ಇತ್ತೀಚಿನ ಸುದ್ದಿ
ಬೆಳಗ್ಗೆ 6ರಿಂದ ಕುಶಾಲನಗರದಿಂದ ಮಡಿಕೇರಿ ಕಡೆ ಬಸ್ ವ್ಯವಸ್ಥೆ ಕಲ್ಪಿಸಿ: ನಾಗರಿಕರ ಹಕ್ಕೊತ್ತಾಯ
19/04/2026, 14:02
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪ್ರತಿ ದಿನ ಕುಶಾಲನಗರದಿಂದ ಮಡಿಕೇರಿ ಕಡೆಗೆ ಬೆಳಗ್ಗಿನ ಜಾವಾ(5-8) ಗಂಟೆವರೆಗೆ ಪ್ರಯಾಣಿಕರು ಬಸ್ ಸೇವೆ ಇಲ್ಲದೆ ಪರದಾಡುತ್ತಿದ್ದಾರೆ. ಇಷ್ಟುದಿನ ಅಂತಾರರಾಜ್ಯ ಬಸ್ ಗಳನ್ನು ಅವಲಂಬಿಸುತ್ತಿದ್ದ ಕುಶಾಲನಗರದ ಪ್ರಯಾಣಿಕರು ಕೆಲವೊಂದು ಬಸ್ ಗಳು ಬಾರದ ಹಿನ್ನಲೆಯಲ್ಲಿ 6.45ಕ್ಕೆ ಕುಶಾಲನಗರ ಮಾರ್ಗವಾಗಿ ಮಂಗಳೂರು ಕಡೆ ತೆರಳುವ ಬಸ್ ಅವಲಂಬಿಸುವಂತಾಗಿದೆ.


ಕುಶಾಲನಗರದಲ್ಲೇ ಮಡಿಕೇರಿ ಕಡೆಗೆ ತೆರಳುವ ಮಂದಿ ಒಂದು ಬಸ್ ನಷ್ಟು ಇದ್ದು ಇದೆ ಬಸ್ ನಲ್ಲಿ ಪುರುಷರಾದರೆ ಅದೇಗೋ ಅಡ್ಜಸ್ಟ್ ಮಾಡಿಕೊಂಡು ಹೋದರೆ ಮಹಿಳೆಯರು, ವೃದ್ಧರು, ಮಕ್ಕಳ ಗತಿಯೇನು.ಕುಶಾಲನಗರದಿಂದ ಮಡಿಕೇರಿಯಿಂದ ಭಾಗಮಂಡಲ,ಬೆಟ್ಟತ್ತೂರು, ಅವಂದೂರು ಕಡೆಗೆ ಹೊರಡುವ ಬಸ್ ಗಳನ್ನು ನಂಬಿ ಬೆಳಗಿನ ಜಾವಾ ಹೊರಡುವವರಿದ್ದಾರೆ, ಅಲ್ಲಿ ಈ ಬಸ್ ಗಳು ಮಿಸ್ ಆದಲ್ಲಿ ತೋಟಕ್ಕೆ ಹೋಗುವವರು, ತುರ್ತು ಕೆಲಸ, ದೇವಸ್ಥಾನ, ಊರುಗಳಿಗೆ ಹೋಗುವವರು ಪರದಾಡುತ್ತಾರೆ. ದಯವಿಟ್ಟು ಕನಿಷ್ಠ ಕುಶಾಲನಗರದಿಂದ 6 ಗಂಟೆಗೆ ಮಡಿಕೇರಿವರೆಗೆ ಬಸ್ ಸೇವೆ ಒದಗಿಸಿ ಕೊಡುವಂತೆ ಸ್ಥಳೀಯ ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.












