3:42 PM Thursday30 - April 2026
ಬ್ರೇಕಿಂಗ್ ನ್ಯೂಸ್
ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ

ಪೊಲೀಸ್ ಇಲಾಖೆಯಲ್ಲಿ ದಕ್ಷತೆಗೆ ಇನ್ನೊಂದು ಹೆಸರು ಮಸ್ಕಿಯ ಪಿಎಸ್ ಐ ಭೀಮದಾಸ್: ಸಾರ್ವಜನಿಕರಿಂದಲೂ ಶಹಬಾಸ್ ಗಿರಿ!!

14/07/2021, 09:41

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಗೆ ಮುಂಬಡ್ತಿ ಪಡೆದು ಕ್ರೈಂ ವಿಭಾಗಕ್ಕೆ ಪಿಎಸ್ಐ ನೂತನ ಆಯ್ಕೆಯಾದ ಭೀಮದಾಸ್ ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಕ್ಕುತ್ತಿದ್ದಾರೆ.

ಮಾನ್ವಿ ತಾಲೂಕಿನ ಆರೋಲಿ ಗ್ರಾಮದವರಾದ ಅವರು1969 ಜೂನ್ 1ರಂದು ಜನಿಸಿದರು. ಅವರ ತಂದೆ ವೆಂಕೋಬ, ತಾಯಿ ಲಕ್ಷ್ಮಮ್ಮ. ಭೀಮದಾಸ್ ಅವರು ಪ್ರಾಥಮಿಕ ಶಿಕ್ಷಣವನ್ನು ಆರೋಲಿ ಯಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಮಟಮಾರಿ ಮಹಾಂತೇಶ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿದರು. ನಂತರ ಪಿಯುಸಿ ರಾಯಚೂರಿನ ಸೈನ್ಸ್ ಎಲ್ವಿಡಿ ಕಾಲೇಜಿನ ಪೂರೈಸಿದರು. ಬಿಎ ಮಾಡುವುದರ ಒಳಗಾಗಿ ಎಂಪ್ಲಾಮೆಂಟ್ ಕಡೆಯಿಂದ ಪೊಲೀಸ್ ಇಲಾಖೆಗೆ ಪಾದರ್ಪಣೆ ಮಾಡಿದರು.

ಬಡ ಕುಟುಂಬದಲ್ಲಿ ಜನಿಸಿದ ಅವರು ಇಂದು ಮಸ್ಕಿ ಪಿಎಸ್ಐ ಆಯ್ಕೆಯಾಗಿರುವ ಸಮಾಜಕ್ಕೆ ಮಾದರಿಯಾದ ವಿಷಯವಾಗಿದೆ. ಇವರು ಚೆನ್ನೈನಲ್ಲಿ ಟ್ರೈನಿಂಗ್ ಪಡೆದು ಎಸ್ಪಿ ಆಫೀಸ್, ನಂತರ ತುರುವಿಹಾಳ, ಮುದಗಲ್ಲು, ಮಸ್ಕಿ, ಯಾಪಲದಿನ್ನಿ ಸೇರಿದಂತೆ

ರಾಯಚೂರು ನಾನಾ ಕಡೆಗೆ ಸೇವೆ ಸಲ್ಲಿಸಿದರು. ಅಲ್ಲಿಂದ ಹೆಡ್ ಕಾನ್ ಸ್ಟೇಬಲ್ ಆಗಿ ಮುಂಬಡ್ತಿ ಪಡೆದು ಜಮಾದಾರ್ ಆಗಿ ರಾಯಚೂರು ಜಿಲ್ಲೆಯ ಎಲ್ಲ  ಪೊಲೀಸ್ ಇಲಾಖೆ ಠಾಣೆಯಲ್ಲಿ ಸೇವೆ ಸಲ್ಲಿಸಿದರು. ಮಸ್ಕಿ ಪೊಲೀಸ್ ಠಾಣೆಗೆ ಕ್ರೈಂ ಪೊಲೀಸ್ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ಅವರು ರಾಯಚೂರಿನ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್ ಬಿಂದು ಅವರ ಮೆಚ್ಚಿಗೆ ಪಡೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಪೊಲೀಸ್ ವರಿಷ್ಠ ಅ ಸಿಬಿ ವೇದಮೂರ್ತಿಕೂಡ ಮೆಚ್ಚಿಗೆ ಪಟ್ಟಿದ್ದಾರೆ.

ಅವರು ಯಾದಗಿರಿ ಜಿಲ್ಲಾ ಎಸ್ಬಿ ಆಗಿ ಸೇವೆ ಸಲ್ಲಿಸುತ್ತಿರುವಾಗ ಅವರ ಕರ್ತವ್ಯವನ್ನು ಗುರುತಿಸಿ ಮೆಚ್ಚಿಗೆ ಪಟ್ಟಿದ್ದಾರೆ. ಅದರಂತೆ ಬಡಕುಟುಂಬದಿಂದ ಬಂದ ಭೀಮ ದಾಸ್ ಅವರ ಜೀವನ ಇತರರಿಗೆ ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ.

ಇವರ 35 ವರ್ಷಗಳ ಪೊಲೀಸ್ ಇಲಾಖೆಯ ಸೇವೆಯಲ್ಲಿ ಯಾವುದೇ ಚ್ಯುತಿ ಬಂದಿಲ್ಲ. ಇವರು ನಿಜವಾಗಿಯೂ ಪೊಲೀಸ್ ಇಲಾಖೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವ ವ್ಯಕ್ತಿ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಾರೆ.

ಅವರು ಹೆಡ್ ಕಾನ್ಸ್ಟೇಬಲ್ ಇದ್ದಾಗ ಹಳ್ಳಿಗಳಲ್ಲಿ ಸೈಕಲ್ ಮೇಲೆ ತಿರುಗಾಡುತ್ತಿರುವುದು ಸಾಮಾನ್ಯವಾಗಿತ್ತು. ಒಟ್ಟಿನಲ್ಲಿ ಭೀಮದಾಸ್ ಅವರು ಒಬ್ಬ ಉತ್ತಮ ಅಧಿಕಾರಿ.

ಇತ್ತೀಚಿನ ಸುದ್ದಿ

ಜಾಹೀರಾತು