2:46 AM Thursday23 - April 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ…

ಇತ್ತೀಚಿನ ಸುದ್ದಿ

ರಾಮೇಶ್ವರ ದೇಗುಲದಲ್ಲಿ ರಾಜಕೀಯ ಮೇಲಾಟ?: ಧಾರ್ಮಿಕ ಸಂಪ್ರದಾಯಕ್ಕೆ ತಿಲಾಂಜಲಿ?

06/12/2024, 15:10

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com
ತೀರ್ಥಹಳ್ಳಿ ಸಮೀಪದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಅತ್ಯಂತ ವೈಭವದ ಎಳ್ಳಮಾವಾಸ್ಯೆ ಜಾತ್ರೆಗೆ ದಿನಗಣನೆ ಆರಂಭವಾಗಿದ್ದರೂ ಸಹ ಕೆಲವು ವಿಚಾರದಲ್ಲಿ ರಾಜಕೀಯ ಮಾಡುವ ಮೂಲಕ ಧಾರ್ಮಿಕ ಸಂಪ್ರದಾಯಗಳನ್ನೇ ಮರೆಯುತ್ತಿದ್ದಾರ? ಎಂಬ ಅನುಮಾನ ಮೂಡುವಂತೆ ಮಾಡಿದೆ.
ಹೌದು ಎಳ್ಳಮಾವಾಸ್ಯೆ ಜಾತ್ರೆಗೆ 18 ದಿನಗಳು ಬಾಕಿ ಇದ್ದು ಇಲ್ಲಿಯವರೆಗೆ ಜಾತ್ರೆಗೆ ಸಂಬಂಧಪಟ್ಟಂತೆ ಯಾವುದೇ ಸಭೆ ನಡೆಸಿ ಜಾತ್ರೆ ಹೇಗಿರಬೇಕು? ಎಂಬುದರ ಬಗ್ಗೆ ರೂಪುರೇಷೆಗಳು, ಜಾತ್ರೆಯ ಬಜೆಟ್ ಎಷ್ಟು? ಜಾತ್ರೆ ವೈಭವ ಕಳೆಗಟ್ಟಿಸುವುದು ಹೇಗೆ? ಐದು ದಿನ ನಡೆಯುವ ಜಾತ್ರೆಗೆ ಪೂರ್ವ ಸಿದ್ಧತೆ ಹೇಗಿರಬೇಕು? ಎಂಬುದರ ಚರ್ಚೆ ಮಾಡಿಲ್ಲ.
ಅದರಲ್ಲೂ ಒಂದು ಬಾರಿ ತಹಸೀಲ್ದಾರ್ ನೇತೃತ್ವದಲ್ಲಿ ದಿನಾಂಕ ನಿಗದಿ ಮಾಡಿದ್ದರೂ ಸಹ ಅದಕ್ಕೆ ಕಾಂಗ್ರೆಸ್ – ಬಿಜೆಪಿ ಎಂಬ ರಾಜಕೀಯವನ್ನು ಬಳಸಿ ಸಂಬಂಧಪಟ್ಟವರಿಗೆ ಸರಿಯಾಗಿ ಅಹ್ವಾನ ನೀಡಿಲ್ಲ ಎಂದು ಸಭೆಯನ್ನು ದಿಡೀರ್ ರದ್ದುಗೊಳಿಸಲಾಯಿತು. ಆದರೆ ಇನ್ನು ರಾಮೇಶ್ವರ ದೇವಸ್ಥಾನದ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು ವೈಭವದ ಜಾತ್ರೆಯ ಪೂರ್ವ ಸಿದ್ಧತೆಗಳು ನಡೆಯಬೇಕಾಗಿದ್ದು ಅದ್ಯಾವುದು ಇದುವರೆಗೂ ನಡೆದಿಲ್ಲ.
ರಾಜಕೀಯದಿಂದ ಧಾರ್ಮಿಕ ಸಂಪ್ರದಾಯವನ್ನೇ ಮರೆತ್ರಾ..!!?

ಜಾತ್ರೆಯ ಧಾರ್ಮಿಕ ಸಂಪ್ರದಾಯದಂತೆ ರಥೋತ್ಸವದ ರಥಕ್ಕೆ ಪತಾಕೆ ಕಟ್ಟಲು ಒಂದು ತಿಂಗಳು ಮೊದಲೇ ಆಹ್ವಾನ ನೀಡಬೇಕಿತ್ತು. ಮೇಳಿಗೆಯ ಗೋವಿಂದ ಶೆಟ್ಟರು ತೀರ್ಥಹಳ್ಳಿ ತಾಲೂಕಿನಲ್ಲಿ ನಡೆಯುವ ಎಲ್ಲಾ ರಥೋತ್ಸವದ ರಥವನ್ನು ಕಟ್ಟುತ್ತಾರೆ. ಹಾಗೆ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ರಥೋತ್ಸವಕ್ಕೂ ಪತಾಕೆ ಕಟ್ಟುತ್ತಾರೆ. ಆದರೆ ಇದುವರೆಗೂ ಅವರಿಗೆ ಆಹ್ವಾನವೇ ನೀಡಿಲ್ಲ. ಇನ್ನು ರಥೋತ್ಸವ ನಡೆಸುವ ತಂತ್ರಿಗಳಾದ ಲಕ್ಷ್ಮೀಶ್ ತಂತ್ರಿಗಳಿಗೆ ಆಹ್ವಾನ ಕೂಡ ನೀಡಬೇಕು. ಸುತ್ತ ಮುತ್ತಲಿನ ಮಠ ಮಂದಿರಕ್ಕೆ ಅಹ್ವಾನ ನೀಡಬೇಕು. ಸ್ಥಳೀಯ ದೇವಸ್ಥಾನಗಳಿಗೆ ಅಹ್ವಾನ ನೀಡುವುದು ಸಹ ಒಂದು ಪದ್ಧತಿ.

ಇದರ ಜೊತೆಗೆ ರಥದ ಕೊಟ್ಟಿಗೆಯಿಂದ ರಥವನ್ನು ಹೊರ ತೆಗೆದು ಅದರ ಚಕ್ರ, ಕುದುರೆ, ಇದೆಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇದ್ಯಾವುದು ಸಹ ಇಲ್ಲಿಯವರೆಗೆ ನಡೆದಿಲ್ಲ. ನಡೆಯುವುದಕ್ಕೆ ಜಾತ್ರೆ ಸಮಿತಿಯೇ ರಚನೆ ಆಗಿಲ್ಲ.
ಜಾತ್ರಾ ಸಮಿತಿ ರಚನೆ ಆಗಲೂ ರಾಜಕೀಯ ಎಂಬ ಪರದೆ ಅಡ್ಡ ಬರುತ್ತಿದೆ. ಹಾಗಾದರೆ ಇವರಿಗೆಲ್ಲಾ ಅಹ್ವಾನ ನೀಡುವುದು ಯಾರು? ತಿಂಗಳಿಗೆ ಮೊದಲು ವೀಳ್ಯದೆಲೆ – ಅಡಿಕೆ ನೀಡಿ ಅಹ್ವಾನ ನೀಡಬೇಕು ಎಂಬ ಸಂಪ್ರದಾಯವನ್ನೇ ಈ ರಾಜಕೀಯದಿಂದಾಗಿ ಮರೆಯುತ್ತಿದ್ದಾರಾ? ಎಂಬೆಲ್ಲಾ ಪ್ರೆಶ್ನೆಗಳು ಮೂಡುತ್ತಿವೆ.


ಈಗಾಗಲೇ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಕ್ಕೆ ಹೊಸ ಸಮಿತಿ ರಚನೆ ಮಾಡಬೇಕೆಂಬ ಆದೇಶದ ಅನ್ವಯ ಇರುವುದರಿಂದ ಆ ಸಮಿತಿಗಾಗಿ ಕೂಡ ರಾಜಕೀಯ ನಡೆಯುತ್ತಿದ್ದು ಒಟ್ಟಿನಲ್ಲಿ ದೇವಸ್ಥಾನದ ವಿಷಯದಲ್ಲಿ ರಾಜಕೀಯ ಮಾಡದೇ ಮಲೆನಾಡಿನಲ್ಲಿ ಎಲ್ಲಾ ಕಡೆ ಹೋಲಿಕೆ ಮಾಡಿದರೆ ತೀರ್ಥಹಳ್ಳಿಯ ರಾಮೇಶ್ವರ ದೇವರ ಜಾತ್ರೆಯಿಂದಲೇ ಉಳಿದ ಎಲ್ಲಾ ಊರುಗಳ ಸುತ್ತ ಮುತ್ತಲಿನ ಜಾತ್ರೆಗಳು ಆರಂಭವಾಗುತ್ತದೆ.

ಒಟ್ಟಿನಲ್ಲಿ ತೀರ್ಥಹಳ್ಳಿ ಎಳ್ಳಮಾವಾಸ್ಯೆಯ ಐದು ದಿನಗಳ ಪರ್ಯಂತ ನಡೆಯುವ ಜಾತ್ರೆಯು ಸಡಗರ ಸಂಭ್ರಮಹಾಗೂ ಅತ್ಯಂತ ವೈಭವದಿಂದ ಜಾತ್ರೆ ನಡೆಸಲಿ, ಇದರಿಂದ ತೀರ್ಥಹಳ್ಳಿಗೆ ವಿಷೇಶ ಮೆರಗು ಬರಲಿ ಎಂಬುದೆ ಎಲ್ಲರ ಆಶಯ..

ಇತ್ತೀಚಿನ ಸುದ್ದಿ

ಜಾಹೀರಾತು