10:50 AM Thursday18 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಮೇ 15ರಂದು ರಾಜ್ಯಾದ್ಯಂತ ಕನ್ನಡ ಚಲನಚಿತ್ರ “ಶಿಖಂಡಿ” ಬಿಡುಗಡೆ

29/04/2026, 18:17

ಗಣೇಶ್ ಇನಾಂದಾರ್ ಬಳ್ಳಾರಿ

info.reporterkaerk@gmail
com

ಕನ್ನಡ ಚಲನಚಿತ್ರ ಶಿಖಂಡಿ ಮೇ 15ರಂದು ರಾಜ್ಯಾದ್ಯಂತ ನೂರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕರಾದ ಪೊಲಾ ಪ್ರವೀಣ್ ತಿಳಿಸಿದರು.
ಬುಧವಾರ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಈ ಚಿತ್ರದಲ್ಲಿ ಕಥಾವಸ್ತುವಿನ ಉತ್ತಮ ಸಂದೇಶವಿದೆ,ಒಳ್ಳೆಯ ಹಾಡುಗಳು ಎಲ್ಲರೂ ನೋಡಿ ಆನಂದಿಸಿ ತಾಯಿ ಪ್ರೀತಿಸುವ ವಸ್ತು, ಹಾಡು ಪ್ರೇಕ್ಷಕರ ಮನ ಕರಗಸುವಂತೆ ಮೂಡಿದೆ ಸದ್ಯದಲ್ಲಿ ಟ್ರೇಲರ್
ಬಿಡುಗಡೆ ಮಾಡಲಿದೆ ಎಂದು ತಿಳಿದರು.
ಇಂದಿನ ಸಮಾಜದಲ್ಲಿ ಮಂಗಳಮುಖಿಯರ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಅಳಿಸು ಹಾಕುವ ಹಾಗೂ ಸಮಾಜದ ಆಚರಣೆಗೆ ದೈವತ್ವದ ಕಲ್ಪನೆಯ ತುಂಬುವ ಪ್ರಯತ್ನ ಈ ಚಿತ್ರದಲ್ಲಿ ಪ್ರಯತ್ನಮಾಡಲಾಗಿದೆ ಎಂದು ವಿವರಿಸಿದರು. ಚಿತ್ರ ಲಾಭಗಳಿಸಿದರೆ ಮಂಗಳಮುಖಿ ಸಮಾಜದ ಜನರಿಗೆ ಹೊಲಿಗೆ ಯಂತ್ರ ಕೊಡಿಸಿ ಅವರು ಭಿಕ್ಷಾಟನೆಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಗುರುಮೂರ್ತಿ ಮಾತನಾಡಿ,ಮಹಾಭಾರತದ ಶಿಖಂಡಿ ಪಾತ್ರವನ್ನು ಚಿತ್ರದ ಮೂಲ ವಸ್ತುವಾಗಿಟ್ಟುಕೊಂಡು ರಚಿಸಿದೆ.
ಮೊದಲಿಗೆ ರಾಜ್ಯದ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದೆ, ನಂತರ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲಿ ಬಳ್ಳಾರಿಯ 22 ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ.
ಬಳ್ಳಾರಿ, ಮೈಸೂರು, ಬಿಡದಿ,ಮಾಗಡಿ,ಬೆಂಗಳೂರು, ಮೊದಲಾದ ಕಡೆ ಚಿತ್ರೀ ಕರಿಸಲಾಗಿದೆ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ ಚಿತದ್ರ ಒಟ್ಟು ಸಮಯವು 2.20 ಗಂಟೆಗಳ ಕಾಲ ವಾಗಿರುತ್ತದೆ ಚಿತ್ರದ ಹಾಡುಗಳನ್ನು ಚಿನ್ನಸ್ವಾಮಿ ಹಾಡು ಬರೆದಿದ್ದಾರೆ ಎಂದು ವಿವರಿಸಿದರು.
ಚಿತ್ರದ ನಾಯಕಿ ಖ್ಯಾತಿ ಹಾಗೂ ನಾಯಕ ನಟ ಯುವರಾಜ್ ಗೌಡ ಮಾತನಾಡಿದರು, ನಿಖಿಲ್ ಮಾಳೇಕರ್,ಸ್ವಾಮಿ,ಚಾಂದಿನಿ,ಆನಂದ್ ಹೂಗಾರ್,ಸಹ ನಿರ್ದೇಶಕ ಉಮೇಶ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು