2:59 AM Monday20 - April 2026
ಬ್ರೇಕಿಂಗ್ ನ್ಯೂಸ್
ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು… ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:… ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಕಡೆಗೂ ಸಿಕ್ತು ಸರ್ಕಾರಿ ನೌಕರಿ… ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ

ಇತ್ತೀಚಿನ ಸುದ್ದಿ

ಸರಕಾರ ಕೊಡುವ 3 ಸಾವಿರ ಪರಿಹಾರದಿಂದ ಮೀನುಗಾರಿಕೆ ಉಳಿಸಲು ಸಾಧ್ಯವಿಲ್ಲ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ 

14/06/2021, 07:30

ಉಡುಪಿ(reporterkarnataka news): ಮೀನುಗಾರಿಕೆ ಇಂದು ಅಳಿವಿನಂಚಿಗೆ ಸರಿದಿದೆ. ಮೀನುಗಾರರ ಸಮಸ್ಯೆಗಳಿಗೆ ಸರಕಾರ ತುರ್ತು ಸ್ಪಂದಿಸಬೇಕಾಗಿದೆ. ಅದೇ ರೀತಿ ಮೀನುಗಾರಿಕೆ ಉಳಿವಿಗೆ ಏಕ ರೂಪದ ಕಾನೂನು ಜಾರಿಗೆ ತರುವ ಅಗತ್ಯವಿದೆ. ತಾನು ಮೀನುಗಾರಿಕೆ ಸಚಿವನಾಗಿದ್ದಾಗ ಆ ನಿಟ್ಟಿನಲ್ಲಿ ಪ್ರಯತ್ನಿಸಿದ್ದೆ. ಕೇಂದ್ರ ಕೃಷಿ ಸಚಿವರ ಜತೆ ಈ ಕುರಿತು ಚರ್ಚೆ ಕೂಡ ಮಾಡಿದ್ದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಮೀನುಗಾರಿಕೆಗೆ ಬಳಸುವ ಡಿಸೇಲ್ ಬೆಲೆ ಇದೀಗ ಹೆಚ್ಚಳವಾಗಿದೆ. ಕೊರೊನಾದಿಂದ ರಫ್ತಿನ ಮೇಲೂ ಪರಿಣಾಮ ಬೀರಿದೆ. ನಮ್ಮ ಹೆಚ್ಚಿನ ಮೀನು ಉತ್ಪನ್ನಗಳು ಚೀನಾ ದೇಶಕ್ಕೆ ರಫ್ತಾಗುತ್ತದೆ. ಇದೀಗ ಅಲ್ಲಿಯೂ ಕೂಡ ಸಮಸ್ಯೆ ಏರ್ಪಟ್ಟಿದೆ ಇದು ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಜಿ ಸಚಿವರು ಅಭಿಪ್ರಾಯಪಟ್ಟರು.

ರಾಜ್ಯ ಸರಕಾರ ಕೊಡುವ ಕೇವಲ 3 ಸಾವಿರ ರೂ. ಪರಿಹಾರದಿಂದ ಮೀನುಗಾರಿಕೆ ಉಳಿಸಲು ಸಾಧ್ಯವಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಮೀನುಗಾರಿಕೆಗೆ ಪುನಶ್ಚೇತನ ನೀಡಬೇಕು. ಏಕ ರೂಪದ ಕಾನೂನು ತರದೆ ಹೋದರೆ ಮೀನುಗಾರಿಕೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮೀನುಗಾರಿಕೆ ಇದೇ ರೀತಿ ಮುಂದೆ ಸಾಗಿದರೆ ಮುಂದಿನ 10 ವರ್ಷಗಳಲ್ಲಿ ಮೀನುಗಾರಿಕೆ ಅವನತಿ ಹೊಂದುವ ಸಾಧ್ಯತೆಯ ಕುರಿತು ಭವಿಷ್ಯ ನುಡಿದಿದ್ದೆ. ಆದರೆ ಯಾರೂ ಗಂಭೀರವಾಗಿ ಇದನ್ನು ತೆಗೆದುಕೊಂಡಿರಲಿಲ್ಲ. ಇದೀಗ ದೋಣಿ ಹೊಂದಿರುವವರು, ಅವಲಂಬಿತರು, ಉದ್ದಿಮೆದಾರರು ಭೀತಿಗೊಳಗಾಗಿದ್ದಾರೆ. ಇದೇ ನೀತಿ ಸೂಕ್ತ ನಿರೂಪಣೆಯಿಲ್ಲದೆ ಮೀನುಗಾರಿಕೆ ಮುಂದುವರಿಸಿದರೆ ಅರಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸಂಪೂರ್ಣ ಬರಿದಾಗುವ ಸಾಧ್ಯತೆ ಇದೆ. ಕೇಂದ್ರ ಹಾಗೂ ಎಲ್ಲ ರಾಜ್ಯಗಳು ಸರಕಾರ ಸೇರಿ ಧೃಢವಾದ ಸಂಕಲ್ಪ ಮಾಡಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೀನುಗಾರಿಕೆಯ ಭವಿಷ್ಯ ಚಿಂತಾಜನಕವಾಗಲಿದೆಯೆಂದು ಅವರು ನುಡಿದರು.

ರಾಜ್ಯ ಸರಕಾರ ತಕ್ಷಣಕ್ಕೆ ಡಿಸೇಲ್ ಸಬ್ಸಿಡಿ ಬಿಡುಗಡೆ ಮಾಡಬೇಕು. ಮೀನಗಾರರಿಗೆ ಕೇಂದ್ರ ಸರಕಾರದ ಎಕ್ಸೆಸ್ ತೆರಿಗೆಯಾದ 33 ರೂಪಾಯಿಂದ ವಿನಾಯಿತಿ ನೀಡಬೇಕು. ಮೀನುಗಾರರಿಗೆ ಡಿಸೇಲ್ 50 ರೂಪಾಯಿ ಒಳಗೆ ಸಿಗುವಂತಾಗಬೇಕು. ಅದು ಮೀನುಗಾರರಿಗೆ ತಾತ್ಕಾಲಿಕ ಉಪಶಮನ ನೀಡುತ್ತದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು