ಇತ್ತೀಚಿನ ಸುದ್ದಿ
Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್ ಅವರಿಗೆ ಸನ್ಮಾನ
20/06/2026, 19:48
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಪರಶುರಾಂಪುರ ಹೋಬಳಿ ಯ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಿಕರಾಗಿ ಮುಂಬಡ್ತಿ ಪಡೆದ ಎಸ್. ಆರ್. ರಾಜೇಶ್ ಅವರು ಅಧಿಕಾರ ಸ್ವೀಕಾರ ಮಾಡಿದರು.

ಮುಂಬಡ್ತಿ ಪಡೆದು ಕಚೇರಿಗೆ ಹಾಜರಾದ ಅವರನ್ನು ಇಲಾಖೆಯ ಚಳ್ಳಕೆರೆ ತಾಲ್ಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾದ ಎಸ್. ಟಿ. ಸೂರ್ಯ ಪ್ರಕಾಶ್, ತಾಲ್ಲೂಕು ಕಾರ್ಯದರ್ಶಿ ಟಿ. ಒಬಯ್ಯ, ಹಾಗೂ ಸದಸ್ಯರಾದ ಬಿ ಸತೀಶ, ಆಂಜನೇಯ, ವೀರೇಶ್, ಪ್ರಹ್ಲಾದ, ನಾಗರಾಜ, ಶಿವು ಪ್ರಕಾಶ್, ಜನಾರ್ದನ್, ಸಿ. ಪ್ರಕಾಶ್, ವೀರ ರಂಗಪ್ಪ ಹಾಗೂ ಇತರರು ಸನ್ಮಾನಿಸಿದರು












