6:11 AM Wednesday26 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

Mangaluru | ಪಾಲ್ದನೆ ಚರ್ಚ್ ವಾರ್ಷಿಕ ಹಬ್ಬ: ಸಮುದಾಯ ದಿನಾಚರಣೆ; ಚರ್ಚ್ ನ ವಿಂಶತಿ ಸಂಭ್ರಮ

15/02/2026, 17:53

ಮಂಗಳೂರು(reporterkarnataka.com): ನಗರದ ಪಾಲ್ದನೆ ಸಂತ ತೆರೆಸಾ ಚರ್ಚ್ ನ ವಾರ್ಷಿಕ ಹಬ್ಬ,ಸಮುದಾಯ ದಿನಾಚರಣೆ ಮತ್ತು ಚರ್ಚ್ ಗೆ ಇಪ್ಪತ್ತು ವರ್ಷ ತುಂಬಿದ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಗ್ಗೆ 8 ಗಂಟೆಗೆ ಹಬ್ಬದ ಸಂಭ್ರಮದ ಬಲಿ ಪೂಜೆ ನಡೆಯಿತು. ಬಲಿ ಪೂಜೆಯ ನೇತೃತ್ವವನ್ನು ವಹಿಸಿದ್ದ ಬೆಂಗಳೂರಿನ ಸೈಂಟ್ ಜಾನ್ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಡೈರೆಕ್ಟರ್ ವಂದನೀಯ ಫಾ. ಅಜಿತ್ ಮಿನೇಜಸ್ ತಮ್ಮ ಧರ್ಮೋಪದೇಶದಲ್ಲಿ ಸಮುದಾಯ ದಿನಾಚರಣೆಯ ಮಹತ್ವವನ್ನು ವಿವರಿಸಿ, ಮನುಷ್ಯ ಸಂಘ ಜೀವಿಯಾಗಿ ಸಮುದಾಯದಲ್ಲಿ ಜೀವಿಸುತ್ತಾನೆ. ತನ್ನ ಮನೆ, ತಮ್ಮ ನೆರೆ ಕರೆ, ತನ್ನ ವಾರ್ಡ್, ತನ್ನ ಚರ್ಚ್ ನಿಂದ ಬೇರ್ಪಟ್ಟು ಜೀವಿಸಿದರೆ ಆತ ಒಂಟಿಯಾಗುತ್ತಾನೆ. ಯಾರೇ ಆದರೂ ಒಳ್ಳೆಯ ಕೆಲಸ ಮಾಡುವಾಗ ಟೀಕೆ ಟಿಪ್ಪಣಿ ಬರುವುದು ಸಹಜ. ಅದನ್ನು ಮೆಟ್ಟಿ ನಿಂತು ತನ್ನ ಕೆಲಸ ಮುಂದುವರಿಸ ಬೇಕು. ಸಮಾಜದಲ್ಲಿ ಸಂಘ ಜೀವಿಯಾಗಿ ಬದುಕಿದರೆ ಯಶಸ್ಸು ಹಾಗೂ ಮನಶ್ಯಾಂತಿ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಬಲಿ ಪೂಜೆಯಲ್ಲಿ ಭಾಗವಹಿಸಿದ್ದ ಕಾರವಾರ ಧರ್ಮ ಕ್ಷೇತ್ರದ ವಂದನೀಯ ಫಾ. ಪಾವುವಸ್ತೀನ್ ಪೂರ್ತಾಡೋ ಅವರು ಭಕ್ತ ವೃಂದವನ್ನು ಆಶೀರ್ವದಿಸಿದರು.
ಬಲಿ ಪೂಜೆಯಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಹಬ್ಬ ಆಚರಣೆಗೆ ಸಹಕರಿಸಿದವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.


ಸಂಜೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ವಂದನೀಯ ಫಾ. ಅಜಿತ್ ಮಿನೇಜಸ್ ಮತ್ತು ಇತರ ಗುರುಗಳು ಶುಭ ಕೋರಿದರು ಹಾಗೂ ಊಟದ ವ್ಯವಸ್ಥೆಯ ಮೇಲೆ ಆಶೀರ್ವಚನ ನೀಡಿದರು.
ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಡಿಯಾಕೋನ್ ರೋವಿನ್ ಲೋಪೆಜ್, ಆಹಾರ ಸಮಿತಿಯ ಸಂಯೋಜಕ ಆಲ್ಬನ್ ಮೊಂತೇರೊ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಮಾರಿಯೋ ರೇಗೊ, ಆಧ್ಯಾತ್ಮಿಕ ಸಮಿತಿಯ ಸಂಯೋಜಕ ಆಸ್ಟಿನ್ ಮೊಂತೇರೊ, ಗಾಯನ ಮಂಡಳಿಯ ಅಧ್ಯಕ್ಷರಾದ ಲಿಝಿ ಫೆರ್ನಾಂಡಿಸ್ ಮತ್ತು ಇತರರು ಉಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು