ಇತ್ತೀಚಿನ ಸುದ್ದಿ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ಹಾರಂಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮನೆ, ಕಚೇರಿಗೂ ರೈಡ್
07/04/2026, 14:21
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಫೀಲ್ಡ್ ಗೆ ಇಳಿದಿದ್ದು ಕುಶಾಲನಗರದ ಹಾರಂಗಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಐ. ಕೆ. ಪುಟ್ಟಸ್ವಾಮಿ ಮನೆ ಮತ್ತು ಕಚೇರಿ ಮೇಲೂ ದಾಳಿ ನಡೆದಿದೆ.

ಪುಟ್ಟಸ್ವಾಮಿಯ ಹಾಸನದ ವಿದ್ಯಾನಗರ ಮನೆ, ಮೈಸೂರಿನ ತಿಲಕ್ ನಗರ ಮನೆ ಜೊತೆಗೆ ಕುಶಾಲನಗರದ ಹಾರಂಗಿ ಆಣೆಕಟ್ಟು ಕಚೇರಿ ಮೇಲೆ ಸಹ ದಾಳಿ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ.












