8:00 PM Wednesday26 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

ಮುಧೋಳ: ಬೇಡಜಂಗಮ ಬೃಹತ್ ಸಮಾವೇಶ ಸಂವಿಧಾನಬದ್ಧ ಹಕ್ಕಿಗೆ ಆಗ್ರಹ

19/02/2022, 22:26

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ 

info.reporter@gmail.com

ಮುಧೋಳದಲ್ಲಿ ಇಂದು ನಡೆದ ಬೇಡಜಂಗಮ ಬೃಹತ್ ಸಮಾವೇಶ ಇಂದು ಮುಧೋಳದಲ್ಲಿ ನಡೆಯಿತು. ಸುಮಾರು 20 ಸಾವಿರ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಚಳಿಗೇರಿ ಶ್ರೀಗಳು ಮಾತನಾಡಿ, ಬೇಡ ಜಂಗಮರಿಗೆ ಸಂವಿಧಾನಬದ್ಧವಾದ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿದರು. 

ಒಕ್ಕೂಟದ ಅಧ್ಯಕ್ಷ ಬಿಡಿ ಹಿರೇಮಠ ಅವರು ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 19ನೇ ಕಾಲದಲ್ಲಿ ಬರುವ ಬೇಡಜಂಗಮ ಜಾತಿಯು ಈಗಾಗಲೇ ಸಂವಿಧಾನಾತ್ಮಕವಾಗಿದ್ದು, ಜಾತಿ ಸರ್ಟಿಫಿಕೇಟ್ ಕೇಳಿದರೆ ವೀರಶೈವ-ಲಿಂಗಾಯತ ಎಂದು ನೀಡುತ್ತಿರುವುದು ಅವೈಜ್ಞಾನಿಕ. ವೀರಶೈವ ಲಿಂಗಾಯತ ವು ಒಂದು ಪಂಥವಾಗಿದ್ದು ಅದು ಜಾತಿ ಆಗಿರುವುದಿಲ್ಲ ಎಂದು ಹೇಳಿದ ಅವರು ಮುಂದಿನ ಹೋರಾಟ ಬೆಂಗಳೂರಿನಲ್ಲಿ ಉಗ್ರವಾಗಿ ಮಾಡಲಾಗುವುದು ಎಂದು ಹೇಳಿದರು.
ರಾಜ್ಯಾಧ್ಯಕ್ಷ ದ್ವಾರಕೀಶ್ ಮಾತನಾಡಿ, ಸಮಾಜದಲ್ಲಿ ಜಂಗಮ ಸಮಾಜಕ್ಕೆ ದೊಡ್ಡ ಗೌರವ ಇದೆ.
ದಲಿತ ಸಂಘಟನೆಯ ರಾಜಾಧ್ಯಕ್ಷ ವೆಂಕಟೇಶ್ ಅವರ  ಬೆಂಬಲವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶ ಮೇರಿಗೆ ಇನ್ನು ಎರಡು ತಿಂಗಳಲ್ಲಿ ಎಲ್ಲ ಜಂಗಮರಿಗೆ ಬೇಡ ಜಂಗಮ ಪ್ರಮಾಣಪತ್ರ ಸಿಗಲಿದೆ ಎಂದು ಹೇಳಿದರು.

ಕೆಲವು ಶಾಸಕರು ಜಂಗಮರಿಗೆ ಸಿಗಬೇಕು ಪ್ರಮಾಣ ಪತ್ರಕೆ ಅಡ್ಡಿ ಮಾಡಿದರು ಎಂದರು.

ಬೃಹತ್ ಪ್ರತಿಭಟನಾ ಮೆರವಣಿಗೆ ಮುಧೋಳ ಪಟ್ಟದಿಂದ ರನ್ನ ಕ್ರೀಡಾಂಗಣಕ್ಕೆ ಬಂದು ತಲುಪಿತು. 

ರಾಜ್ಯ ದಲಿತ ಸಂಘರ್ಷ ಸಮಿತಿಯ ವೆಂಕಟೇಶ್ ಅವರು ಮಾತನಾಡಿ, ಬೇಡ ಜಂಗಮರ ಹೋರಾಟ ನ್ಯಾಯಯುತವಾಗಿದ್ದು ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದರು.

ಸಮಾವೇಶದಲ್ಲಿ ರಾಯಚೂರು ಜಿಲ್ಲಾ ಬೇಡಜಂಗಮ ಸಮಾಜದ ಮುಖಂಡರಾದ ಆದಿ ಬಸವರಾಜ್ ಸಿಂಧನೂರು, ಸಂಪಾದಕರಾದ
ವಿರುಪಾಕ್ಷಯ್ಯ ಸಾಲಿಮಠ, ರಾಯಚೂರು ಬಸವರಾಜ್ ಹಿರೇಮಠ, ಮುಸ್ಲಿಂ ಕಾರಲಕುಂಟೆ ಮಲ್ಲಿಕಾರ್ಜುನ್ ಲಿಂಗಸ್ಗೂರು ರಮೇಶ್ ಸಿಂಗ ಪತ್ರಕರ್ತ  ಬಸವರಾಜ್ ಸಿದ್ದಲಿಂಗಯ್ಯ ಸಿದ್ದಲಿಂಗಯ್ಯ ಸ್ವಾಮಿ ಮಠ ಗಣ ಮಠದಯ್ಯ ಸ್ವಾಮಿ ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು