12:34 AM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ತಾಳ್ಮೆ, ಸಹನೆ ಇದ್ದರೆ ಮಾತ್ರ ನೇತಾರನಾಗಲು ಸಾಧ್ಯ: ಹೆಗಲಿಗೆ ಕೈಹಾಕಿದ ಅಭಿಮಾನಿಯ ತಲೆಗೆ ಬಾರಿಸಿದ ಕೆಪಿಸಿಸಿ ಅಧ್ಯಕ್ಷ ! 

10/07/2021, 13:15

ಮಂಡ್ಯ(reporterkarnataka news): ಸಾರ್ವಜನಿಕ ಜೀವನದಲ್ಲಿ ನಾಯಕರಿಗೆ ತಾಳ್ಮೆ, ಸಹನೆ ಎನ್ನುವುದು ಬಹಳ ಮುಖ್ಯ. ತಾಳ್ಮೆ ಇಲ್ಲದವರು ನಾಯಕನಾಗಲು ನಾಲಾಯಕು.  

ನಾಯಕ ಎಂದು ಕರೆಸಿಕೊಳ್ಳುವವರು ಅಭಿಮಾನಿಯೊಬ್ಬ ಹೆಗಲ ಮೇಲೆ ಕೈಹಾಕಿದಷ್ಟಕ್ಕೆ ತಲೆಗೆ ಹೊಡೆದು ಬಿಡುವುದೇ. ಇಂತಹ ಘಟನೆ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯಲ್ಲಿ ನಡೆದಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತನ್ನ ಅಭಿಯಾನಿಯ ತಲೆಗೆ ಫಟಾರ್ ಅಂತ ಹೊಡೆದು ಬಿಟ್ಟಿದ್ದಾರೆ. ಜತೆಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಶಿವಕುಮಾರ್ ಅವರು ಮಾಜಿ ಸಂಸದ ಮಾದೇ ಗೌಡ ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದರು. ಡಿಕೆಶಿ ಅವರು ಮಾಮೂಲಿಯಾಗಿ ಯಾವಾಗಲೂ ಗರಂ ಆಗಿಯೇ ಇರುತ್ತಾರೆ. ಕೆ.ಎಂ.ದೊಡ್ಡಿಯಲ್ಲಿ ಮಾಮೂಲಿಗಿಂತಲೂ ಸ್ವಲ್ಪ ಜಾಸ್ತಿಯೇ ಗರಂ ಆಗಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ. ಈ ಸಂದರ್ಭದಲ್ಲಿ ಶಿವಕುಮಾರ್ ಅವರ ಜತೆ ಜತೆಯಾಗಿ ಹೆಜ್ಜೆ ಹಾಕುತ್ತಿದ್ದ ಅಭಿಮಾನಿಯೊಬ್ಬ ಅವರ ಹೆಗಲ ಮೇಲೆ ಕೈ ಹಾಕಲು ಯತ್ನಿಸಿದನಂತೆ. ಇದು ಅರಿವಿಗೆ ಬರುತ್ತಿದ್ದಂತೆ ಶಿವಕುಮಾರ್ ಅವರು ಅಭಿಮಾನಿಗಳು ತಲೆ ಮೇಲೆ ಹೊಡೆದೇ ಬಿಟ್ಟರು. ಜತೆಗೆ ‘ಕಾಮನ್ ಸೆನ್ಸ್ ನಿಂಗೆ ಇಲ್ವೇ… ಫ್ರಿಡಂ ಕೊಟ್ರೆ ಹೆಗಲ ಮೇಲೆ ಕೈ ಹಾಕುತ್ತೀಯ?’  ಎಂದು ಅಭಿಮಾನಿಯನ್ನು ದಬಾಯಿಸಿ ಬಿಟ್ರು. ಶಿವಕುಮಾರ್ ಅವರಿಂದ ಈ ರೀತಿಯ ವರ್ತನೆ ನಿರೀಕ್ಷಿಸದ ಅಭಿಮಾನಿ ಪೆಚ್ಚಾಗಿ ಸ್ವಲ್ಪ ಮುಂದಕ್ಕೆ ಸರಿದು ಬಿಟ್ಟ.

ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಶಿವಕುಮಾರ್ ಅವರು ನಿರೀಕ್ಷಿಸಿದ್ದರೆ, ಈ ರೀತಿ ಪಟಲಾಂ ಕಟ್ಟಿಕೊಂಡು ರೈತ ನಾಯಕ, ಅತ್ಯಂತ ಸರಳ ವ್ಯಕ್ತಿಯಾದ ಮಾದೇಗೌಡ ಅವರನ್ನು ಕಾಣಲು ಬರುವ ಅಗತ್ಯವಿರಲಿಲ್ಲ ಎಂದು ಡಿಕೆಶಿ ವರ್ತನೆಯಿಂದ ನೊಂದ ನಾಗರಿಕರು ಅಭಿಪ್ರಾಯಪಡುತ್ತಾರೆ.

ಕೆನಡಾದಲ್ಲಿ ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೇವ್ ಹಾಗೂ ನೆದರ್‌ಲ್ಯಾಂಡ್ ನಲ್ಲಿ ಪ್ರಧಾನಿ ಮಾರ್ಕ್ ರುಟಿ ಅವರ ಹೆಗಲಿಗೆ ಕೈ ಹಾಕಿ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಾರೆ. ಅವರೆಂದೂ ತಮ್ಮ ಮರ್ಯಾದೆಗೆ ಚ್ಯುತಿಯಾಯಿತು ಅಂದುಕೊಳ್ಳುವುದಿಲ್ಲ. ಆದರೆ ನಮ್ಮ ದೇಶದಲ್ಲಿ ನಾವೇ ಬೆಳೆಸಿ ಆಯ್ಕೆ ಮಾಡಿ ಕಳುಹಿಸಿದ ರಾಜಕಾರಣಿಗಳಿಗೆ ಅಭಿಮಾನಿಯೊಬ್ಬ ಹೆಗಲ ಮೇಲೆ ಕೈ ಹಾಕಿದರೆ ಗೌರವಕ್ಕೆ ಚ್ಯುತಿ ಬರುತ್ತದೆ. ಶಿವಕುಮಾರ್ ಅವರೇ, ಇಂತಹ ಅಭಿಮಾನಿಗಳ ಮತಗಳಿಂದಲೇ  ನೀವು ಶಾಸಕರು, ಮಂತ್ರಿಯಾಗಿ ಈಗ ಕೆಪಿಸಿಸಿ ಅಧ್ಯಕ್ಷರಾಗಿರುವುದು ಎನ್ನುವುದು ನೆನಪಿರಲಿ.

ಇತ್ತೀಚಿನ ಸುದ್ದಿ

ಜಾಹೀರಾತು