12:05 PM Wednesday16 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಮೇಲ್ಟಾವಣಿಗೆ ಗುದ್ದಲಿ ಪೂಜೆ

31/03/2024, 10:42

ಮಂಗಳೂರು(reporterkarnataka.com):ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರಗೊಂಡು ಸುಂದರವಾಗಿ ದೈವಿಕವಾಗಿ ಪುನರ್ ನಿರ್ಮಾಣಗೊಂಡ ದೇವಸ್ಥಾನದ ಅಂಗಣವನ್ನು ಮಳೆ, ಬಿಸಿಲಿನಿಂದ ರಕ್ಷಿಸಿ, ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 60 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕ್ಷೇತ್ರಕ್ಕೆ ಮೇಲ್ಟಾವಣಿ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ಮಾ. 29ನೇ ಶುಕ್ರವಾರ ಬೆಳಿಗ್ಗೆ ಸುಮುಹೂರ್ತದಲ್ಲಿ ಶ್ರೀಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಅನಂತ ಉಪಾಧ್ಯಾಯರ ಮತ್ತು ಹರಿ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು.
ಆಡಳಿತ ಮೊತ್ತೇಸರರು ಪುರುಷೋತ್ತಮ ಕುಲಾಲ್ ಕಲ್ಬಾವಿ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಯವರು ಉಪಸ್ಥಿತಿಯಲ್ಲಿ, ಮುಂಬೈಯ ದಾನಿ ದೇವಕಿ ಸುನಿಲ್ ಸಾಲಿಯನ್, ಡಾ. ಸುರೇಖಾ ರತನ್ ಕುಲಾಲ್ ಅವರ ಯಜಮಾನಿಕೆಯಲ್ಲಿ ಧಾರ್ಮಿಕ ವಿಧಿಗಳು ನಡೆದವು.
ಮಾಣಿಲ ಶ್ರೀಗಳು ಆಶೀರ್ವಚನ ನೀಡಿ ಕ್ಷೇತ್ರದಲ್ಲಿ ಧರ್ಮ ಕಾರ್ಯಗಳು ನಡೆಯುತ್ತಿರುವಾಗ ಭಕ್ತರಿಗೆ ಅನುಕೂಲಕ್ಕಾಗಿ ಮತ್ತು ದೇವಸ್ಥಾನದ ಮಳೆ ಬಸಿಲಿನ ರಕ್ಷಣೆಗಾಗಿ,ಧ್ಯಾನ ಮತ್ತು ಶುಭ ಕಾರ್ಯಗಳು ನಡೆಯುವುದಕ್ಕೆ ಸುತ್ತಲು ಮೇಲ್ಟಾವಣಿಗೆ ಅಗತ್ಯ ವಾಗಿದೆ ಅದರ ಯೋಜನೆಯನ್ನು ರೂಪಿಸಿ ಇರುವುದು ಅಗತ್ಯವಾಗಿತ್ತು ಈ ಮೂಲಕ ಕ್ಷೇತ್ರ ಇನ್ನಷ್ಟು ಸುಂದರಮಯವಾಗಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾದ ಎ ದಾಮೋದರ್ , ಸೇವ ಟ್ರಸ್ಟ್ ನ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್, ಸೇವಾ ಸಮಿತಿಯ ಅಧ್ಯಕ್ಷ ಕೆ. ಸುಂದರ ಕುಲಾಲ್ ಶಕ್ತಿನಗರ, ಮಹಿಳಾ ಮಂಡಳಿಯ ಅಧ್ಯಕ್ಷ ಗೀತಾ ಮನೋಜ್ ಮರೋಳಿ, ನ್ಯಾ. ರವೀಂದ್ರ ಮುನ್ನಿ ಪಾಡಿ, ಸುರೇಶ್ ಕುಲಾಲ್ ಮಂಗಳದೇವಿ ,ಗಿರಿಧರ್ ಜೆ ಮೂಲ್ಯ , ಕಸ್ತೂರಿ ಪಂಜ , ರೂಪ ಬಂಗೇರ,ಕುಂಬಾರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಅಧ್ಯಕ್ಷ ನ್ಯಾ.ಭಾಸ್ಕರ್ ಪೆರುವಾಯಿ, ಎಂ .ಪಿ ಬಂಗೇರ,ಸದಾಶಿವ ಕುಲಾಲ್, ನ್ಯಾ. ರಾಮ್ ಪ್ರಸಾದ್ ,ಪ್ರವೀಣ್ ಬಸ್ತಿ , ನ್ಯಾ. ಉದಯಾನಂದ ,ದಿನೇಶ್ ಕುಲಾರ್ ಮುಂಬಯಿ, ಗಂಗಾಧರ್ ಬಂಜನ್, ಲl ಅನಿಲ್ ದಾಸ್. ನಾಗರಾಜ್ ಸುರತ್ಕಲ್, ಕಾರ್ಪೊರೇಟರ್ ಗಣೇಶ್ ಕುಲಾಲ್, ಆನಂದ ಉರ್ವ , ಮೋಹನ ದಾಸ್ ಅಲಪೆ, ಧೂಮಪ್ಪ ಮಂದಾರ ಬೈಲು, ವಿಶ್ವನಾಥ್ ಬಂಗೇರ,ನಾಗವೇಣಿ, ಚಂದ್ರಪ್ರಭ,
ಸಿವಿಲ್ ಗುತ್ತಿಗೆದಾರ ಹೊನ್ನಪ್ಪ ಕುಲಾಲ್, ಸುರೇಶ್ ಕುಲಾಲ್ ಮುಂಬೈ, ವಿಶ್ವನಾಥ್ ವಾಮಂಜೂರು, ಸದಾಶಿವ ಬಿಜೈ, ವಿನಯ್ ಕುಮಾರ್ ಮತ್ತಿತರು ಪಾಲ್ಗೊಂಡಿದ್ದರು,

ಇತ್ತೀಚಿನ ಸುದ್ದಿ

ಜಾಹೀರಾತು