5:10 AM Saturday7 - March 2026
ಬ್ರೇಕಿಂಗ್ ನ್ಯೂಸ್
ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ

ಇತ್ತೀಚಿನ ಸುದ್ದಿ

ಜನವರಿ 25ರಂದು ನಭೋ ಮಂಡಲದಲ್ಲಿ ನಡೆಯಲಿದೆ ವಿಸ್ಮಯ: 5 ಗ್ರಹಗಳ ಅಪರೂಪದ ಸಂಯೋಗ

19/01/2025, 21:26

ನವದೆಹಲಿ(reporterkarnataka.com): ಈ ತಿಂಗಳ ಮೂರನೇ ವಾರದ ವಾರಾಂತ್ಯದಲ್ಲಿ ಆಗಸದಲ್ಲಿ ಕೌತುಕವೊಂದು ಏರ್ಪಡಲಿದೆ.
ಈ ವಿಸ್ಮಯವನ್ನು ನೋಡಲು ವಿಶ್ವದ ವಿಜ್ಞಾನಿಗಳ ಜತೆ ಖಗೋಳ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಜನವರಿ 25ರಂದು ಖಗೋಳದಲ್ಲಿ ಈ ವಿಸ್ಮಯ ನಡೆಯಲಿದೆ. 25ರಂದು 5 ಗ್ರಹಳು ಕಾಣಿಸಿಕೊಳ್ಳಲಿದೆ. ಇದು ಬಹಳ ಅಪರೂಪದಲ್ಲಿ ನಡೆಯುವ ಗ್ರಹಗಳ ಸಂಯೋಗ ಆಗಲಿದೆ.
ಸೌರಮಂಡಲದ ಗ್ರಹಗಳಾದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಅಪರೂಪವಾದ ಸ್ಥಿತಿಯಲ್ಲಿ ತಮ್ಮ ಸಂಚಾರ ಮಾಡಲಿದೆ.
ಸೂರ್ಯಾಸ್ತದ ನಂತರ ಶುಕ್ರ ಮತ್ತು ಗುರು ಗ್ರಹಗಳು ಸಾಕಷ್ಟು ಪ್ರಕಾಶಮಾನವಾಗಿ ಹೊಳೆಯಲಿದೆ. ಇದರಲ್ಲಿ ಮಂಗಳ ಗ್ರಹ ಇನ್ನಷ್ಟು ಹೊಳಪಿನಲ್ಲಿ ಗೋಚರಿಸಲಿದೆ. ಬೇರೆ ಖಗೋಳ ಘಟನೆಗಳಿಗಿಂತ ವಿಭಿನ್ನವಾಗಿ ಈ ಗ್ರಹಗಳ ಸಂಯೋಗ ನಡೆಯಲಿದೆ. ಇದನ್ನು ಬರಿ ಕಣ್ಣಿನಲ್ಲೇ ನೋಡಬಹುದಾಗಿದೆ ಎಂದು ಖಗೋಳ
ತಜ್ಞರು ಹೇಳಿದ್ದಾರೆ.
ಸೌರಮಂಡಲದ ಹಲವು ಗ್ರಹಗಳು ಸಾಲಾಗಿ ಹತ್ತಿರ ಹತ್ತಿರವಿದ್ದಾಗೆ ಗೋಚರಿಸಲಿದೆ. ವಾಸ್ತವದಲ್ಲಿ ಇದು ಕೋಟಿಗಟ್ಟಲೆ ಮೈಲು ಅಂತರದಲ್ಲಿರುತ್ತದೆ.
ಈ ಅಪರೂಪದ ಘಟನೆಯಲ್ಲಿ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಆದರೆ, ಒಂದೇ ನೇರ ಸಾಲಿನಲ್ಲಿ ಇರುವುದಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು