ್
Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;…

ಇತ್ತೀಚಿನ ಸುದ್ದಿ

ಚಟ್ನಿ ತರಹ ಮಡಿಕೇರಿ- ಚೆಟ್ಟಳ್ಳಿ ರಸ್ತೆ: ನಿರ್ಮಾಣಗೊಂಡು ಮೂರೇ ದಿನಗಳಲ್ಲಿ ಕುಸಿದು ಬಿದ್ದ ತಡೆಗೋಡೆ!

20/05/2022, 08:57

ಮಡಿಕೇರಿ (reporterkarnataka.com):ಮಡಿಕೇರಿಯಿಂದ ಚೆಟ್ಟಳ್ಳಿಗೆ ತೆರಳುವ ರಸ್ತೆ ಪಾಳುಬಿದ್ದು ಈ ವರ್ಷದ ಮಳೆಗಾಲಕ್ಕೆ ಮೂರು ವರ್ಷಗಳೇ ಕಳೆದುಹೋಗಿದೆ. 

ಸಿದ್ದಾಪುರ ಹಾಗು ಚೆಟ್ಟಳ್ಳಿಯ ಪ್ರಯಾಣಿಕರು ಶಾಲಾ ಕಾಲೇಜು ಮಕ್ಕಳು, ನೌಕರರು ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರತಿನಿತ್ಯ ಮಡಿಕೇರಿ ಕಡೆ ಪಯಣಿಸಬೇಕಾಗಿದೆ. ಬೆಳಿಗ್ಗೆ ಹೋದವರು ಸಂಜೆ ಹೊತ್ತಿಗೆ ಮನೆ ಸೇರುವುದೇ ಗ್ಯಾರೆಂಟಿಲ್ಲದಾಗಿದೆ. 


ಈ ವರ್ಷ ಹಲವಾರು ಕೋಟಿ ಹಣ ವ್ಯಯ ಮಾಡಿ ರಸ್ತೆಗೆ ಲೋಕಾಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಿಸಲಾಗಿದೆ. ಕೆಲಸ ಎಷ್ಟರಮಟ್ಟಿಗೆ ಕಳಪೆಯಾಗಿದೆ ಎಂದರೆ ತಡೆ ಗೋಡೆ ನಿರ್ಮಿಸಿದ ಮೂರು ದಿವಸಕ್ಕೆ ಕುಸಿಯಲು ಪ್ರಾರಂಭಿಸಿದೆ. ಈಗಾಗಲೇ ಮೊನ್ನೆಯಿಂದ ಸುರಿಯುತ್ತಿರುವ ಕೃತಿಕಾ ಮಳೆಗೆ ತಡೆಗೋಡೆ ಜೊತೆಯಲ್ಲಿಯೇ  ರಸ್ತೆಯು ಬಿರುಕುಬಿಟ್ಟಿದ್ದು ಕುಸಿಯಲು ಕಾಯುತಿದೆ. ಅದನ್ನು ಅರಿತ ಗುತ್ತಿಗೆದಾರರು ಜೆ. ಸಿ. ಬಿ. ಯಂತ್ರ ತಂದು ಮಣ್ಣು ಮುಚ್ಚಿ ಹೋಗಿದ್ದಾರೆ. 

ಅಂತೂ ಇಂತೂ ಲೋಕಾಪಯೋಗಿ ಅಭಿಯಂತರರು ಮತ್ತು ಗುತ್ತಿಗೆದಾರರು ತಮ್ಮ ತಟ್ಟೆಯಲ್ಲಿ *ಪಪ್ಪಡಂ*  *ಪಾಯಸಂ ಉಂಡು* ರಸ್ತೆಯಲ್ಲಿ ಅದನ್ನು ವಿಸರ್ಜಿಸಿದಂತೆ ಚೆಟ್ಟಳ್ಳಿ ಮಡಿಕೇರಿ ರಸ್ತೆಯಲ್ಲಿ ತೆರಳುವ ವಾಹನ ಸವಾರರಿಗೆ ಅನುಭವವಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು