8:48 AM Sunday8 - September 2024
ಬ್ರೇಕಿಂಗ್ ನ್ಯೂಸ್
ಕಲಿಯುವ ಛಲದಿಂದ ಸಂಕಲ್ಪ ಸಾಧಿಸಿದ ತನ್ವಿ!: ಕೆಳ ಮಧ್ಯಮ ಕುಟುಂಬದ ವಿದ್ಯಾರ್ಥಿನಿ ಎಂಬಿಬಿಎಸ್… ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ಶ್ರೀ ಬಸವ ಬುತ್ತಿ ಕಾರ್ಯಕ್ರಮಕ್ಕೆ ಚಾಲನೆ ಗಣೇಶೋತ್ಸವಕ್ಕೆ ಕಾಂಗ್ರೆಸ್‌ ಸರಕಾರ ಯಾವುದೇ ಅಡ್ಡಿ ಮಾಡಿಲ್ಲ; ಶಾಸಕ ಕಾಮತ್ ಸಂಕುಚಿತ ಭಾವನೆಯಿಂದ… ಓವರ್‌ಟೇಕ್ ವಿವಾದ: ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಬೀದಿ ಜಗಳ; ಪ್ರಕರಣ ದಾಖಲು ತೀರ್ಥಹಳ್ಳಿ: ಎದೆ ನೋವು ಚಿಕಿತ್ಸೆಗೆಂದು ಆಸ್ಪತ್ರೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವಕ ರಸ್ತೆಗೆ ಬಿದ್ದು… ಭಾರಿ ಮಳೆ: ಆಗುಂಬೆ ಬಳಿಯ ಕಾರ್ ಬೈಲು ಗುಡ್ಡ ಕುಸಿತ ದಿಢೀರ್ ವಾಹನ ಸಂಚಾರ ಬದಲಾವಣೆಯಿಂದ ಸಾರ್ವಜನಿಕರಿಗೆ ತೊಂದರೆ: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ಬಳ್ಳಾರಿಯಲ್ಲಿ ಸೆ.6ರಂದು ಗೋ ಬ್ಯಾಕ್ ಗವರ್ನರ್ ಚಳವಳಿ: ಕಪ್ಪುಪಟ್ಟಿ, ಬಾವುಟ ಪ್ರದರ್ಶನ ರಾಜಕೀಯ ರಣತಂತ್ರಕ್ಕೆ ಮುದುಡಿದ ಕಮಲ: ನಂಜನಗೂಡು ನಗರಸಭೆ ನೂತನ ಸಾರಥಿಗಳಾಗಿ ಕಾಂಗ್ರೆಸ್ ನ… ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಮಾಡಿ; ಸಾರ್ವಜನಿಕರಿಗೆ ಮಾರಕವಾಗುವ ಡಿಜೆ ಬೇಡ: ಡಿವೈಎಸ್’ಪಿ…

ಇತ್ತೀಚಿನ ಸುದ್ದಿ

ಸಂಬಳಗ್ ತುಳುಟ್ಟು ದಾದ ಪನ್ಪೆರ್…?: ಶಾಂತಿನಗರ ಗಣೇಶೋತ್ಸವದಲ್ಲಿ ತುಳು ಪ್ರಶ್ನಾವಳಿ

01/09/2023, 20:57

ಮಂಗಳೂರು(reporterkarnataka.com): ಸಂಬಳಗ್ ತುಳುಟ್ಟು ದಾದ ಪನ್ಪೆರ್…?, ನವೀನ್ ಡಿ.ಪಡೀಲ್ ನಡುಬೈಲ್ ನಾರಾಯಣೆ ಪಾತ್ರ ಮಲ್ತಿನ ನಾಟಕ ಒವು..?, ಅಜಬಿರು ಪಂಡ ಎಂಚಿನ…? ಕ್ಯಾವಂಡೀಸ್ ಪರ್‌ಂದ್‌ನ್ ದಕ್ಷಿಣ ಕನ್ನಡ ಜಿಲ್ಲೆಗ್ ಪರಿಚಯ ಮಲ್ದಿನ ಕೃಷಿಕೆರ್ ಏರ್…?
ಹೀಗೆ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರ, ಭಾಷೆ, ಸಾಧಕರ ಬಗ್ಗೆ ಬೆಳಕು ಚೆಲ್ಲುವ ತುಳು ಪ್ರಶ್ನಾವಳಿ ಮಂಗಳೂರಿನಲ್ಲಿ ಹರಿದಾಡುತ್ತಿದೆ.
ಕಾವೂರಿನ ಶಾಂತಿನಗರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ನಡೆಯುವ ಗಣೇಶೋತ್ಸವ ಪ್ರಯುಕ್ತ 100 ಪ್ರಶ್ನೆಗಳ ರಸಪ್ರಶ್ನೆ ತಯಾರಿಸಲಾಗಿದ್ದು, ತುಳುನಾಡಿನ ಸಮಗ್ರ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತಿದೆ. ಕೃಷಿ, ತುಳುನಾಡಿನ ಸಾಧಕರು, ಒಗಟುಗಳು, ತುಳುನಾಡಿನ ದೇವಸ್ಥಾನ, ದೈವಸ್ಥಾನಗಳು, ನಾಟಕ, ಯಕ್ಷಗಾನ, ಕಂಬಳ, ಸಿನಿಮಾ ಇತ್ಯಾದಿ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಸಿದ್ಧಪಡಿಸಲಾಗಿದೆ.
ಮಣಿಮೇಖಲೆ, ರತ್ನಕಂಕಣ ಪ್ರಸಂಗ ಬರೆದವರು ಯಾರು?, ರಂಗಾಯಣ ರಘು ಅಭಿನಯಿಸಿದ ತುಳುವಿನ ಸಿನಿಮಾ ಯಾವುದು?, ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಮಲ್ತೊಂದುಪ್ಪುನ ತುಳುನಾಡ್ದ ಸಂಸ್ಥೆ ಒವು…..?ಹೀಗೆ ಮರೆತು ಹೋಗಿರುವ ತುಳು ಭಾಷೆಯ ಶಬ್ದಗಳ ಬಗ್ಗೆಯೂ ಸಾಕಷ್ಟು ಮಾಹಿತಿ ನೀಡುವ ವಿಷಯಗಳನ್ನು ಅಳವಡಿಸಲಾಗಿದೆ. ಭಾನುವಾರದಿಂದ ಪ್ರಶ್ನೆಪತ್ರಿಕೆ ಹಂಚುವ ಕೆಲಸ ಆರಂಭವಾಗಿದ್ದು, ಸುಮಾರು 20 ದಿನಗಳ ಕಾಲಾವಧಿ ಸಿಗಲಿದೆ. ಉತ್ತರ ಬರೆಯುವ ಆಸಕ್ತರು ಪುಸ್ತಕಗಳನ್ನು ನೋಡಿಯೂ, ತುಳು ವಿದ್ವಾಂಸರಲ್ಲಿ ಕೇಳಿಯೂ ಉತ್ತರ ಬರೆಯಬಹುದು. ತುಳುನಾಡಿನ ಬಗ್ಗೆ ಹೆಚ್ಚು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಇದನ್ನು ತಯಾರಿಸಿದ್ದು ಸೆ.26ರ ಒಳಗೆ ಉತ್ತರ ಬರೆದು ಶಾಂತಿನಗರ ಗಣೇಶೋತ್ಸವ ಸಮಿತಿಗೆ ನೀಡಬಹುದು.
ನಾಲ್ಕು ವರ್ಷಗಳಿಂದ ಬೇರೆ ಬೇರೆ ವಿಷಯಗಳ ಬಗ್ಗೆ ಹೀಗೆ ಪ್ರಶ್ನಾವಳಿ ತಯಾರಿಸುತ್ತಿದ್ದು ಜನರಿಂದ ಉತ್ತಮ ಸ್ಪಂದನೆ ಲಭಿಸಿದೆ. ಪ್ರತಿವರ್ಷವೂ ಹೀಗೆ ಪ್ರಶ್ನಾವಳಿ ನೀಡಿದರೆ ಜನರಲ್ಲಿ ಸಾಮಾನ್ಯ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಜನರೇ ತಿಳಿಸುತ್ತಾರೆ. ಮೊದಲ ವರ್ಷ 2667 ಜನ ಉತ್ತರ ಬರೆದಿದ್ದು ಕಳೆದ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮಾಡಿದ್ದ ಪ್ರಶ್ನಾವಳಿಗೆ 1640 ಜನ ಉತ್ತರ ಬರೆದಿದ್ದರು. ವರ್ಷವರ್ಷವೂ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಪತ್ರಕರ್ತ ಮೋಹನ್‌ದಾಸ್ ಮರಕಡ ಈ ಪ್ರಶ್ನೆ ಸಿದ್ಧಪಡಿಸುತ್ತಿದ್ದಾರೆ ಎಂದು ಶಾಂತಿನಗರ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿನಯಕುಮಾರ್ ತಿಳಿಸಿದ್ದಾರೆ.
ಅತಿ ಹೆಚ್ಚು ಸರಿ ಉತ್ತರ ಬರೆದವರಿಗೆ ಪ್ರಥಮ ಬಹುಮಾನ 8,000 ರೂ., ದ್ವಿತೀಯ 4,000 ರೂ., ತೃತೀಯ 3,000 ರೂ. ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ಪ್ರಶ್ನೆಪತ್ರಿಕೆಗೆ 9741505155 ಅಥವಾ 9901319694 ನಂಬರ್‌ಗೆ ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು