9:59 PM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ವೀರ ಸ್ವಾತಂತ್ರ್ಯ ಹೋರಾಟಗಾರನ ವೀರಸೌಧ ಸ್ಮಾರಕಕ್ಕೆ ಕಾಯಕಲ್ಪ: ಶಾಸಕ ಟಿ.ರಘುಮೂರ್ತಿ ಸಂಕಲ್ಪ

24/01/2022, 09:28

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com

ವೀರ ಸ್ವಾತಂತ್ರ್ಯ ಹೋರಾಟಗಾರನ ವೀರಸೌಧ ಸ್ಮಾರಕಕ್ಕೆ ಕಾಯಕಲ್ಪ ನೀಡಲು ಶಾಸಕ ಟಿ.ರಘುಮೂರ್ತಿ ಮುಂದಾಗಿದ್ದಾರೆ.

ಹೌದು ಚಳ್ಳಕೆರೆ ನಗರದ ಬ್ರೀಟೀಷರ ಕಾಲದಲ್ಲಿ ನಿರ್ಮಿಸಿದ್ದ ಹಳೆ ತಾಲೂಕು ಕಚೇರಿ ಮುಂಭಾಗದಲ್ಲಿ ಬ್ರೀಟಿಷ್ ಸರಕಾರ ರೈತರಿಂದ ವಸೂಲಿ ಮಾಡಿದ್ದ ಕಂದಾಯವನ್ನು ಮರಳಿ ರೈತರಿಗೆ ತಲುಪಿಸುವ ಯೋಜನೆ ರೂಪಿದ್ದರು. ಅದರಂತೆ ಅರ್ಥಂಸುಬ್ಬಯ್ಯಶೆಟ್ಟಿ ಹೋರಾಟಗಾರೊಂದಿಗೆ ಬ್ರಿಟಿಸ್  ಆಳ್ವಿಕೆಯ ಕಾಲದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಚಳುವಳಿಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅನೇಕ ಜನರು ಪಾಲ್ಗೊಂಡಿದ್ದರು. 

ಬ್ರಿಟೀಸ್ ಅಧಿಕಾರಿಗಳು ಹೋರಾಟಗಾರ ಮೇಲೆ ಗೋಲಿ ಬಾರ್ ಹಾಗೂ ಗುಂಡಿನ  ದಾಳಿ ಮಾಡಲು ಮುಂದದಾಗ ಚಳುವಳಿಯಲ್ಲಿ ಭಾಗವಹಿಸಿದ್ದ ಅನೇಕ ಜನರು ಗುಂಡಿನ ಸದ್ದಿಗೆ ಲಾಟಿ ಏಟಿಗೆ ಭಯಬೀತರಾಗಿ ಕಾಲ್ಕಿತ್ತರು. ಆದರೆ ಅರ್ಥಂಸುಬ್ಬಯ್ಯಶೆಟ್ಟಿ ಮತ್ತಿಬ್ಬರು ಜಾಗ ಬಿಡದೆ ಬ್ರಿಟೀಷರ ಗುಂಡಿನ ದಾಳಿಗೆ ಸಿಲುಕಿದರು.

ಅರ್ಥಂಸುಬ್ಬಯ್ಯಶೆಟ್ಟಿ ಸ್ಥಳದಲ್ಲೇ ಮೃತ ಪಟ್ಟರೆ ಇನ್ನಿಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಚಿಲ್ಲಾ ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆ ಫಲಕಾರಿಯಾದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರು  ಎನ್ನಲಾಗಿದೆ. ಇವರ ನೆನಪಿಗಾಗಿ 25 ನೇ ಸ್ವಾತಂತ್ರ್ಯೋತ್ಸವದ ವರ್ಷದ ಅಂಗವಾಗಿ 1972 ರಲ್ಲಿ ಹಳೆ ತಾಲೂಕು ಕಚೇರಿ ಮುಂಭಾಗದಲ್ಲಿ ಕೇಂದ್ರ ಸರಕಾರ 10 ಅಡಿ ಎತ್ತರದ ಸ್ಮಾರಕವನ್ನು 1973 ರಲ್ಲಿ ಅನಾವರಣಗೊಳಿಸಿ, ಅರ್ಥಂ ಸುಬ್ಬಯ್ಯಶೆಟ್ಟಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಎಂಬ ಸ್ಮಾರಕ ಕಂಬವನ್ನು ನೆಟ್ಟು ಕೈತೊಳೆದುಕೊಂಡಿತ್ತು. 

ಅರ್ಥಂ ಸುಬ್ಬಯ್ಯಶೆಟ್ಟಿ ಮಗ ರಾಮಕೃಷ್ಣಶೆಟ್ಟಿ ಸ್ಮಾರಕದ ಸುತ್ತ ಕಟ್ಟೆ ನಿರ್ಮಿಸಿ ಗ್ರಿಲ್ ಅಳವಡಿಸಿ ಪ್ರತಿ ತಿಂಗಳು ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಕುಟುಂಬಸ್ಥರು ಪೂಜೆ ಸಲ್ಲಿಸುತ್ತಾರೆ, ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ  ಸ್ವಾತಂತ್ರ್ಯ ಯೋಧರ ಸ್ಮಾರಕಕ್ಕೆ ಪೂಜೆ ಸಲ್ಲಿಸದೆ ನಿರ್ಲಕ್ಷ ತೋರುತ್ತಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದವು.

ಶಾಸಕ ಟಿ.ರಘುಮೂರ್ತಿ ಬ್ರಿಟಿಸ್ ಕಾಲದ ಶಿಥಿಲವಾದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಸುಮಾರು 12.5 ಕೋಟಿ ವೆಚ್ಚದ ಅನುದಾನದಲ್ಲಿ ಸುಸಜ್ಜಿತ ಹಾಗೂ ಹೈಟೆಕ್ ಮಿನಿ ವಿಧಾನ ಸೌದಕಟ್ಟಡವನ್ನು ನಿರ್ಮಿಸಿರುವ ಕಾರಣ ಮುಖ್ಯ ರಸ್ತೆಯಿಂದ ಮಿನಿವಿಧಾನಸೌದದವರೆಗೆ   ದ್ವಿಪಥ

 ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಮರಕವನ್ನು ಇರುವ ಸ್ಥಳದಲ್ಲಿ ಮಾರುದ್ದ ಸ್ಥಳಾಂತರಿಸಿ ಸ್ಮಾರಕದ ಸುತ್ತ ಉಧ್ಯಾನವನ, ಸಾರ್ವಜನಿಕರು ಕುಳಿತು ಕೊಂಡು ವಿಶ್ರಾಂತಿ ಪಡೆಯಲು ಹಾಸನಗಳ ವ್ಯವಸ್ಥೆ ಕಲ್ಲಿಸುವ ಮೂಲಕ  ಸ್ವತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ವೀರಮರಣ ಹೊಂದಿದ ಅರ್ಥಂ ಸುಬ್ಬಯ್ಯಶೆಟ್ಟಿ ವೀರಸ್ವಾತಂತ್ರ ಹೋರಾಟಗಾರನ ಸ್ಮಾರಕಕ್ಕೆ ಹೊಸ ರೂಪ ನೀಡಲು ಶಾಸಕ ಟಿ. ರಘುಮೂರ್ತಿ ಮುಂದಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು