1:09 AM Saturday13 - June 2026
ಬ್ರೇಕಿಂಗ್ ನ್ಯೂಸ್
ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ… ಹಾಸನ | ಸಕಲೇಶಪುರ ಬಳಿ ಕರುಗಳ ಬೆನ್ನಟ್ಟಿದ ಕಾಡಾನೆ ಮರಿ ಚಿಕ್ಕಮಗಳೂರು: ಗುಂಡು ಹಾರಿಸಿಕೊಂಡು ಗೃಹಿಣಿ ಅನುಮಾನಾಸ್ಪದ ಸಾವು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ:… ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ… ಸಿಎಂ ಕಾನೂನು ಸಲಹೆಗಾರ ಸ್ಥಾನಕ್ಕೆ ಎ. ಎಸ್. ಪೊನ್ನಣ್ಣ ರಾಜೀನಾಮೆ: ಸಚಿವ ಸ್ಥಾನ… Kodagu | ನಾಪೋಕ್ಲು: ಕಾರು – ಬೈಕ್ ಅಪಘಾತ- ಸವಾರ ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ

ಮೇ 15ರಂದು ರಾಜ್ಯಾದ್ಯಂತ ಕನ್ನಡ ಚಲನಚಿತ್ರ “ಶಿಖಂಡಿ” ಬಿಡುಗಡೆ

29/04/2026, 18:17

ಗಣೇಶ್ ಇನಾಂದಾರ್ ಬಳ್ಳಾರಿ

info.reporterkaerk@gmail
com

ಕನ್ನಡ ಚಲನಚಿತ್ರ ಶಿಖಂಡಿ ಮೇ 15ರಂದು ರಾಜ್ಯಾದ್ಯಂತ ನೂರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕರಾದ ಪೊಲಾ ಪ್ರವೀಣ್ ತಿಳಿಸಿದರು.
ಬುಧವಾರ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಈ ಚಿತ್ರದಲ್ಲಿ ಕಥಾವಸ್ತುವಿನ ಉತ್ತಮ ಸಂದೇಶವಿದೆ,ಒಳ್ಳೆಯ ಹಾಡುಗಳು ಎಲ್ಲರೂ ನೋಡಿ ಆನಂದಿಸಿ ತಾಯಿ ಪ್ರೀತಿಸುವ ವಸ್ತು, ಹಾಡು ಪ್ರೇಕ್ಷಕರ ಮನ ಕರಗಸುವಂತೆ ಮೂಡಿದೆ ಸದ್ಯದಲ್ಲಿ ಟ್ರೇಲರ್
ಬಿಡುಗಡೆ ಮಾಡಲಿದೆ ಎಂದು ತಿಳಿದರು.
ಇಂದಿನ ಸಮಾಜದಲ್ಲಿ ಮಂಗಳಮುಖಿಯರ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಅಳಿಸು ಹಾಕುವ ಹಾಗೂ ಸಮಾಜದ ಆಚರಣೆಗೆ ದೈವತ್ವದ ಕಲ್ಪನೆಯ ತುಂಬುವ ಪ್ರಯತ್ನ ಈ ಚಿತ್ರದಲ್ಲಿ ಪ್ರಯತ್ನಮಾಡಲಾಗಿದೆ ಎಂದು ವಿವರಿಸಿದರು. ಚಿತ್ರ ಲಾಭಗಳಿಸಿದರೆ ಮಂಗಳಮುಖಿ ಸಮಾಜದ ಜನರಿಗೆ ಹೊಲಿಗೆ ಯಂತ್ರ ಕೊಡಿಸಿ ಅವರು ಭಿಕ್ಷಾಟನೆಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಗುರುಮೂರ್ತಿ ಮಾತನಾಡಿ,ಮಹಾಭಾರತದ ಶಿಖಂಡಿ ಪಾತ್ರವನ್ನು ಚಿತ್ರದ ಮೂಲ ವಸ್ತುವಾಗಿಟ್ಟುಕೊಂಡು ರಚಿಸಿದೆ.
ಮೊದಲಿಗೆ ರಾಜ್ಯದ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದೆ, ನಂತರ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲಿ ಬಳ್ಳಾರಿಯ 22 ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ.
ಬಳ್ಳಾರಿ, ಮೈಸೂರು, ಬಿಡದಿ,ಮಾಗಡಿ,ಬೆಂಗಳೂರು, ಮೊದಲಾದ ಕಡೆ ಚಿತ್ರೀ ಕರಿಸಲಾಗಿದೆ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ ಚಿತದ್ರ ಒಟ್ಟು ಸಮಯವು 2.20 ಗಂಟೆಗಳ ಕಾಲ ವಾಗಿರುತ್ತದೆ ಚಿತ್ರದ ಹಾಡುಗಳನ್ನು ಚಿನ್ನಸ್ವಾಮಿ ಹಾಡು ಬರೆದಿದ್ದಾರೆ ಎಂದು ವಿವರಿಸಿದರು.
ಚಿತ್ರದ ನಾಯಕಿ ಖ್ಯಾತಿ ಹಾಗೂ ನಾಯಕ ನಟ ಯುವರಾಜ್ ಗೌಡ ಮಾತನಾಡಿದರು, ನಿಖಿಲ್ ಮಾಳೇಕರ್,ಸ್ವಾಮಿ,ಚಾಂದಿನಿ,ಆನಂದ್ ಹೂಗಾರ್,ಸಹ ನಿರ್ದೇಶಕ ಉಮೇಶ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು