4:36 PM Saturday15 - August 2026
ಬ್ರೇಕಿಂಗ್ ನ್ಯೂಸ್
ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ

ಇತ್ತೀಚಿನ ಸುದ್ದಿ

ಕತ್ತರಿ ಬಾಲದ ಕಾಜಣ, ಮಾಡುತ್ತದೆ ಕೀಟಗಳ ನಿಯಂತ್ರಣ ! ಪರಿಸರ ಸಮತೋಲನದ ಕಾವಲುಗಾರ ಈ ಪಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು ?

15/08/2026, 16:33

ಕಾಜಣ (drongo)
ಕಾಜಣ ಹೆಚ್ಚು ಆಕರ್ಷಕ ವಲ್ಲದ ಗಾಢ ಕಪ್ಪು ಬಣ್ಣದ ಹಕ್ಕಿ. ಗಾತ್ರದಲ್ಲಿ ಕಾಗೆಯನ್ನು ಹೋಲುತ್ತದೆ. ಕಾಜಣಗಳನ್ನು ಕವಲೋಡೆದ, ಕತ್ತರಿ ಆಕಾರದ ಬಾಲದಿಂದ ಸುಲಭವಾಗಿ ಗುರುತಿಸಬಹುದು. ಇವುಗಳು ಸಾಮಾನ್ಯವಾಗಿ ಕೃಷಿ ಪ್ರದೇಶಗಳಲ್ಲಿ, ಸಣ್ಣ ಕಾಡು ಪ್ರದೇಶಗಳಲ್ಲಿ ಮರದ ಕೊಂಬೆಗಳಲ್ಲಿ ಜೋಡಿಯಾಗಿ, ನೇರವಾಗಿ ಕುಳಿತು ಕೊಂಡಿರುತ್ತದೆ. ಕೆಲವು ಪ್ರಭೇದದ ಕಾಜಣಗಳಲ್ಲಿ ಕವಲೋಡೆದ ಬಾಲಗಳಲ್ಲಿ ಉದ್ದವಾದ ಅಲಂಕಾರಿಕ ಜಾಲವನ್ನು ಕಾಣಬಹುದು.(Rocket tailed dronogo)ಭೀಮರಾಜ ಪಕ್ಷಿ )ಕಾಜಣಗಳು ಹೆಚ್ಚಾಗಿ ಹರಾಡುತ್ತಿರುವ ಕೀಟಗಳನ್ನು ಹಿಡಿದು ತಿನ್ನುತ್ತದೆ. ಈ ಪಕ್ಷಿಗಳು ಧೈರ್ಯ ಶಾಲಿಗಳು ಹಾಗೂ ಅಕ್ರಮಣಕಾರಿಯಾಗಿದ್ದು, ತನಗಿಂತ ದೊಡ್ಡ ಗಾತ್ರದ ಪಕ್ಷಿಗಳನ್ನು ಬೆನ್ನಟ್ಟಿ ತನ್ನ ವಾಸ ಸ್ಥಾನದ ರಕ್ಷಣೆ ಮಾಡುತ್ತದೆ.


ಇವುಗಳು ಸಸ್ತಾನಿಗಳ ಹಾಗೂ ಇತರ ಪಕ್ಷಿಗಳ ಕರೆಗಳನ್ನು ಅನುಕರಿಸಿ ಎಚ್ಚರಿಕೆಯ ಸಂದೇಶಗಳನ್ನು ಸುಚಿಸುತ್ತದೆ. ಗಂಡು ಹೆಣ್ಣು ಪಕ್ಷಿಗಳು ಒಂದೇ ತೆರನಾಗಿದ್ದು, ಎತ್ತರವಾದ ಮರಗಳ,ಕವಲೋಡೆದ ಕೊಂಬೆಗಳ ಸಂಧಿಯಲ್ಲಿ ತಟ್ಟೆಯಾಕಾರದ ಗೂಡನ್ನು ಕಟ್ಟಿ 2 ರಿಂದ 4 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ. ಬೆಳೆಗಳನ್ನು ನಾಶ ಮಾಡುವ ಕೀಟಗಳ ಸಂತತಿಯನ್ನು ಇವುಗಳು ನಿಯಂತ್ರಿಸುವುದರಿಂದ, ಪರಿಸರದ ಸಮಾತೋಲನತೆಯನ್ನು ಕಾಯ್ದು ಕೊಳ್ಳುವಲ್ಲಿ ಕಾಜಣಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು