ಇತ್ತೀಚಿನ ಸುದ್ದಿ
ಮಂಗಳೂರು ಧರ್ಮ ಪ್ರಾಂತ್ಯ: ಸಿಟಿ ವಲಯದ ಕಾರ್ಯದರ್ಶಿ ಮತ್ತು ಇಬ್ಬರು ಪ್ರತಿನಿಧಿಗಳ ಆಯ್ಕೆ
22/02/2026, 22:00
ಮಂಗಳೂರು(reporterkarnataka.com): ಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯದ ಕಾರ್ಯದರ್ಶಿ ಹಾಗೂ ಇಬ್ಬರು ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ಭಾನುವಾರ ನಡೆಯಿತು.
ನೀರುಮಾರ್ಗ ಚರ್ಚ್ ನ ಉಪಾಧ್ಯಕ್ಷೆ ಉಷಾ ಫೆರ್ನಾಂಡಿಸ್ ಕಾರ್ಯದರ್ಶಿಯಾಗಿ ಹಾಗೂ ಕುಲಶೇಖರ ಚರ್ಚ್ ನ ಉಪಾಧ್ಯಕ್ಷೆ ರೂತ್ ಲೋಬೊ ಮತ್ತು ಕೆಲರಾಯ್ ಚರ್ಚ್ ನ ಪ್ರತಿನಿಧಿ ಸಂತೋಷ್ ಡಿ ಕೋಸ್ತಾ ಅವರು ಸದಸ್ಯರಾಗಿ ಚುನಾಯಿತರಾಗಿದ್ದಾರೆ.
ಸಿಟಿ ವಲಯದ ವ್ಯಾಪ್ತಿಯಲ್ಲಿ ಕುಲಶೇಖರ, ಬೋಂದೆಲ್, ಶಕ್ತಿನಗರ, ಪಾಲ್ದನೆ, ನೀರು ಮಾರ್ಗ, ಕೆಲರಾಯ್, ಬಜ್ಜೋಡಿ, ಬಜಾಲ್, ಆಂಜೆಲೋರ್, ದೇರೆಬೈಲ್, ವಾಮಂಜೂರು, ಫೆರ್ಮಾಯ್ ಸೇರಿದಂತೆ 12 ಚರ್ಚ್ ಚರ್ಚ್ ಗಳಿವೆ.
ಸಿಟಿ ವಲಯದ ವಿಕಾರ್ ವಾರ್ ವಾಮಂಜೂರು ಚರ್ಚ್ ನ ಧರ್ಮಗುರು ವಂದನೀಯ ಫಾ. ಡಾ. ಜೇಮ್ಸ್ ಡಿ ಸೋಜಾ ಅವರು ಚುನಾವಣೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕುಲಶೇಖರ ಚರ್ಚ್ ನ ಧರ್ಮಗುರು ವಂದನೀಯ ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಪಾಲ್ದನೆ ಚರ್ಚ್ ನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಉಪಸ್ಥಿತರಿದ್ದರು.













