5:31 AM Tuesday2 - June 2026
ಬ್ರೇಕಿಂಗ್ ನ್ಯೂಸ್
ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ನಡೆ; ಬಿಜೆಪಿಗೆ ಶುರುವಾಯ್ತು ಢವ ಢವ ನಾವು ಪಕ್ಷನಿಷ್ಠರು, ಜಮೀರ್‌ ವಿರುದ್ದ ಬೃಹತ್‌ ಷಡ್ಯಂತ್ರ: ವೈರಲ್‌ ಆಡಿಯೋ ಬಗ್ಗೆ ಸಿರಾಜ್‌… ಪಕ್ಷ ವಿರೋಧಿ ಕೃತ್ಯಕ್ಕೆ ಸಿಕ್ತು ಸಾಕ್ಷ್ಯ: ಜಮೀರ್ ಅಹ್ಮದ್ ಸ್ಫೋಟಕ ಆಡಿಯೋ ವೈರಲ್ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಇದ್ದೊಬ್ಬ ಒಬಿಸಿ ಸಿಎಂ ಕೆಳಗಿಳಿಸಿ ಅಪಮಾನ: ಮಂಗಳೂರಿನಲ್ಲಿ ಕೇಂದ್ರ… Kodagu | ಕುಶಾಲನಗರ: 15 ದಿನದೊಳಗೆ ದುಷ್ಕರ್ಮಿಗಳ ಗುಂಡೇಟಿಗೆ 2 ಕಾಡು ಕೋಣಗಳು… ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಸಿಹಿಸುದ್ದಿ ಕೊಟ್ಟ ಇರಾನ್; 10 ಇಂಡಿಯನ್ ನಾವಿಕರ… Kerala | ಮಾಜಿ ಸಿಎಂ ಪಿಣರಾಯಿ ಮನೆ ಎದುರು ಇ.ಡಿ ವಾಹನಗಳ ಮೇಲೆ… Bangalore | ಐಪಿಎಲ್ ಬೆಟ್ಟಿಂಗ್ ವಿರುದ್ಧ ಸಿಸಿಬಿ ಭರ್ಜರಿ ಕಾರ್ಯಾಚರಣೆ: 23 ಜನ… ಕಾಂಗ್ರೆಸ್‌ ಹೈಡ್ರಾಮಾಕ್ಕೆ ವಿಜಯೇಂದ್ರ ವ್ಯಂಗ್ಯ: ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದ್ರೂ ಅದು… ಬೆಂಗಳೂರಿಗೆ ಮಹಾಮಾರಿ ಎಬೋಲಾ ಎಂಟ್ರಿ?: ಉಗಾಂಡದ ಮಹಿಳೆ ಐಸೋಲೇಷನ್‌ನಲ್ಲಿ..!

ಇತ್ತೀಚಿನ ಸುದ್ದಿ

Vijayanagara | ಕೂಡ್ಲಿಗಿ: 3 ವರ್ಷದ ಬಾಲಕಿ ಸೇರಿದಂತೆ ಐದಾರು ಜನರ ಮೇಲರಗಿದ ಬೀದಿನಾಯಿ; ಆತಂಕದಲ್ಲಿ ನಾಗರೀಕರು

10/04/2026, 17:01

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಒಂದನೇ ವಾರ್ಡ್ ಬಸ್ ನಿಲ್ದಾಣದ ಹಿಂಭಾಗದಲ್ಲಿ , ಇಂದು ಬೀದಿ ನಾಯಿ ಮೂರು ವರ್ಷದ ಹೆಣ್ಣು ಮಗು ಸೇರಿದಂತೆ. ಐದು ಜನರ ಮೈಲೆ ಎರಗಿ , ಗಂಭೀರ ಗಾಯಗೊಳಿಸಿರುವ ಘಟನೆ ಇಂದು ಜರುಗಿದೆ. ಗಾಯಾಳುಗಳು ಸಾರ್ವಜನಿಕ ಆಸ್ಪತ್ರೆಗೆ ತೆರಳಿ , ಚಿಕಿತ್ಸೆ ಪಡೆದಿದ್ದು ನಾಗರೀಕರು ತೀವ್ರ ಆತಂಕದಲ್ಲಿದ್ದಾರೆ. ಒಂದು ಬೀದಿನಾಯಿಯು ಇಂದು ಬೆಳಿಗ್ಗೆಯಿಂದ, ಸಂಜೆಯವರೆಗೆ ವಿನಾಕಾರಣ ಐದು ಜನರ ಮೇಲೆ ಎರಗಿ ಗಂಭೀರವಾಗಿ ಗಾಯಗೊಳಿಸಿದೆ. ಕೆ.ಎಸ್.ಆರ್ ಟಿಸಿ ಬಸ್ ಡಿಪೋ ಹಿಂಭಾಗದಲ್ಲಿ ವಾಸವಿರುವ , ಶ್ರೀನಿವಾಸ್ ಎಂಬುವವರ ಮಗಳ ಮಗಳು , ( ಮೊಮ್ಮಗಳು)ಮೂರು ವರ್ಷದ ಬಾಲಕಿ ಶ್ರೀನಿಧಿ. ಸಂಜೆ ಹೊತ್ತಲ್ಲಿ ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿರುವ ಸಂದರ್ಭದಲ್ಲಿ , ಬೀದಿ ನಾಯಿ ಏಕಾ ಏಕಿ ಮಗುವಿನ ಮೇಲೆ ಎರಗಿ ಬಾಲಕಿಯ ಕತ್ತಿಗೆ ಬಾಯಿ ಹಾಕಿ ಎಳೆದಾಡಿದೆ‌. ನಂತರ ಬಾಲಕಿಯ ಸೊಂಟದ ಭಾಗಕ್ಕೆ ಬಾಯಿ ಹಾಕಿ ತೀವ್ರವಾಗಿ ಗಾಯಗೊಳಿಸಿದೆ. ಬಾಲಕಿ ತೀವ್ರವಾಗಿ ಕಿರುಚಾಡಿ ಅರುಚಾಡಿದ್ದು , ಮನೆಯೊಳಗಿಂದ ಪೋಷಕರು ಹಾಗೂ ನೆರೆದವರು ನಾಯಿಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ. ಪೋಷಕರು ಕೂಡಲೇ ಬಾಲಕಿಯನ್ನು , ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ್ದು , ಚುಚುಮದ್ದು ನೀಡಿದ್ದಾರೆ ಮತ್ತು , ಅನುಸರಿಸಬೇಕಾಗಿರುವ ಅಗತ್ಯ ನಿರ್ಧೇಶನಗಳನ್ನು ಪೋಷಕರಿಗೆ ತಿಳಿ ಹೇಳಿದ್ದಾರೆ.


ಅಲ್ಲದೇ ಇದೇ ನಾಯಿಯು ಈ ಮುನ್ನ , ಅದೇ ಏರಿಯಾದಲ್ಲಿ ಸಂಚರಿಸುವ ಇನ್ನೂ ನಾಲ್ಕು ಜನರ ಮೇಲೆ ಎರಗಿ ತೀವ್ರವಾಗಿ ಗಾಯಗೊಳಿಸಿದೆ ಎಂದು ನಾಗರೀಕರು ತಿಳಿಸಿದ್ದಾರೆ. ಈ ನಾಯಿಯು ಬೀದಿ ನಾಯಿಯಾಗಿದ್ದು ,ಅದು ಈವರೆಗೆ ಈ ಹಿಂದೆ ಈತರ ಯಾರ ಮೇಲೂ ಎರಗಿರಲಿಲ್ಲವಂತೆ. ಆದ್ರೆ ಇವತ್ತು ಬೆಳಿಗ್ಗೆ ಯಿಂದ ಸಂಜೆಯವರೆಗೆ , ಬಾಲಕಿ ಶ್ರೀನಿಧಿ ಸೇರಿದಂತೆ ಹತ್ತಿರದ ಹಾಸ್ಟೆಲ್ ವಿದ್ಯಾರ್ಥಿಯ ಮೇಲೆ ಎರಗಿ ಗಾಯಗೊಳಿಸಿದೆ. ಮತ್ತು ಇತರೆ ಅದೇ ಮಾರ್ಗದಲ್ಲಿ ಸಂರಿಸುವ , ನಾಲ್ವರ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ ಎಂದು ಅಲ್ಲಿಯ ವಾಸಿಗಳು ತಿಳಿಸಿದ್ದಾರೆ.
ಬೀದಿ ನಾಯಿ ದಾಳಿಗೆ , ಒಂದೇ ದಿನದಲ್ಲಿ ಐದು ಜನರು ತೀವ್ರ ಗಾಯಗೊಂಡು ನರಳಾಡುವಂತಾಗಿದ್ದು. ಘಟನೆಯಿಂದಾಗಿ ಒಂದನೇ ವಾರ್ಡಿನ ವಾಸಿಗಳು ಮಾತ್ರವಲ್ಲ , ಪಟ್ಟಣದ ಎಲ್ಲಾ ವಾರ್ಡ್ ಗಳ ನಾಗರೀಕರು ಬೆಚ್ಚಿಬಿದ್ದಿದ್ದಾರೆ ತೀವ್ರ ಆತಂಕಕ್ಕೀಡಾಗಿದ್ದಾರೆ. ಕೂಡಲೇ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು , ದಾಳಿ ಮಾಡಿರುವ ನಾಯಿಯನ್ನು ಸೆರೆ ಹಿಡಿಸಬೇಕು. ಮತ್ತು ಆ ನಾಯಿಯ ಆರೋಗ್ಯ ಸ್ಥಿತಿಗತಿ ಅರಿತ ಬೇಕಿದೆ , ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಅದನ್ನು ಬೇರೆಡೆಗೆ ನಿರ್ಜನ ಪ್ರದೇಶಕ್ಕೆ ಸಾಗಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ಪಟ್ಟಣದ ಹಲವೆಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು , ಅವುಗಳನ್ನು ಕೂಡಲೇ ಸೆರೆಹಿಡಿದು ಸೂಕ್ತ ಚಿಕಿತ್ಸೆ ನೀಡಿ. ಜನವಸತಿ ರಹಿತ ನಿರ್ಜನ ಪ್ರದೇಶಗಳಿಗೆ , ಅವುಗಳನ್ನು ಸಾಗಿಸಬೇಕಾಗಿದೆ. ಸಂಬಂಧಿಸಿದಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು , ಕೂಡಲೇ ಅಗತ್ಯ ಕ್ರಮ ಜರುಗಿಸಬೆೇಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ ಹಿರಿಯ ಮುಖಂಡರು , ಹಾಗೂ ಪತ್ರಕರ್ತರಾಗಿರುವ ವಿ. ಜಿ. ವೃಷಭೇಂದ್ರ ಸೇರಿದಂತೆ. ಪಟ್ಟಣದ ಹಿರಿಯ ನಾಗರೀಕರ , ವಿವಿದ ಸಂಘಟನೆಗಳ ಪದಾಧಿಕಾರಿಗಳು ಈ ಮೂಲಕ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು