ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಜುಲೈ ತಿಂಗಳ ಟಾಪರ್ ಆಗಿ ತ್ರಿಶಾಂಕ್ ಪೂಜಾರಿ
14/08/2026, 22:39
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜುಲೈ ತಿಂಗಳ ಟಾಪರ್ ಆಗಿ ತ್ರಿಶಾಂಕ್ ಪೂಜಾರಿ ಆಯ್ಕೆಯಾಗಿದ್ದಾನೆ.
ಮಂಗಳೂರಿನ ಸುರತ್ಕಲ್ ಸಮೀಪದ ಹೊಸಬೆಟ್ಟು ನಿವಾಸಿಗಳಾದ ಸುರೇಖಾ ಮತ್ತು ಕಿರಣ್ ರಾಜ್ ದಂಪತಿಯ ಪುತ್ರನಾದ ತ್ರಿಶಾಂಕ್ ಪೂಜಾರಿ ಸುರತ್ಕಲ್ ನಲ್ಲಿರುವ ಗುರುಕುಲ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಯುಕೆಜಿ ಕ್ಲಾಸ್ ನಲ್ಲಿ ಓದುತ್ತಿದ್ದಾನೆ.



ಈತನಿಗೆ ಎರಡೂವರೆ ವರ್ಷ ಆಗುವಾಗಲೇ ಡ್ಯಾನ್ಸ್ ಮಾಡುವುದು, ಸಾಂಗ್ ಹೇಳುವುದು, ಆ್ಯಕ್ಟಿಂಗ್ ಮಾಡುವುದು ಅಂದ್ರೆ ತುಂಬಾ ಇಷ್ಟ.ತ್ರಿಶಾಂಕ್ ಗೆ ಎರಡೂವರೆ ವರ್ಷ ಇರುವಾಗ ಸುರತ್ಕಲ್ ನಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘ, ವಿಠೋಬಾ ರುಕುಮಾಯಿ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನದ ಜೊತೆಗೆ ನಗದು ಬಹುಮಾನ ಸ್ವೀಕರಿಸಿದ್ದಾನೆ.
ಮತ್ತೆ ಈತ ತಾನು ಕಲಿಯುವ ಸ್ಕೂಲ್ ನಲ್ಲಿ ಕೂಡ ಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ, ಅದರಲ್ಲೂ ಡ್ಯಾನ್ಸ್ ಮತ್ತು ಇತರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜೊತೆಗೆ ಸರ್ಟಿಫಿಕೇಟ್ ಪಡೆದಿದ್ದಾನೆ.
ಈತ ಇತ್ತೀಚೆಗೆ ಪದ್ಮಶ್ರೀ ಭಟ್ ಅವರ”ವಾಯ್ಸ್ ಆಫ್ ಆರಾಧನ,”ಕಲಾರಾಧನೆ ಎಂಬ ವಾಟ್ಸಪ್ ಗ್ರೂಪ್ ಸೇರಿಕೊಂಡಿದ್ದಾನೆ.












