1:13 PM Saturday27 - June 2026
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;…

ಇತ್ತೀಚಿನ ಸುದ್ದಿ

ಕೋಟೆಕಾರು ಅಜ್ಜಿನಡ್ಕದಲ್ಲಿ ಬ್ಲೂಮೂನ್ ಸಂಸ್ಥೆಯ ‘ಆಕ್ಸಿಬ್ಲೂ ಜೂಸು’ ಲೋಕಾರ್ಪಣೆ

18/08/2021, 17:43

ಮಂಗಳೂರು(reporterkarnataka.com):

ಬ್ಲೂಮೂನ್ ಕಂಪೆನಿಯ ಆಕ್ಸಿಬ್ಲೂ ಪ್ರಸ್ತುತ ಪಡಿಸಿದ ಆಕ್ಸಿಬ್ಲೂ ಜ್ಯೂಸು ಕೋಟೆಕಾರು ಅಜ್ಜಿನಡ್ಕದಲ್ಲಿ ಲೋಕಾರ್ಪಣೆ ಗೊಂಡಿತು.
ಮ್ಯಾಂಗೋ, ಆಪಲ್, ಮಿಂಟ್, ಗೂವಾ ಪ್ಲವರ್ ಗಳ ನೂತನ ಉತ್ಪನ್ನಗಳನ್ನು ಖ್ಯಾತ ಚಲನಚಿತ್ರ ನಟ ನವೀನ್ ಡಿ.ಪಡೀಲ್ ಮತ್ತು ಸಾಮಾಜಿಕ ಮುಖಂಡ ಹೈದರ್ ಪರ್ತಿಪ್ಪಾಡಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನವೀನ್ ಡಿ.ಪಡೀಲ್ ” ಈ ಪರಿಸರದ ಖ್ಯಾತ ಖನಿಜಯುಕ್ತ ನೀರಿನ ಘಟಕ ಆಕ್ಸಿಬ್ಲೂ ಸಂಸ್ಥೆಯು ಆಕ್ಸಿಬ್ಲೂ ಜೂಸು ಎಂಬ ಆಕರ್ಷಕ ಹೆಸರಿನ ಉತ್ಪನ್ನ ಹೊರ ತಂದಿರುವುದು ಭಾರೀ ಸಂತೋಷದ ವಿಷಯ. ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಎಲ್ಲೆಡೆ ಕೀರ್ತಿ ಪಡೆದಿರುವ ಆಝಾದ್ ಗ್ರೂಪ್ ಮಾಲಕರಾದ ಹಾಜಿ ಮನ್ಸೂರ್ ಅಹ್ಮದ್ ಆಝಾದ್ ರವರು ಈ ಎರಡು ಸಂಸ್ಥೆಗಳ ಮೂಲಕ ನೂರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ.

ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಾವು ಹೊರಗಿನ ಉತ್ಪನ್ನಗಳನ್ನು ಬಳಸುವ ಬದಲು ನಮ್ಮ ಊರಿನ ಸಂಸ್ಥೆಗಳ ಉತ್ಪನ್ನಗಳನ್ನು ಖರೀದಿಸಿ  ಸ್ವದೇಶೀ ವಸ್ತುಗಳಿಗೆ ಪ್ರೋತ್ಸಾಹ ನೀಡಬೇಕು.

ಇದು ನಮ್ಮದೇ ಸಂಸ್ಥೆ ಎಂದು ಭಾವಿಸಿ ಪ್ರತಿಯೊಬ್ಬರೂ ಆಕ್ಸಿಬ್ಲೂ ಸಂಸ್ಥೆಯ ಖನಿಜಯುಕ್ತ ನೀರು ಮತ್ತು ಆಕ್ಸಿಬ್ಲೂ ಜೂಸು ಬಳಸಬೇಕು.

ಸಮಾಜಕ್ಕೆ ಅನಿವಾರ್ಯ ವೆನಿಸಿರುವ ಬ್ಲೂಮೂನ್ ಕಂಪನಿಯ ಆಕ್ಸಿಬ್ಲೂ ಸಂಸ್ಥೆಯನ್ನು ಬೆಳೆಸಿ ಉಳಿಸುವುದು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಜನತೆಯ ಕರ್ತವ್ಯ.

ಈ ಸಂಸ್ಥೆಯ ಕಾರ್ಮಿಕರು, ವಿತರಕರು ಸಹಿತ ಸರ್ವರು ಕೂಡ ಸಂಸ್ಥೆಯ ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ.

ಆಕ್ಸಿಬ್ಲೂ ಖನಿಜಯುಕ್ತ ನೀರು ಮತ್ತು ಆಕ್ಸಿಬ್ಲೂ ಜೂಸು ಉತ್ಪನ್ನಗಳ ಪ್ರಚಾರದಲ್ಲಿ ಸರ್ವರೂ ಭಾಗೀದಾರರಾಗಿ ನಮ್ಮೂರಿನ ಉತ್ಪನ್ನಗಳ ಯಶಸ್ಸಿಗೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು. ಪಾಲುದಾರರಾದ ಇಸ್ಮಾಯಿಲ್ ಕೋಟೆಕಾರ್, ವಿತರಕರಾದ ಬಾತಿಷ್ ಅಜ್ಜಿನಡ್ಕ, ಡಿ.ಎ.ಅಶ್ರಫ್ ದೇರಳಕಟ್ಟೆ ಭಾಗವಹಿಸಿದರು.

ಪ್ರೊಡಕ್ಷನ್ ಮ್ಯಾನೇಜರ್ ವಿನೋದ್, ಅಹ್ಮದ್ ಸಲ್ಮಿ,ಶಾಝ್ ಉಳ್ಳಾಲ ಅತಿಥಿಗಳನ್ನು ಸ್ವಾಗತಿಸಿದರು.

ಆಕ್ಸಿಬ್ಲೂ ಸಂಸ್ಥೆಯ ವ್ಯವಸ್ಥಾಪಕ ಡಿ.ಐ. ಅಬೂಬಕರ್ ಕೈರಂಗಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು